ಆ್ಯಪ್ನಗರ

ಸಂಶೋಧನೆ ಸಮಾಜಕ್ಕೆ ತಲುಪಿಸಿ: ಭಜಂತ್ರಿ

ಧಾರವಾಡ: ವಿಜ್ಞಾನದಲ್ಲಿಆಗುವ ಸಂಶೋಧನೆಗಳನ್ನು ಸಮಾಜಕ್ಕೆ ತಲುಪಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಆರ್‌.ಎಫ್‌. ಭಜಂತ್ರಿ ಅಭಿಪ್ರಾಯಪಟ್ಟರು.

Vijaya Karnataka 22 Nov 2019, 5:49 pm
ಧಾರವಾಡ: ವಿಜ್ಞಾನದಲ್ಲಿಆಗುವ ಸಂಶೋಧನೆಗಳನ್ನು ಸಮಾಜಕ್ಕೆ ತಲುಪಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಆರ್‌.ಎಫ್‌. ಭಜಂತ್ರಿ ಅಭಿಪ್ರಾಯಪಟ್ಟರು.
Vijaya Karnataka Web 21NIJAGUNI7_21
ಧಾರವಾಡ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿಸಂಶೋಧನಾ ವಿದ್ಯಾರ್ಥಿಗಳಿಗೆ ನಡೆದ ಸಂಶೋಧನಾ ತರಬೇತಿ ಕಾರ್ಯಕ್ರಮವನ್ನು ಪ್ರೊ.ಆರ್‌. ಎಫ್‌. ಭಜಂತ್ರಿ ಉದ್ಘಾಟಿಸಿದರು.


ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗವು ಕಾಲೇಜಿನ ಸಭಾಂಗಣದಲ್ಲಿಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಒಂದು ದಿನದ ಸಂಶೋಧನಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನವು ನಾಗರಿಕತೆಯ ಒಂದು ಭಾಗವಾಗಿದೆ. ವಿಜ್ಞಾನದಂತಹ ಸಂಶೋಧನೆಗಳಲ್ಲಿವೈಜ್ಞಾನಿಕ ಉಪಕರಣಗಳ ಬಳಕೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಶೋಧನೆ ಅಭಿವೃದ್ಧಿಯಲ್ಲಿವಿಜ್ಞಾನಿಗಳಿಗೆ ಸಾಮರ್ಥ್ಯ, ತರಬೇತಿ ಗುಣಮಟ್ಟದ ಶೈಕ್ಷಣಿಕ ವಾತಾವರಣ, ಸೌಲಭ್ಯಗಳ ಲಭ್ಯತೆ ಮತ್ತು ನೆಟ್‌ವರ್ಕ್ ಬಹಳ ಅವಶ್ಯವಾಗಿದೆ. ಪ್ರಸ್ತುತ ವಿಜ್ಞಾನಿಗಳು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಸಮಾಜಕ್ಕೆ ಉಪಯೋಗವಾಗುವ ಸಂಶೋಧನೆಗಳು ಅಗತ್ಯವಾಗಿದ್ದು, ಪ್ರಸ್ತುತ ವೈಜ್ಞಾನಿಕ ಪರಂಪರೆ ಇಂದಿನ ವಿದ್ಯಾರ್ಥಿಗಳಿಗೆ ತಿಳಿಸುವ ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಎಫ್‌.ಮೂಲಿಮನಿ ಮಾತನಾಡಿ, ಪ್ರಸ್ತುತ ಸಮಾಜದ ಅಭಿವೃದ್ಧ್ಧಿಗಾಗಿ ವೈಜ್ಞಾನಿಕ ಸಂಶೋಧನೆಗಳು ಆಗಬೇಕು ಮತ್ತು ಪರಿಸರಕ್ಕೆ ಹಾನಿಯಾಗದಂತಹ ಮಾನವ ಕುಲ ಅಭಿವೃದ್ಧಿಗಾಗಿ ಇಂದಿನ ಸಂಶೋಧನೆಗಳು ಹೆಚ್ಚು ಪ್ರಾಮುಖ್ಯತೆ ಇಂದಿನ ವಿಜ್ಞಾನಿಗಳು ಗಮನಹರಿಸಬೇಕಾಗಿದೆ ಎಂದರು.

ಹುಬ್ಬಳಿ-ಧಾರವಾಡದ ಅವಳಿನಗರದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಪಾಲಿಮರ್‌ ಸೈನ್ಸ್‌ನ ವಿವಿಧ ಕಾಲೇಜುಗಳ 50ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಡಾ.ಸರಸ್ವತಿ ಮಾಸ್ತಿ, ಡಾ. ಓ. ಕೋಟ್ರೇಶ್‌, ಡಾ.ಎ.ಎಸ್‌.ಕಟಗಿ, ಪ್ರೊ. ಎಸ್‌.ಡಿ.ದುಮ್ಮವಾಡ, ಪ್ರೊ. ವಿ.ಎ.ಅಮ್ಮಿನಬಾವಿ ಪ್ರೊ. ವೀಣಾ ಭಟ್‌, ಶಿವಯೋಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ