ಆ್ಯಪ್ನಗರ

ರಾತ್ರಿಯಿಡೀ ಆಂಬ್ಯುಲೆನ್ಸ್ ಗಾಗಿ ಕಾದ ಸೋಂಕಿತ ಹುಬ್ಬಳ್ಳಿ ರೈಲ್ವೆ ಪೊಲೀಸರು

ಲಾಕ್ಡೌನ್ ನಿಯಮ ಉಲ್ಲಂಘಿಸುವ ಜನರ ಮೇಲೆ ಸದಾ ಕಣ್ಣಿಟ್ಟಿರುವ ಕೊರೊನಾ ವಾರಿಯರ್ಸ್ ಪೊಲೀಸರೇ ಕೊರೊನಾ ಪೀಡಿತರಾಗಿ, ಸಕಾಲಕ್ಕೆ ಆಂಬ್ಯುಲೆನ್ಸ್ ಬರದೆ ಪರದಾಡಿದ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.

Vijaya Karnataka Web 20 Jul 2020, 12:43 pm
ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಕೊರೊನಾ ವಾರಿಯರ್ಸ್‌ ಕೂಡ ಸಂಕಷ್ಟ ಎದುರಿಸುವಂತಾಗಿದೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್‌ ಬಾರದೇ ಮೂವರು ಸೋಂಕಿತ ರೈಲ್ವೆ ಪೊಲೀಸರು ರಾತ್ರಿಯಿಡೀ ಟೆರೆಸ್‌ ಮೇಲೆ ಕಾಯುವಂತಾಯಿತು.
Vijaya Karnataka Web Ambulance
ಪೊಲೀಸರಿಗೇ ಹೀಗಾದರೆ ಸಾಮಾನ್ಯರ ಪಾಡೇನು?


ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಉಡಾನ್‌ ಅಂತ್ಯೋದಯ ಕಲ್ಯಾಣ ಕೇಂದ್ರದಲ್ಲಿಉಳಿದುಕೊಂಡಿದ್ದ ರೈಲ್ವೆ ಪೊಲೀಸರು ಗುರುವಾರ ಸ್ವಾಬ್‌ ಟೆಸ್ಟಿಂಗ್‌ ಕೊಟ್ಟಿದ್ದರು. ಎಂದಿನಂತೆ ಶುಕ್ರವಾರ, ಶನಿವಾರ ಕರ್ತವ್ಯಕ್ಕೆ ಬಂದಿದ್ದ ಅವರಿಗೆ ಶನಿವಾರ ಮಧ್ಯಾಹ್ನ ಮೆಸೇಜ್‌ ಮೂಲಕ ಪಾಸಿಟಿವ್‌ ಇರುವ ಬಗ್ಗೆ ತಿಳಿಸಲಾಗಿದೆ.

ಇತರರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಮೂವರೂ ಕಲ್ಯಾಣ ಕೇಂದ್ರದ ಟೆರೆಸ್‌ ಮೇಲೆ ತೆರಳಿ ಆಂಬ್ಯುಲೆನ್ಸ್‌ಗಾಗಿ ಕಾಯುತ್ತಿದ್ದರು. ಸಕಾಲಕ್ಕೆ ಆಂಬ್ಯುಲೆನ್ಸ್‌ ಬಾರದ್ದರಿಂದ ಮೂವರಲ್ಲಿ ಇಬ್ಬರು ಅಲ್ಲಿಯೇ ಇದ್ದ ಸಣ್ಣ ಕೋಣೆಯಲ್ಲಿ ಕುಳಿತಿದ್ದಾರೆ. ಇನ್ನೊಬ್ಬರು ಅನಿವಾರ್ಯವಾಗಿ ಟೆರೆಸ್‌ ಮೇಲೆಯೇ ನಿಂತುಕೊಳ್ಳಬೇಕಾಯಿತು.

ಧಾರವಾಡದ ಯಾವ್ಯಾವ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ

ಎಷ್ಟೊತ್ತಾದರೂ ಆಂಬ್ಯುಲೆನ್ಸ್‌ ಬಾರದ್ದರಿಂದ ಮತ್ತೆ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಆವಾಗ ನಿಮ್ಮದು ಇನ್ನೂ ಟೆಸ್ಟ್‌ ಇದೆ, ಸ್ವಲ್ಪ ಕಾಯಿರಿ ಎಂಬ ಉತ್ತರ ಬಂದಿದೆ. ಇಷ್ಟೆಲ್ಲ ಘಟನಾವಳಿಗಳು ರಾತ್ರಿ ಮುಗಿದು ಬೆಳಗಿನವರೆಗೂ ಮುಂದುವರಿದಿದೆ. ಅಂತೂ ಭಾನುವಾರ ಬೆಳಗ್ಗೆ ಆಂಬ್ಯುಲೆನ್ಸ್‌ ಆಗಮಿಸಿ ಅವರನ್ನು ಕರೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಡಾನ್‌ ಅಂತ್ಯೋದಯ ಕೇಂದ್ರದ ಒಂದೇ ಕಟ್ಟಡದಲ್ಲಿ 30-40 ಸಿಬ್ಬಂದಿಗಳಿದ್ದು, ಎಲ್ಲರೂ ಗಾಬರಿಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ