ಆ್ಯಪ್ನಗರ

ಹಣಕ್ಕಾಗಿ ಮುಗಿಬಿದ್ದ ಗ್ರಾಹಕರು

ಹುಬ್ಬಳ್ಳಿ: ಯೆಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎನ್ನುವ ಸುದ್ದಿ ಎರಡನೇ ದಿನವೂ ತಣ್ಣಗಾಗಿಲ್ಲ. ಮತ್ತಷ್ಟು ಆತಂಕಕ್ಕೆ ಒಳಗಾದ ಬ್ಯಾಂಕ್‌ನ ಗ್ರಾಹಕರು ಖಾತೆಯಲ್ಲಿರುವ ಹಣ ತೆಗೆದುಕೊಳ್ಳಲು ಶನಿವಾರ ಮುಗಿಬಿದ್ದಿದ್ದರು.

Vijaya Karnataka 8 Mar 2020, 5:00 am
ಹುಬ್ಬಳ್ಳಿ: ಯೆಸ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎನ್ನುವ ಸುದ್ದಿ ಎರಡನೇ ದಿನವೂ ತಣ್ಣಗಾಗಿಲ್ಲ. ಮತ್ತಷ್ಟು ಆತಂಕಕ್ಕೆ ಒಳಗಾದ ಬ್ಯಾಂಕ್‌ನ ಗ್ರಾಹಕರು ಖಾತೆಯಲ್ಲಿರುವ ಹಣ ತೆಗೆದುಕೊಳ್ಳಲು ಶನಿವಾರ ಮುಗಿಬಿದ್ದಿದ್ದರು.
Vijaya Karnataka Web 07 SANTOSH 3 B_21
ಹುಬ್ಬಳ್ಳಿಯ ಕ್ಲಬ್‌ ರಸ್ತೆಯಲ್ಲಿರುವ ಯೆಸ್‌ ಬ್ಯಾಂಕ್‌ಗೆ ಶನಿವಾರ ಮುಗಿ ಬಿದ್ದ ಗ್ರಾಹಕರು.


ಶನಿವಾರ ಬ್ಯಾಂಕ್‌ ಬಾಗಿಲು ತೆರೆಯುತ್ತಿದ್ದಂತೆ ಸಾವಿರಾರು ಗ್ರಾಹಕರು ಆಗಮಿಸಿದ್ದರಲ್ಲದೇ ನಮ್ಮ ಖಾತೆಯಲ್ಲಿರುವ ಹಣ ತೆಗೆದು ಕೊಡುವಂತೆ ಸಿಬ್ಬಂದಿಗೆ ಒತ್ತಾಯಿಸಿದರು. ಈಗಾಗಲೇ ಬ್ಯಾಂಕ್‌ ಪ್ರತಿ ಖಾತೆಗೆ 50 ಸಾವಿರ ರೂ. ತೆಗೆದುಕೊಳ್ಳಲು ಅವಕಾಶ ನೀಡಿದೆ. ಅಷ್ಟು ಹಣವನ್ನು ನೀಡುತ್ತೇವೆ ಎನ್ನುವ ಮಾತನ್ನು ಬ್ಯಾಂಕ್‌ ಸಿಬ್ಬಂದಿ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬ್ಯಾಂಕಿನಲ್ಲಿಠೇವಣಿ ಮಾಡಿದ್ದ ಗ್ರಾಹಕರಿಗೆ ಚೆಕ್‌ಬುಕ್‌ ಮೂಲಕವೇ ಹಣ ತೆಗೆಯಲು ಶನಿವಾರ ಅವಕಾಶ ಕಲ್ಪಿಸಿದ್ದು, ಶುಕ್ರವಾರಕ್ಕಿಂತ ಶನಿವಾರ ಹೆಚ್ಚಿನ ಜನರು ಬ್ಯಾಂಕ್‌ಗೆ ಆಗಮಿಸಿದ್ದರು. ಸರದಿಯಲ್ಲಿನಿಂತು ಹಣ ತೆಗೆಸಿಕೊಳ್ಳುತ್ತಿದ್ದರು. ಯಸ್‌ ಬ್ಯಾಂಕ್‌ಗೆ ಪಾಲಿಕೆ ಟ್ಯಾಕ್ಸ್‌ ತುಂಬಬೇಡಿ

ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲವಲಯ ಕಚೇರಿಗಳಿಗೆ ಸಂಬಂಧಿಸಿದ ಆಸ್ತಿ ಕರ ಹಾಗೂ ಇತರ ಶುಲ್ಕಗಳನ್ನು ಭರಿಸಲು ಯಸ್‌ ಬ್ಯಾಂಕ್‌ನಲ್ಲಿಖಾತೆ ಹೊಂದಿದೆ. ಇಲ್ಲಿಯ ವರೆಗೆ ಎಲ್ಲರೀತಿಯ ರಸೀದಿಗಳನ್ನು ಈ ಬ್ಯಾಂಕ್‌ನಲ್ಲಿಜಮಾ ತೆಗೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆದರೆ, ಯಸ್‌ ಬ್ಯಾಂಕ್‌ನಲ್ಲಿತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆ ಕಾರಣಕ್ಕಾಗಿ ಸಾರ್ವಜನಿಕರು ಆಸ್ತಿ ತೆರಿಗೆ ಇನ್ನಿತರ ಶುಲ್ಕಗಳನ್ನು ನಗದು, ಪಿಒಎಸ್‌, ಮಶಿನ್‌ ಮುಖಾಂತರ, ಚೆಕ್‌ ಎಟಿಎಂ, ನೆಫ್ಟ್‌, ಆರ್‌ಟಿಜಿಎಸ್‌ ಮುಖಾಂತರ ಮಹಾನಗರ ಪಾಲಿಕೆಯ ಯಾವುದೇ ತೆರಿಗೆಯನ್ನು ಮುಂದಿನ ಆದೇಶ ಬರುವವರೆಗೆ ಯಸ್‌ ಬ್ಯಾಂಕ್‌ನಲ್ಲಿಪಾವತಿ ಮಾಡಬಾರದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ