ಆ್ಯಪ್ನಗರ

ಮಕ್ಕಳಲ್ಲಿವಿಜ್ಞಾನ ಆಸಕ್ತಿ ಬೆಳೆಸಿ

ಕುಂದಗೋಳ : ಮಕ್ಕಳಲ್ಲಿವಿಜ್ಞಾನ ಕಲೆ, ಶೋಧನೆ, ಆವಿಷ್ಕಾರ ನಡೆಸುವ ಕೌಶಲ ಬೆಳೆಯುವಂತೆ ಶಿಕ್ಷಕರು ಪ್ರೇರೇಪಿಸಿದಾಗ ಮಾತ್ರ ವಿಜ್ಞಾನದಲ್ಲಿವಿದ್ಯಾರ್ಥಿಗಳು ಸರಳತೆ ಹೊಂದಲು ಸಾಧ್ಯ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆಯ ಸನ್‌ಶೈನ್‌ ಶಾಲಾಧ್ಯಕ್ಷ ಬಸುರಾಜ ಕೊಪ್ಪದ ಹೇಳಿದರು.

Vijaya Karnataka 10 Jan 2020, 5:00 am
ಕುಂದಗೋಳ : ಮಕ್ಕಳಲ್ಲಿವಿಜ್ಞಾನ ಕಲೆ, ಶೋಧನೆ, ಆವಿಷ್ಕಾರ ನಡೆಸುವ ಕೌಶಲ ಬೆಳೆಯುವಂತೆ ಶಿಕ್ಷಕರು ಪ್ರೇರೇಪಿಸಿದಾಗ ಮಾತ್ರ ವಿಜ್ಞಾನದಲ್ಲಿವಿದ್ಯಾರ್ಥಿಗಳು ಸರಳತೆ ಹೊಂದಲು ಸಾಧ್ಯ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆಯ ಸನ್‌ಶೈನ್‌ ಶಾಲಾಧ್ಯಕ್ಷ ಬಸುರಾಜ ಕೊಪ್ಪದ ಹೇಳಿದರು.
Vijaya Karnataka Web create a science interest in children
ಮಕ್ಕಳಲ್ಲಿವಿಜ್ಞಾನ ಆಸಕ್ತಿ ಬೆಳೆಸಿ


ಪಟ್ಟಣದ ಸನ್‌ಶೈನ್‌ ಆಂಗ್ಲಮಾಧ್ಯಮ ಶಾಲೆ ಹಾಗೂ ಅಗಸ್ತ ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಹಯೋಗದಲ್ಲಿಬುಧವಾರ ಸನ್‌ಶೈನ್‌ ಶಾಲೆ ಆವರಣದಲ್ಲಿನಡೆದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪ್ರಾತ್ಯಕ್ಷಿಕೆಯಲ್ಲಿವಿದ್ಯಾರ್ಥಿಗಳು ವಿಜ್ಞಾನ, ಚಿತ್ರಕಲೆ, ಗಣಿತ ಸೇರಿದಂತೆ ಹತ್ತು ಹಲವಾರು ಉಪಕರಣ ಪ್ರದರ್ಶಿಸಿ, ತಮ್ಮ ಹಿರಿಮೆ ಹೆಚ್ಚಿಸಿಕೊಂಡರು. ಪ್ರದರ್ಶನದಲ್ಲಿಪಟ್ಟಣದ ಅನೇಕ ಶಾಲೆಯ ಮಕ್ಕಳು, ಶಿಕ್ಷಕರು ಪಾಲ್ಗೊಂಡು ಉಪಕರಣಗಳನ್ನು ಮೆಚ್ಚಿಕೊಂಡರು.

ಬಸವರಾಜ ಬಾಳಿಕಾಯಿ, ಶಿವಣ್ಣ ಗಂಗಾಯಿ, ಉಮೇಶ ಬೀಡನಾಳ, ಬಸುರಾಜ ಗಂಗಾಯಿ ಹಾಗೂ ಮುಖ್ಯ ಶಿಕ್ಷಕಿ ಶಶಿಕಲಾ ಬಡಿಗೇರ, ಅಗಸ್ತ ್ಯ ಸಂಸ್ಥೆಯ ಬಸುರಾಜ ಹಿರೇಮಠ ಮತ್ತು ನೂರಾರು ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ