ಹುಬ್ಬಳ್ಳಿ : ಅಡುಗೆ ಅನಿಲ ಸಿಲಿಂಡರ್ನಲ್ಲಿ ಸೋರಿಕೆ ಉಂಟಾಗಿ ಸ್ಪೋಟಗೊಂಡ ಪರಿಣಾಮ ಮೂವರು ಗಾಯಗೊಂಡ ಘಟನೆ ಮದೀನಾ ಕಾಲೊನಿಯಲ್ಲಿ ಭಾನುವಾರ ನಡೆದಿದೆ.
ಗೋಕುಲ್ ರಸ್ತೆಯ ಮದೀನ ಕಾಲೊನಿ ನಿವಾಸಿ ಶಬ್ಬೀರಅಹ್ಮದ್ ಮುಲ್ಲಾ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅವರ ಮಕ್ಕಳಾದ ಮುಜಬಿಲ್ (16), ಆಯಿಶಾ (15) ಹಾಗೂ ಸಹೋದರ ಸಿರಾಜ್ (38) ಅವರಿಗೆ ಗಾಯಗಳಾಗಿವೆ. ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಮಹಡಿಯಲ್ಲಿ ಶಬ್ಬೀರ್ಅಹ್ಮದ್ ಅವರ ಕುಟುಂಬಸ್ಥರು ವಾಸವಾಗಿದ್ದರು. ಘಟನೆ ಸಂಭವಿಸುತ್ತಿದ್ದಂತೆ ಮನೆಯ ಮಹಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದರ ಪರಿಣಾಮದಿಂದ ಮನೆಯಲ್ಲಿ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಸಿಲಿಂಡರ್ ಸೋರಿಕೆ ವಾಸನೆ ಬರುತ್ತಿದ್ದಂತೆ ಕುಟುಂಬದ ಕೆಲವರು ಓಡಿ ಹೋಗಿದ್ದಾರೆ. ಆದರೆ, ಮುಜಬಿಲ್, ಆಯಿಶಾ, ಸಿರಾಜ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರಾದರೂ, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗೋಕುಲ್ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋಕುಲ್ ರಸ್ತೆಯ ಮದೀನ ಕಾಲೊನಿ ನಿವಾಸಿ ಶಬ್ಬೀರಅಹ್ಮದ್ ಮುಲ್ಲಾ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅವರ ಮಕ್ಕಳಾದ ಮುಜಬಿಲ್ (16), ಆಯಿಶಾ (15) ಹಾಗೂ ಸಹೋದರ ಸಿರಾಜ್ (38) ಅವರಿಗೆ ಗಾಯಗಳಾಗಿವೆ. ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯ ಮಹಡಿಯಲ್ಲಿ ಶಬ್ಬೀರ್ಅಹ್ಮದ್ ಅವರ ಕುಟುಂಬಸ್ಥರು ವಾಸವಾಗಿದ್ದರು. ಘಟನೆ ಸಂಭವಿಸುತ್ತಿದ್ದಂತೆ ಮನೆಯ ಮಹಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಇದರ ಪರಿಣಾಮದಿಂದ ಮನೆಯಲ್ಲಿ ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಸಿಲಿಂಡರ್ ಸೋರಿಕೆ ವಾಸನೆ ಬರುತ್ತಿದ್ದಂತೆ ಕುಟುಂಬದ ಕೆಲವರು ಓಡಿ ಹೋಗಿದ್ದಾರೆ. ಆದರೆ, ಮುಜಬಿಲ್, ಆಯಿಶಾ, ಸಿರಾಜ್ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರಾದರೂ, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗೋಕುಲ್ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.