ಆ್ಯಪ್ನಗರ

ಸಾಂಸ್ಕೃತಿಕ ಕಾರ‍್ಯಕ್ರಮ 16ರಿಂದ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೆ.16 ರಂದು ಹುಬ್ಬಳ್ಳಿಯಲ್ಲಿರಾಜ್ಯಮಟ್ಟದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆ ಹಾಗೂ ಸೆ.17,18 ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 12 Sep 2019, 5:00 am
ಹುಬ್ಬಳ್ಳಿ: ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೆ.16 ರಂದು ಹುಬ್ಬಳ್ಳಿಯಲ್ಲಿರಾಜ್ಯಮಟ್ಟದ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆ ಹಾಗೂ ಸೆ.17,18 ರಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web cultural program 16th
ಸಾಂಸ್ಕೃತಿಕ ಕಾರ‍್ಯಕ್ರಮ 16ರಿಂದ


ಸೆ.16 ರಂದು ಬೆಳಗ್ಗೆ 10ಕ್ಕೆ ನೆಹರು ಮೈದಾನದಲ್ಲಿ ಹಿರಿಯ ನಾಗರಿಕರ ಕ್ರೀಡಾ ಉದ್ಘಾಟನೆ ಜರುಗಲಿದೆ. 60 ರಿಂದ 70, 70 ರಿಂದ 80 ಹಾಗೂ 80 ವರ್ಷದ ಮೇಲ್ಪಟ್ಟು ಮಹಿಳಾ ಹಾಗೂ ಪುರುಷ ಹಿರಿಯ ನಾಗರಿಕರಿಗಾಗಿ ವಯಸ್ಸಿನ ಮೂರು ಗುಂಪುಗಳಲ್ಲಿಲಘು ಓಟ, ತೀವ್ರ ನಡಿಗೆ, ಕ್ರಿಕೆಟ್‌ ಬಾಲ್‌ ಚೆಂಡು ಎಸೆತ, ಕಬ್ಬಿಣದ ಗುಂಡು ಎಸೆತ, ಡಿಸ್ಕ್‌ ಥ್ರೋ, ಜಾವೆಲಿನ್‌ ಥ್ರೋ ಸ್ಪರ್ಧೆ ಏರ್ಪಡಿಸಲಾಗಿದೆ.

ಮಾಹಿತಿಗೆ ಹಿರಿಯ ನಾಗರಿಕರು ಸೆ.15ರೊಳಗೆ ಸಂಘದ ಕಛೇರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ-5ರ ಕಟ್ಟಡ, ಹೊಸೂರ ಹುಬ್ಬಳ್ಳಿ ಪ್ರವೇಶ ಪತ್ರ ಭರ್ತಿ ಮಾಡಿಕೊಡಬೇಕು.

ಸೆ. 17 ರಂದು ಬೆಳಗ್ಗೆ 11ಕ್ಕೆ ಕೇರಂ ಸ್ಪರ್ಧೆ, ಸೆ.18 ರಂದು ಬೆಳಗ್ಗೆ 11ಕ್ಕೆ ಮ್ಯೂಜಿಕಲ್‌ ಚೇರ್‌ ಹಾಗೂ ಭಾಷಣ ಸ್ಪರ್ಧೆ, ಜನಪದ ಗೀತೆ, ಏಕಪಾತ್ರಾಭಿನಯ ಹೀಗೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಘದ ಕಛೇರಿಯಲ್ಲಿಜರುಗಲಿವೆ. ಸ್ಪರ್ಧೆಗಳಲ್ಲಿವಿಜೇತರಾದವರಿಗೆ ಬಹುಮಾನ ವಿತರಣೆ 5-10-2019 ರಂದು ಶ್ರೀ ಸಿದ್ಧಾರೂಢ ಮಠದಲ್ಲಿಜರುಗುವ ವಿಶ್ವ ಹಿರಿಯ ನಾಗರಿಕರ ದಿನ ಆಚರಣೆ ಸಮಾರಂಭದಲ್ಲಿವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ