ಆ್ಯಪ್ನಗರ

ಧಾರವಾಡ ಅಪಘಾತ: ಮಕ್ಕಳ ಪರೀಕ್ಷೆ ಕಾರಣ ಬದುಕಿದರು, ನಾಯಿ ಮರಿ ಟ್ಯಾಟೂನಿಂದ ಮೃತದೇಹ ಗುರುತು ಪತ್ತೆ

ಇದೇ ಅಪಘಾತದಲ್ಲಿ ಮೃತಪಟ್ಟಿದ್ದ ಅವರ ಮಗಳು ಯಸ್ಮಿತಾ ಮೃತದೇಹ ಧಾರವಾಡ ಸಿವಿಲ್‌ ಆಸ್ಪತ್ರೆಯಲ್ಲಿತ್ತು. ಈ ವೇಳೆ ಪರಂಜ್ಯೋತಿ ಎಂಬುವರ ಮೃತದೇಹ ಗುರುತು ಸಿಗದಷ್ಟು ಛಿದ್ರಗೊಂಡಿದ್ದರಿಂದ ಬಟ್ಟೆ ಬಣ್ಣ ಆಧಾರದ ಮೇಲೆ ಪರಂಜ್ಯೋತಿ ಅವರ ಸಂಬಂಧಿಕರು ಯಸ್ಮಿತಾಳ ಕಳೇಬರ ತೆಗೆದುಕೊಂಡು ದಾವಣಗೆರೆಯತ್ತ ಪ್ರಯಾಣಿಸಿದರು.

Vijaya Karnataka Web 16 Jan 2021, 3:03 pm
ಹುಬ್ಬಳ್ಳಿ: ಧಾರವಾಡದ ಬಳಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತ ಹಲವಾರು ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ. ಸಹಪಾಠಿಗಳು ಒಟ್ಟಿಗೆ ಪ್ರವಾಸ ಮಾಡಲು ಹೋಗಿ ಈಗ ಮಸಣ ಸೇರಿದ್ದಾರೆ. ಈ ಸಹಪಾಠಿಗಳ ಗುಂಪಿನಲ್ಲಿದ್ದ ಕೆಲವರು ಅದೃಷ್ಟವಶಾತ್‌ ಜವರಾಯನಿಂದ ಬಚಾವಾಗಿದ್ದಾರೆ.
Vijaya Karnataka Web ಅಪಘಾತ
ಅಪಘಾತ


ಮಕ್ಕಳಿಗೆ ಪರೀಕ್ಷೆ ಇದ್ದ ಕಾರಣ ಪ್ರವಾಸಕ್ಕೆ ಹೋಗದಿದ್ದರಿಂದ ಮಹಿಳೆಯೊಬ್ಬರು ಜವರಾಯನಿಂದ ತಪ್ಪಿಸಿಕೊಂಡಿದ್ದಾರೆ.

ಮಕ್ಕಳ ಪರೀಕ್ಷೆ ಕಾರಣ ಬದುಕಿದರು!

ಅಪಘಾತಕ್ಕೀಡಾದ ಟೆಂಪೊ ಟ್ರಾವೆಲರ್‌ನಲ್ಲಿ ತೆರಳಬೇಕಿದ್ದ ಮಹಿಳೆಯೊಬ್ಬರು ಅದೃಷ್ಟವಶಾತ್‌ ಬದುಕುಳಿದಿದ್ದಾರೆ. ''ನನ್ನ ತಂಗಿ ಸವಿತಾಳನ್ನು ದೇವರೇ ಕಾಪಾಡಿದ್ದಾರೆ'' ಎಂದು ಅವರ ಸಹೋದರ ನಿರಂಜನ ಕಿಮ್ಸ್‌ನ ಶವಾಗಾರದ ಬಳಿ ರೋದಿಸುತ್ತಿದ್ದರು. ''ದುಬೈನಲ್ಲಿದ್ದ ಸವಿತಾ ಕೂಡ ದಾವಣಗೆರೆಗೆ ಬಂದು ಇವರೊಟ್ಟಿಗೆ ಗೋವಾಕ್ಕೆ ತೆರಳುವವರಿದ್ದರು. ಆದರೆ, ಮಕ್ಕಳಿಗೆ ಪರೀಕ್ಷೆ ಇದ್ದ ಕಾರಣಕ್ಕೆ ಪರೀಕ್ಷೆ ಮುಗಿಸಿಕೊಂಡು ನೇರವಾಗಿ ಗೋವಾಕ್ಕೆ ಬಂದು ಸೇರುತ್ತೇನೆ ಎಂದಿದ್ದರು. ಆದರೆ, ಅವರು ಬಾರದೇ ಇರುವುದೇ ಒಳ್ಳೆಯದಾಗಿದೆ'' ಎಂದು ಭಾವುಕರಾದರು.

ಶವ ಅದಲು ಬದಲು


ಧಾರವಾಡ ಅಪಘಾತದಲ್ಲಿ ಗುರುತು ಸಿಗಲಾರದಷ್ಟು ಛಿದ್ರಗೊಂಡಿದ್ದ ಮೃತದೇಹಗಳ ಮರಣೋತ್ತರ ಪರೀಕ್ಷೆಯ ನಂತರ ಶವ ಅದಲು ಬದಲಾಗಿ ಗೊಂದಲ ಸೃಷ್ಟಿಸಿದ ಪ್ರಸಂಗ ಕಿಮ್ಸ್‌ನಲ್ಲಿ ಶುಕ್ರವಾರ ನಡೆದಿದೆ.

ಹೇಮಲತಾ ಮಹಿಮಾ (48) ಅವರ ಮೃತದೇಹ ಕಿಮ್ಸ್‌ನ ಶವಾಗಾರದಲ್ಲಿ ಇಡಲಾಗಿತ್ತು. ಇದೇ ಅಪಘಾತದಲ್ಲಿ ಮೃತಪಟ್ಟಿದ್ದ ಅವರ ಮಗಳು ಯಸ್ಮಿತಾ ಮೃತದೇಹ ಧಾರವಾಡ ಸಿವಿಲ್‌ ಆಸ್ಪತ್ರೆಯಲ್ಲಿತ್ತು. ಈ ವೇಳೆ ಪರಂಜ್ಯೋತಿ ಎಂಬುವರ ಮೃತದೇಹ ಗುರುತು ಸಿಗದಷ್ಟು ಛಿದ್ರಗೊಂಡಿದ್ದರಿಂದ ಬಟ್ಟೆ ಬಣ್ಣ ಆಧಾರದ ಮೇಲೆ ಪರಂಜ್ಯೋತಿ ಅವರ ಸಂಬಂಧಿಕರು ಯಸ್ಮಿತಾಳ ಕಳೇಬರ ತೆಗೆದುಕೊಂಡು ದಾವಣಗೆರೆಯತ್ತ ಪ್ರಯಾಣಿಸಿದ್ದರು.

ಕೊನೆಗೆ ಹೇಮಲತಾ ಮೃತದೇಹ ಪತ್ತೆ ಹಚ್ಚಿದ ಅವರ ಸಂಬಂಧಿಕರು ಮಗಳು ಯಸ್ಮಿತಾ ಶವಕ್ಕಾಗಿ ಹುಬ್ಬಳ್ಳಿಯಿಂದ ಧಾರವಾಡ, ಮತ್ತೆ ಅಲ್ಲಿಂದ ಹುಬ್ಬಳ್ಳಿ ಕಿಮ್ಸ್‌ ಶವಾಗಾರಕ್ಕೆ ಅಲೆದಾಡಿದರು. ಆಗ ಯಾಶ್ಮಿತಾಳ ಸಂಬಂಧಿಕರ ಮನವಿ ಮೇರೆಗೆ ಬೆರೆಯವರು ಒಯ್ಯುತ್ತಿದ್ದ ಯಸ್ಮಿತಾಳ ಶವವನ್ನು ಧಾರವಾಡ ಗ್ರಾಮೀಣ ಠಾಣೆ ಪಿಎಸ್‌ಐ ಮಹೇಂದ್ರ ನಾಯಕ ದಾರಿ ಮಧ್ಯೆ ತಡೆದು ಪರಿಶೀಲಿಸಿದಾಗ ಮುಂಗೈ ಮೇಲಿನ ನಾಯಿ ಮರಿ ಟ್ಯಾಟೂನಿಂದ ಅದು ಯಸ್ಮಿತಾಳ ಕಳೇಬರ ಎಂದು ದೃಢಪಟ್ಟಿತು. ನಂತರ ವೈದ್ಯರು, ಪೊಲೀಸರ ಸಮ್ಮುಖದಲ್ಲಿಯ ಸ್ಮಿತಾ ಮತ್ತು ಪರಂಜ್ಯೋತಿ ಅವರಪಾರ್ಥಿವ ಶರೀರವನ್ನು ಅವರ ಸಂಬಂಧಿಗಳಿಗೆ ಒಪ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ