ಆ್ಯಪ್ನಗರ

ಬಿಆರ್‌ಟಿಎಸ್‌ ಬಸ್‌ದಲ್ಲಿ ಸಿಎಸ್‌ !

ಹುಬ್ಬಳ್ಳಿ : ಮಹಾನಗರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ(ಸಿಎಸ್‌) ವಿಜಯಭಾಸ್ಕರ್‌, ಬಿಆರ್‌ಟಿಎಸ್‌ ಚಿಗರಿ ಬಸ್‌ದಲ್ಲಿ ಸಂಚರಿಸಿ ಗಮನ ಸೆಳೆದರು.

Vijaya Karnataka 13 Dec 2018, 5:00 am
ಹುಬ್ಬಳ್ಳಿ : ಮಹಾನಗರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ(ಸಿಎಸ್‌) ವಿಜಯಭಾಸ್ಕರ್‌, ಬಿಆರ್‌ಟಿಎಸ್‌ ಚಿಗರಿ ಬಸ್‌ದಲ್ಲಿ ಸಂಚರಿಸಿ ಗಮನ ಸೆಳೆದರು.
Vijaya Karnataka Web crt on brts bus
ಬಿಆರ್‌ಟಿಎಸ್‌ ಬಸ್‌ದಲ್ಲಿ ಸಿಎಸ್‌ !


ಈ ಸಂದರ್ಭದಲ್ಲಿ ಅಧಿಕಾರಿಗಳ ಜತೆ ಚರ್ಚಿಸಿದ ಸಿಎಸ್‌, ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. ಬಸ್‌ನಿಲ್ದಾಣ ಪ್ರವೇಶಿಸುವ ಮಾರ್ಗದಲ್ಲಿರುವ ಬ್ಯಾರಿಕೇಡ್‌ ಬದಲಾಗಿ ಸ್ವಯಂ ಚಾಲಿತ ಗೇಟ್‌ ಅಳವಡಿಸುವಂತೆ ಸಲಹೆ ಮಾಡಿದರು.

ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದು ಫುಟಪಾತ್‌, ಮಾರ್ಕಿಂಗ್‌ ಹಾಗೂ ಬೀದಿ ದೀಪ ಕೆಲಸ ಬಾಕಿ ಇದೆ ಎಂದು ನಗರ ಭೂ ಸಾರಿಗೆ ಇಲಾಖೆ ಆಯುಕ್ತ ದರ್ಪಣ್‌ ಜೈನ್‌ ಮಾಹಿತಿ ನೀಡಿದರು.

ಅಧಿಕಾರಿಗಳ ಸಭೆ : ಇದಕ್ಕೂ ಮುನ್ನ ದರ್ಪಣ್‌ ಜೈನ್‌, ಹುಬ್ಬಳ್ಳಿ ವಾಕರಸಾ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ವಾಕರಸಾ ಸಂಸ್ಥೆ ಮತ್ತು ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆ ನಡೆಸಿದರು. ಮಿಕ್ಸಡ್‌ ಟ್ರಾಫಿಕ್‌ ಲೈನ್‌(ಎಂಟಿಎಲ್‌)ದಲ್ಲಿ ವಾಹನಗಳ ದಟ್ಟಣೆ ತಗ್ಗಿಸಲು ವಾಕರಸಾ ಸಂಸ್ಥೆಯ ಸಿಟಿ ಬಸ್‌ಗಳ ಸಂಖ್ಯೆ ಕಡಿತಗೊಳಿಸಿ ಬಿಆರ್‌ಟಿಎಸ್‌ ಬಸ್‌ಗಳನ್ನು ಹೆಚ್ಚಿಸಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಅಶೋಕ ಪಾಟೀಲ, ಬಸವರಾಜ ಕೆರಿ, ಸುನೀಲಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ