ಧಾರವಾಡ : ಕರ್ನಾಟಕ ವಿಶ್ವ ವಿದ್ಯಾಲಯದ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದ ಗುತ್ತಿಗೆ ಪಡೆದಿದ್ದ ಶೆಟ್ಟಿ ಕನ್ಸಟ್ರಕ್ಷನ್ ಪೈ. ಲಿಂ. ಕಂಪನಿಗೆ 2.27 ಕೋಟಿ ರೂ. (ಶೇ. 15 ವಾರ್ಷಿಕ ಬಡ್ಡಿ ಸೇರಿಸಿ) ನಷ್ಟ ಪರಿಹಾರ ನೀಡಲು ಧಾರವಾಡ 1ನೇ ಅಧಿಕ ಹಿರಿಯ ದಿವಾಣಿ ನ್ಯಾಯಾಲಯ ಗುರುವಾರ ಕವಿವಿಗೆ ಆದೇಶ ನೀಡಿದೆ.
1996 ಜ. 25ರಂದು ಕವಿವಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. 1.88ಕೋಟಿ ರೂ. ಗಳಿಗೆ ಶೆಟ್ಟಿ ಕನ್ಸಟ್ರಕ್ಷನ್ ಗುತ್ತಿಗೆ ಪಡೆದಿತ್ತು. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇದರಿಂದ ನಷ್ಟವಾಗಿದೆ ಎಂದು ಗುತ್ತಿಗೆ ಪಡೆದ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಇಂದಿರಾ ಚೆಟ್ಟಿಯಾರ್ ಕವಿವಿಯು ಎರಡು ತಿಂಗಳೊಳಗಾಗಿ ನಷ್ಟ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಕ್ರೀಡಾಂಗಣ ನಿರ್ಮಾಣದ ಕಾರ್ಯಾದೇಶ ಸಿಕ್ಕ ನಂತರ ಅಲ್ಲಿನ ಮೈದಾನ ಜಾಗೆ, ಗಡಿಗಂಟೆಗಳನ್ನು ಗುತ್ತಿಗೆ ಕಂಪನಿ ತೆರವುಗೊಳಿಸಿ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಆದರೆ, ಅಲ್ಲಿದ್ದ ಹೈಟೆನ್ಷನ್ ವೈಯರ್ ತೆರವು ಮಾಡಲಿಲ್ಲ. ಸೈಟ್ ಹಸ್ತಾತರಿಸಲು ಹಾಗೂ ವಿನ್ಯಾಸ ನೀಡಲು ವಿಳಂಬ ಮಾಡಿತು. ಸಕಾಲದಲ್ಲಿ ಹಣ ಬಿಡುಗಡೆ ಮಾಡಲಿಲ್ಲ. ಇದರಿಂದ ಕಾಮಗಾರಿ ವಿಳಂಬ ಆಗಿದೆ ಎಂದು ಗುತ್ತಿಗೆ ಕಂಪನಿ ಟೆಂಡರ್ ಮೊತ್ತ ನವೀಕರಿಸಲು ಮನವಿ ಮಾಡಿತ್ತು. ಆದರೆ, ಕವಿವಿ ಕಾಮಗಾರಿಗೆ ತಡೆ ನೀಡಿತ್ತು.
ಈ ಎಲ್ಲ ಕಾರಣಗಳಿಂದ ಕ್ರೀಡಾಂಗಣ ಕಾಮಗಾರಿ ಸ್ಥಗಿತಗೊಂಡಿದೆ. ಈ ವೇಳೆ ಅಲ್ಲಿ ಇಟ್ಟಿದ್ದ ಕಟ್ಟಡದ ಕಾಮಗಾರಿ ವಸ್ತುಗಳು ಕಳವಾಗಿವೆ. ಕಾಮಗಾರಿಗೆ ವ್ಯಯಸಿದ ವೆಚ್ಚವೂ ನಷ್ಟ ಆಗಿದೆ ಎಂದು ಗುತ್ತಿಗೆ ಕಂಪನಿ 2005ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ 2.27ಕೋಟಿ ರೂ. ನಷ್ಟದ ಜತೆಗೆ ಅಂದಿನಿಂದ ಹಣ ಸಂದಾಯ ಮಾಡುವವರೆಗಿನ ಅವಧಿ ಲೆಕ್ಕ ಹಾಕಿ ವಾರ್ಷಿಕ ಶೇ. 15ರಂತೆ ಬಡ್ಡಿ ಪಾವತಿಸಲು ಆದೇಶಿಸಿದೆ. ಇದರ ಮೊತ್ತ ಅಂದಾಜು 7ಕೋಟಿ ರೂ. ದಾಟಲಿದೆ.
ಅರ್ಜಿದಾರರ ಪರವಾಗಿ ಅರುಣ ಎಲ್. ನೀಲೋಪಂಥ ಹಾಗೂ ವಿವಿ ಪರವಾಗಿ ಎನ್.ಎಸ್. ಎಡ್ವರ್ಡ್ ವಾದ ಮಂಡಿಸಿದ್ದರು.
1996 ಜ. 25ರಂದು ಕವಿವಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. 1.88ಕೋಟಿ ರೂ. ಗಳಿಗೆ ಶೆಟ್ಟಿ ಕನ್ಸಟ್ರಕ್ಷನ್ ಗುತ್ತಿಗೆ ಪಡೆದಿತ್ತು. ಆದರೆ, ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇದರಿಂದ ನಷ್ಟವಾಗಿದೆ ಎಂದು ಗುತ್ತಿಗೆ ಪಡೆದ ಕಂಪನಿ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಇಂದಿರಾ ಚೆಟ್ಟಿಯಾರ್ ಕವಿವಿಯು ಎರಡು ತಿಂಗಳೊಳಗಾಗಿ ನಷ್ಟ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಕ್ರೀಡಾಂಗಣ ನಿರ್ಮಾಣದ ಕಾರ್ಯಾದೇಶ ಸಿಕ್ಕ ನಂತರ ಅಲ್ಲಿನ ಮೈದಾನ ಜಾಗೆ, ಗಡಿಗಂಟೆಗಳನ್ನು ಗುತ್ತಿಗೆ ಕಂಪನಿ ತೆರವುಗೊಳಿಸಿ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿತ್ತು. ಆದರೆ, ಅಲ್ಲಿದ್ದ ಹೈಟೆನ್ಷನ್ ವೈಯರ್ ತೆರವು ಮಾಡಲಿಲ್ಲ. ಸೈಟ್ ಹಸ್ತಾತರಿಸಲು ಹಾಗೂ ವಿನ್ಯಾಸ ನೀಡಲು ವಿಳಂಬ ಮಾಡಿತು. ಸಕಾಲದಲ್ಲಿ ಹಣ ಬಿಡುಗಡೆ ಮಾಡಲಿಲ್ಲ. ಇದರಿಂದ ಕಾಮಗಾರಿ ವಿಳಂಬ ಆಗಿದೆ ಎಂದು ಗುತ್ತಿಗೆ ಕಂಪನಿ ಟೆಂಡರ್ ಮೊತ್ತ ನವೀಕರಿಸಲು ಮನವಿ ಮಾಡಿತ್ತು. ಆದರೆ, ಕವಿವಿ ಕಾಮಗಾರಿಗೆ ತಡೆ ನೀಡಿತ್ತು.
ಈ ಎಲ್ಲ ಕಾರಣಗಳಿಂದ ಕ್ರೀಡಾಂಗಣ ಕಾಮಗಾರಿ ಸ್ಥಗಿತಗೊಂಡಿದೆ. ಈ ವೇಳೆ ಅಲ್ಲಿ ಇಟ್ಟಿದ್ದ ಕಟ್ಟಡದ ಕಾಮಗಾರಿ ವಸ್ತುಗಳು ಕಳವಾಗಿವೆ. ಕಾಮಗಾರಿಗೆ ವ್ಯಯಸಿದ ವೆಚ್ಚವೂ ನಷ್ಟ ಆಗಿದೆ ಎಂದು ಗುತ್ತಿಗೆ ಕಂಪನಿ 2005ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ 2.27ಕೋಟಿ ರೂ. ನಷ್ಟದ ಜತೆಗೆ ಅಂದಿನಿಂದ ಹಣ ಸಂದಾಯ ಮಾಡುವವರೆಗಿನ ಅವಧಿ ಲೆಕ್ಕ ಹಾಕಿ ವಾರ್ಷಿಕ ಶೇ. 15ರಂತೆ ಬಡ್ಡಿ ಪಾವತಿಸಲು ಆದೇಶಿಸಿದೆ. ಇದರ ಮೊತ್ತ ಅಂದಾಜು 7ಕೋಟಿ ರೂ. ದಾಟಲಿದೆ.
ಅರ್ಜಿದಾರರ ಪರವಾಗಿ ಅರುಣ ಎಲ್. ನೀಲೋಪಂಥ ಹಾಗೂ ವಿವಿ ಪರವಾಗಿ ಎನ್.ಎಸ್. ಎಡ್ವರ್ಡ್ ವಾದ ಮಂಡಿಸಿದ್ದರು.