ಆ್ಯಪ್ನಗರ

ಟೀಕಾಕಾರರಿಗೆ ಡಿ.5 ರ ನಂತರ ಉತ್ತರ:ಕುಮಾರಸ್ವಾಮಿ

ಹಾವೇರಿ: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸರಕಾರ ಕೈಗೊಂಡಿರುವ ಪರಿಹಾರ ನಿರೀಕ್ಷಿತ ಪ್ರಮಾಣದಲ್ಲಿತೃಪ್ತಿ ಕೊಟ್ಟಿಲ್ಲ. ಇನ್ನೂ ಒಂದು ತಿಂಗಳು ಕಾಯ್ದು ನನ್ನ ನಡೆ ಪ್ರಕಟಿಸುವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆ ಬಗ್ಗೆ ಟೀಕೆ ಮಾಡುತ್ತಿರುವ ಮಾಜಿ ಸಿಎಂ ಶೆಟ್ಟರ್‌ ಸೇರಿದಂತೆ ಎಲ್ಲಬಿಜೆಪಿ ಟೀಕಾಕಾರರಿಗೆ ಡಿಸೆಂಬರ್‌ 5ರ ನಂತರವೇ ಉತ್ತರಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka 29 Oct 2019, 5:11 pm
ಹಾವೇರಿ: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸರಕಾರ ಕೈಗೊಂಡಿರುವ ಪರಿಹಾರ ನಿರೀಕ್ಷಿತ ಪ್ರಮಾಣದಲ್ಲಿತೃಪ್ತಿ ಕೊಟ್ಟಿಲ್ಲ. ಇನ್ನೂ ಒಂದು ತಿಂಗಳು ಕಾಯ್ದು ನನ್ನ ನಡೆ ಪ್ರಕಟಿಸುವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆ ಬಗ್ಗೆ ಟೀಕೆ ಮಾಡುತ್ತಿರುವ ಮಾಜಿ ಸಿಎಂ ಶೆಟ್ಟರ್‌ ಸೇರಿದಂತೆ ಎಲ್ಲಬಿಜೆಪಿ ಟೀಕಾಕಾರರಿಗೆ ಡಿಸೆಂಬರ್‌ 5ರ ನಂತರವೇ ಉತ್ತರಿಸುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web critics reply after d5 kumaraswamy
ಟೀಕಾಕಾರರಿಗೆ ಡಿ.5 ರ ನಂತರ ಉತ್ತರ:ಕುಮಾರಸ್ವಾಮಿ


ಹಾವೇರಿಯಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಆಗಸ್ಟ್‌ ತಿಂಗಳಿನಿಂದ ಸರಕಾರದ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವೆ. ಎಲ್ಲಿಯೂ ಟೀಕೆ ಮಾಡಿಲ್ಲ. ಮುಂಗಾರು ಮತ್ತು ಹಿಂಗಾರು ಏಕ ಕಾಲದಲ್ಲೇ ಕೈಕೊಟ್ಟಿರುವುದರಿಂದ ಪರಿಹಾರ ನೀಡುವಿಕೆ ಒಂದರ್ಥದಲ್ಲಿಸರಕಾರಕ್ಕೆ ಚಾಲೇಂಜ್‌ ಆಗಿದೆ.

ನೆರೆ ಸಂದರ್ಭದಲ್ಲಿಸರಕಾರ ಬೀಳಿಸುವ ಮತ್ತು ಜನರಲ್‌ ಇಲೆಕ್ಷನ್‌ ನಡೆಸುವುದು ನನಗಿಷ್ಟವಿಲ್ಲ. ಇದನ್ನೇ 'ಕುಮಾರಸ್ವಾಮಿ ಬಿಜೆಪಿ ಪರ' ಎಂದು ತಪ್ಪಾಗಿ ಭಾವಿಸಿ ಹೇಳಿಕೆಗಳನ್ನು ನೀಡಿದರೆ ನಾನೇನು ಮಾಡಲಿ? ಎಂದರು.

ಸಿದ್ಧರಾಮಯ್ಯ ಕೋಮುವಾದಿ!
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಹಿಂದೆ ಯಾವ ಸಮಾಜ, ಯಾರ ಪರವಾಗಿದ್ದಾರೆ ಎನ್ನುವ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಅತ್ಯಂತ ಸಣ್ಣತನದ್ದು. ಈ ಕುಮಾರಸ್ವಾಮಿ ಕೋಮುವಾದಿ ಬಿಜೆಪಿ ಜತೆ ಕೈಜೋಡಿಸಿದ್ದರು ಎಂದು ಹೇಳಿಕೊಂಡು ತಿರುಗುತ್ತಿರುವುದು ಸಹ ಜಾತಿ ರಾಜಕಾರಣವಲ್ಲದೇ ಮತ್ತೇನು? ಸಿದ್ದರಾಮಯ್ಯ ಸಹ ಕೋಮುವಾದಿ ಎನ್ನುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ.

ಬೈಇಲೆಕ್ಷನ್‌ ಬಿಜೆಪಿಗೆ ಕಷ್ಟ
ಎಲ್ಲ15 ಕ್ಷೇತ್ರಗಳಲ್ಲೂನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಬಿಜೆಪಿಗೆ ಬೈಇಲೆಕ್ಷನ್‌ ಕಷ್ಟವಾಗಲಿದೆ. ಕನಿಷ್ಠ 7ರಿಂದ 8ಕ್ಷೇತ್ರಗಳಲ್ಲಿನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಘು ಟೀಕೆ ಸಲ್ಲ
ನಮಗೆ ಕೈಕೊಟ್ಟು ಸರಕಾರದ ಪತನಕ್ಕೆ ಕಾರಣರಾಗಿ ಈಗ ಬಿಜೆಪಿಯಿಂದ ಸ್ಪರ್ಧೆಗಿಳಿಯುತ್ತಿರುವ ಅನರ್ಹರಿಗೆ ಒಳ್ಳೆಯದಾಗಲಿ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಕುಮಾರಸ್ವಾಮಿ ಅನುದಾನ ಕೊಡಲಿಲ್ಲಎಂದು ಲಘುವಾಗಿ ಮಾತನಾಡಬಾರದು ಎಂದು ಪರೋಕ್ಷವಾಗಿ ಮಾಜಿ ಶಾಸಕ ಬಿ.ಸಿ. ಪಾಟೀಲ ಅವರಿಗೆ ಟಾಂಗ್‌ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ, ಜಿಲ್ಲಾಧ್ಯಕ್ಷ ಅಶೋಕ ಬೇವಿನಮರ, ಡಾ.ಸಂಜಯ ಡಾಂಗೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ