ಆ್ಯಪ್ನಗರ

ಕರಿಯಮ್ಮ ದೇವಸ್ಥಾನದಿಂದ ದಸರಾ ಮಹೋತ್ಸವ

ಹುಬ್ಬಳ್ಳಿ: ಶ್ರೀಕರಿಯಮ್ಮದೇವಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನ ಕಮೀಟಿ ವತಿಯಿಂದ ಸೆ.29ರಿಂದ ಅಕ್ಟೋಬರ್‌ 8ರ ವರೆಗೆ ನವರಾತ್ರಿ ದಸರಾ ಮಹೋತ್ಸವ ನಡೆಯಲಿದೆ.

Vijaya Karnataka 28 Sep 2019, 5:00 am
ಹುಬ್ಬಳ್ಳಿ: ಶ್ರೀಕರಿಯಮ್ಮದೇವಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನ ಕಮೀಟಿ ವತಿಯಿಂದ ಸೆ.29ರಿಂದ ಅಕ್ಟೋಬರ್‌ 8ರ ವರೆಗೆ ನವರಾತ್ರಿ ದಸರಾ ಮಹೋತ್ಸವ ನಡೆಯಲಿದೆ.
Vijaya Karnataka Web dasara mahotsav from kariyamma temple
ಕರಿಯಮ್ಮ ದೇವಸ್ಥಾನದಿಂದ ದಸರಾ ಮಹೋತ್ಸವ


ಸೆ.29ರಂದು ಸಂಜೆ 4.30ಕ್ಕೆ ಸುರಭಿ ಮಹಿಳಾ ಮಂಡಳ ಹಾಗೂ ಸುತ್ತಮುತ್ತಲಿನ ಕಾಲೊನಿಯ ಮಹಿಳಾ ಮಂಡಳದ ವತಿಯಿಂದ ಲಲಿತಾ ಸಹಸ್ರನಾಮ ಹಾಗೂ ಭಜನೆ.

ಸಂಜೆ 5.30ಕ್ಕೆ ನವರಾತ್ರಿ ದಸರಾ ಮಹೋತ್ಸವವನ್ನು ಮಾತಾಜಿ ರೇಜೋಮಯಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಲಕ್ಷ್ಮಣ ಗಂಡಗಾಳೇಕರ, ನಾಗರಾಜ ಹೆಗಡೆ, ಮಾಧವ ಹರಿ ಪಾಟೀಲ, ವಿದ್ಯಾ ನಾಯಕ, ಸುರೇಶ ಶೇಟ್‌, ಜಿ.ಎಲ್‌.ಹಬೀಬ, ಎಂ.ಎ.ಹಿರೇಮಠ, ಗೀತಾ ನಾಯಕ, ಗೀತಾ ಮೋಕಾಶಿ ಭಾಗವಹಿಸುವರು.

ನಂತರ ಖ್ಯಾತ ಕೀರ್ತನಕಾರರಾದ ಬಿ.ಜಿ.ನಾಗಲಕ್ಷ್ಮೇ ಮೈಸೂರ ಅವರಿಂದ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನ ನಡೆಯಲಿದೆ. ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ, ಸನ್ಮಾನ ಮತ್ತು ದೇವಿಗೆ ಮಹಾಮಂಗಳಾರತಿ ಜರುಗಲಿದೆ. ನಂತರ ದಾಂಡಿಯಾ ರಾಸ ಮತ್ತು ಭರತ ನಾಟ್ಯ ಕಾರ್ಯಕ್ರಮ ನಡೆಯಲಿವೆ.

ಅ.1ರಂದು ರಾತ್ರಿ 8.15 ರಿಂದ 8.45ರ ವರೆಗೆ ಪಲ್ಲಕ್ಕಿ ಸೇವೆ, 6 ರಂದು ಬೆಳಗ್ಗೆ ಚಂಡಿಕಾ ಹೋಮ ನಡೆಯಲಿದೆ. ಪ್ರಸನ್ನ ಭಟ್ಟ ನೇತೃತ್ವ ವಹಿಸಲಿದ್ದು, ರಾತ್ರಿ 8.30ಕ್ಕೆ ನವದುರ್ಗೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅತಿಥಿಯಾಗಿ ಡಾ.ಟಿ.ಎಸ್‌.ಮೋಹನಕುಮಾರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ