ಆ್ಯಪ್ನಗರ

‘ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತ’

ಧಾರವಾಡ : ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಳ್ಳಲು ಕೇಂದ್ರ ಸರಕಾರದ ಮುಂದಾಲೋಚನೆ ಇಲ್ಲದ ನಿರ್ಣಯಗಳೇ ಕಾರಣ ಎಂದು ಜನತಾದಳ (ಸಂಯುಕ್ತ) ಡಾ.ಎಂ.ಪಿ. ನಾಡಗೌಡರ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜಖಾನ ಹವಾಲ್ದಾರ ತಿಳಿಸಿದ್ದಾರೆ.

Vijaya Karnataka 20 Aug 2019, 5:00 am
ಧಾರವಾಡ : ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಳ್ಳಲು ಕೇಂದ್ರ ಸರಕಾರದ ಮುಂದಾಲೋಚನೆ ಇಲ್ಲದ ನಿರ್ಣಯಗಳೇ ಕಾರಣ ಎಂದು ಜನತಾದಳ (ಸಂಯುಕ್ತ) ಡಾ.ಎಂ.ಪಿ. ನಾಡಗೌಡರ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜಖಾನ ಹವಾಲ್ದಾರ ತಿಳಿಸಿದ್ದಾರೆ.
Vijaya Karnataka Web countrys economic situation worsens
‘ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತ’


ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದ ಆರ್ಥಿಕ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ಕುಂಠಿತವಾಗಿದ್ದು, ಇದರಿಂದ ಕಾರ್ಮಿಕರು, ಬಡವರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 5.8ಕ್ಕೆ ಇಳಿದಿದೆ. ಡಾಲರ್‌ ಎದುರು ರೂಪಾಯಿ ದರ ಕುಸಿಯುತ್ತಲಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಖಾಸಗಿ ಮತ್ತು ಸರಕಾರಿ ಬಂಡವಾಳ ಹೂಡಿಕೆಯ ಪ್ರಮಾಣ ಕಡಿಮೆ ಆಗಿದೆ. ರಫ್ತು ಪ್ರಮಾಣ ಕುಸಿಯುತ್ತಿದೆ. ಬ್ಯಾಂಕ್‌ನಲ್ಲಿ ಹೆಚ್ಚಾಗಿರುವ ಅನುತ್ಪಾದಕ ಆಸ್ತಿಯಿಂದ ಹಣದ ಕೊರತೆ ಇದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಗದು ಪ್ರಮಾಣದ ಕೊರತೆ ಉದ್ಬವವಾಗಿದ್ದು, ಇದನ್ನು ಬಗೆಹರಿಸಲು ಸರಕಾರ ಅವಶ್ಯಕ ಕ್ರಮಗಳನ್ನು ಕೈಗೊಂಡಿಲ್ಲ. 2019-20ರ ಕೇಂದ್ರ ಸರಕಾರದ ನಿರಾಶದಾಯಕ ಬಜೆಟ್‌ನಿಂದ ಖಾಸಗಿ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿಲ್ಲ. ಆಟೊಮೊಬೈಲ್‌, ಉಕ್ಕಿನ ಕೈಗಾರಿಕೆಗಳು ಹಂತ ಹಂತವಾಗಿ ಮುಚ್ಚುತ್ತಿವೆ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ತಿಂಗಳಿಂದ 3.50 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ಇಂತಹ ಪರಿಸ್ಥಿತಿ ಉಲ್ಬಣಗೊಳ್ಳಲು ಕೇಂದ್ರ ಸರಕಾರವೇ ಕಾರಣ. ಆದರೆ, ಸರಕಾರ ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರಕಾರ ಇನ್ನಾದರೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ವಿತ್ತಿಯ ಕ್ರಮಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ