ಆ್ಯಪ್ನಗರ

ಸಿಆರ್‌ಎಫ್‌ ಕಾಮಗಾರಿ ವೀಕ್ಷಣೆ

ಹುಬ್ಬಳ್ಳಿ : ಏನ್ರಿ ಬರೊಬ್ಬರಿ ಐದು ಬಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಶೀಘ್ರವಾಗಿ ಕೈಗೊಳ್ಳುವಂತೆ ಸೂಚಿಸಿದ್ದರೂ, ಎಲ್ಲವೂ ಮೊದಲಿನ ಸ್ಥಿತಿಯಲ್ಲಿಯೇ ಇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

Vijaya Karnataka 8 Jun 2019, 5:00 am
ಹುಬ್ಬಳ್ಳಿ : ಏನ್ರಿ ಬರೊಬ್ಬರಿ ಐದು ಬಾರಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಶೀಘ್ರವಾಗಿ ಕೈಗೊಳ್ಳುವಂತೆ ಸೂಚಿಸಿದ್ದರೂ, ಎಲ್ಲವೂ ಮೊದಲಿನ ಸ್ಥಿತಿಯಲ್ಲಿಯೇ ಇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
Vijaya Karnataka Web crf work observation
ಸಿಆರ್‌ಎಫ್‌ ಕಾಮಗಾರಿ ವೀಕ್ಷಣೆ


ಶುಕ್ರವಾರ ನಗರದ ವಿವಿಧೆಡೆ ಸಿಆರ್‌ಎಫ್‌ ಅನುದಾನದಡಿ ಕೈಗೊಂಡ ಕಾಮಗಾರಿ ಪರಿಶೀಲನೆ ವೇಳೆ ಅಧಿಕಾರಿಗಳ ಮೇಲೆ ಅವರು ಹರಿಹಾಯ್ದರು.

ಅಧಿಕಾರಿಗಳು ಮಾಡುತ್ತಿರುವ ಕೆಲಸವಾದರೂ ಏನು? ಎಲ್ಲವನ್ನು ನಾವೇ ಮುಂದೆ ನಿಂತು ಮಾಡಿಸುವುದಾದರೆ, ನೀವೆಲ್ಲಾ ಏಕೆ ಬೇಕು? ಎಂದು ತರಾಟೆಗೆ ತೆಗೆದುಕೊಂಡರು.

ಕಮರಿಪೇಟ್‌, ವಿಕಾಸನಗರ, ವಿದ್ಯಾನಗರ ಮತ್ತು ಉಣಕಲ್‌ ಕ್ರಾಸ್‌ನಿಂದ ಇಂಡಿಪಂಪ್‌ ವರೆಗೆ ಕೈಗೊಂಡ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಅವರು, ಸಣ್ಣ ಪುಟ್ಟ ಸಮಸ್ಯೆ ಮತ್ತು ಅತಿಕ್ರಮಣಗೊಂಡ ಸ್ಥಳ ತೆರವುಗೊಳಿಸಿ ಶೀಘ್ರಗತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ವಿಕಾಸನಗರದಲ್ಲಿ ಕಾಮಗಾರಿ ಕಳಪೆಯಾಗಿದ್ದು, ಇದನ್ನು ಪುನರ್‌ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹೇಶ ಬುರ್ಲಿ, ಲಕ್ಷ್ಮಣ ಗಂಡಗಾಳೇಕರ, ರವಿ ನಾಯ್ಕ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ