ಆ್ಯಪ್ನಗರ

ಹತ್ತಿ ಖರೀದಿ ಪ್ರಕ್ರಿಯೆ ಸ್ಥಗಿತ

ಧಾರವಾಡ: 2019-20ನೇ ಸಾಲಿಗೆ ಭಾರತೀಯ ಹತ್ತಿ ನಿಗಮದ ವತಿಯಿಂದ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿಡಿ.12ರಿಂದ ಆರಂಭಿಸಲಾಗಿದ್ದ ಹತ್ತಿ ಖರೀದಿ ಪ್ರಕ್ರಿಯೆ ಜ.3ರಿಂದ 8ರವರೆಗೆ ಸ್ಥಗಿತಗೊಳಿಸಲಾಗಿದೆ.

Vijaya Karnataka 2 Jan 2020, 5:00 am
ಧಾರವಾಡ: 2019-20ನೇ ಸಾಲಿಗೆ ಭಾರತೀಯ ಹತ್ತಿ ನಿಗಮದ ವತಿಯಿಂದ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿಡಿ.12ರಿಂದ ಆರಂಭಿಸಲಾಗಿದ್ದ ಹತ್ತಿ ಖರೀದಿ ಪ್ರಕ್ರಿಯೆ ಜ.3ರಿಂದ 8ರವರೆಗೆ ಸ್ಥಗಿತಗೊಳಿಸಲಾಗಿದೆ.
Vijaya Karnataka Web cotton purchase process breakdown
ಹತ್ತಿ ಖರೀದಿ ಪ್ರಕ್ರಿಯೆ ಸ್ಥಗಿತ


ರೈತರಿಂದ 23,864.15 ಕ್ವಿಂಟಲ್‌ ಹತ್ತಿ ಖರೀದಿಸಲಾಗಿದೆ. ಡಿ.23 ರಿಂದ ವಾಹನ ಹೆಚ್ಚಾಗಿದ್ದು, ಜ.2ರವರೆಗೆ ಟೋಕನ್‌ ನೀಡಿದ ರೈತರಿಂದ ಹತ್ತಿ ಖರೀದಿಸಲಾಗುತ್ತದೆ. ಹೊಸದಾಗಿ ಬಂದ ರೈತರಿಂದ ಹತ್ತಿ ಖರೀದಿಸಲಾಗುವುದಿಲ್ಲ. ಇಲ್ಲಿಯವರೆಗೂ ಹತ್ತಿ ಖರೀದಿಸಿ ಸಂಗ್ರಹಿಸಿದ ಗೋದಾಮು ಭರ್ತಿ ಆಗಿದ್ದು, ಹತ್ತಿ ಜಿನ್ನಿಂಗ್‌ ಫ್ಯಾಕ್ಟರಿಗಳಲ್ಲಿಸ್ಥಳದ ಅಭಾವ ಇರುವುದರಿಂದ ಹಾಗೂ ರೈತರಿಂದ ಖರೀದಿಸಿದ ಹತ್ತಿಯ ಹಣ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಪಾವತಿ ಮಾಡುವುದು, ಬಿಲ್‌ ಎಂಟ್ರಿ ಮಾಡುವ ಸಲುವಾಗಿ ಜ.3ರಿಂದ 8ರವರೆಗೆ ಹತ್ತಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಹೊಸದಾಗಿ ರೈತರು ಹತ್ತಿ ಖರೀದಿ ಕೇಂದ್ರಕ್ಕೆ ಹತ್ತಿ ತೆಗೆದುಕೊಂಡು ಬರಬಾರದು.

ಹತ್ತಿ ಖರೀದಿ ಪ್ರಕ್ರಿಯೆಯನ್ನು ಜ.9ರಿಂದ ಪ್ರತಿ ದಿನಕ್ಕೆ ಹತ್ತಿ ಲೋಡ್‌ ಮಾಡಿಕೊಂಡು ಬರುವ 50 ಜನ ರೈತರಿಗೆ ಮಾತ್ರ ಚೀಟಿ (ಟೋಕನ್‌) ನೀಡಿ ಖರೀದಿಸಲಾಗುವುದು. ಭಾರತೀಯ ಹತ್ತಿ ನಿಗಮವು ರೈತರಿಂದ ಹತ್ತಿಯನ್ನು ಸೀಜನ್‌ ಮುಗಿಯುವವರಗೆ ಖರೀದಿಸಲಾಗುತ್ತದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಮಾಹಿತಿಗಾಗಿ ಮೊ.8618521546 ಹಾಗೂ 9343101108 ಅಥವಾ ಧಾರವಾಡ ಎಪಿಎಂಸಿ ಕಚೇರಿ ಸಂಪರ್ಕಿಸಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ