ಆ್ಯಪ್ನಗರ

‘ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ’

ಧಾರವಾಡ: ಕೊರೊನಾ ವೈರಾಣು ಸಮಾಜದಲ್ಲಿಹರಡದಂತೆ ಜಾಗೃತಿ ವಹಿಸಲು ಜಿಲ್ಲೆಯಲ್ಲಿವ್ಯಾಪಕ ಪ್ರಚಾರ, ತಿಳಿವಳಿಕೆ, ಜಾಗೃತಿ ಮೂಡಿಸಿದರೂ ಕೆಲವೆಡೆ ನಿಯಮ ಉಲ್ಲಂಘನೆ ಆಗುತ್ತಿದೆ. ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Vijaya Karnataka 6 Jul 2020, 5:00 am
ಧಾರವಾಡ: ಕೊರೊನಾ ವೈರಾಣು ಸಮಾಜದಲ್ಲಿಹರಡದಂತೆ ಜಾಗೃತಿ ವಹಿಸಲು ಜಿಲ್ಲೆಯಲ್ಲಿವ್ಯಾಪಕ ಪ್ರಚಾರ, ತಿಳಿವಳಿಕೆ, ಜಾಗೃತಿ ಮೂಡಿಸಿದರೂ ಕೆಲವೆಡೆ ನಿಯಮ ಉಲ್ಲಂಘನೆ ಆಗುತ್ತಿದೆ. ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
Vijaya Karnataka Web defamation action if the rule is violated
‘ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ’


ನಗರದ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿಶುಕ್ರವಾರ ಜಿಲ್ಲಾಆರೋಗ್ಯ ಪಡೆ ಹಾಗೂ ತಹಸೀಲ್ದಾರಗಳ ಸಭೆ ನಡೆಸಿ, ಮಾತನಾಡಿದರು.

ಮದುವೆ ಕಾರ್ಯಕ್ರಮಗಳಲ್ಲಿಅತಿ ಜನ ಸೇರುವುದು, ಸಾಮಾಜಿಕ ಅಂತರ ಕಾಪಾಡದಿರುವುದು, ಸ್ಯಾನಿಟೈಜರ್‌, ಮಾಸ್ಕ… ಬಳಸದಿರುವುದು ಕಂಡು ಬಂದರೆ ಸಂಘಟಕರ ಮೇಲೆ ಸಂಬಂಧಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದರು.

ರಾತ್ರಿ ಕಫ್ರ್ಯೂ ಬಿಗಿಗೊಳಿಸಿ:
ಸರಕಾರದ ಆದೇಶದಂತೆ ಪ್ರತಿದಿನ ರಾತ್ರಿ 8ರಿಂದ ಬೆಳಗಿನ 5ರ ವರೆಗೆ ರಾತ್ರಿ ಕಫ್ರ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೂ ಅನಗತ್ಯವಾಗಿ ಮತ್ತು ಖಾಸಗಿ ವಾಹನಗಳಲ್ಲಿಜನ ಸಂಚರಿಸುತ್ತಿರುವುದು ಕಂಡು ಬರುತ್ತಿದೆ.

ಜಿ.ಪಂ. ಸಿಇಒ ಡಾ.ಬಿ.ಸಿ.ಸತೀಶ ಮಾತನಾಡಿ, ಗ್ರಾಮೀಣ ಭಾಗದಲ್ಲಿಕೊರೊನಾ ನಿಯಂತ್ರಣದ ಮಾರ್ಗಸೂಚಿಗಳ ಕುರಿತು ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಮಾÓ್ಕ… ಧರಿಸದ ಜನರಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್‌ ಜುಬೇರ, ಜಿಲ್ಲಾಆರೋಗ್ಯ ಅಧಿಕಾರಿ ಡಾ.ಯಶವಂತ ಮದಿನಕರ, ಕಿಮ್ಸ್‌ನ ಡಾ.ಲಕ್ಷ್ಮೇಕಾಂತ, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್‌.ಕೆ.ಮಾನಕರ, ಡಾ. ಸುಜಾತಾ ಹಸವೀಮಠ, ಡಾ.ಶಶಿ ಪಾಟೀಲ, ಡಾ.ಎಸ್‌.ಎಂ.ಹೊನಕೇರಿ, ಡಾ.ತನುಜಾ, ಡಾ.ಶಶಿಕಲಾ ನಿಂಬಣ್ಣವರ ಮತ್ತು ತಹಸೀಲ್ದಾರರಾದ ಡಾ.ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವೀನ ಹುಲ್ಲೂರ, ಅಶೋಕ ಶಿಗ್ಗಾಂವಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ