ಆ್ಯಪ್ನಗರ

ಅರ್ಹರಿಗೆ ಸೌಲಭ್ಯ ಸರಿಯಾಗಿ ತಲುಪಿಸಿ

ಹುಬ್ಬಳ್ಳಿ : ಸರಕಾರದಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ವಿ. ಎಸ್‌. ಬಸವರಾಜ ಅವರು ಹೇಳಿದರು.

Vijaya Karnataka 30 Jan 2019, 5:00 am
ಹುಬ್ಬಳ್ಳಿ : ಸರಕಾರದಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ವಿ. ಎಸ್‌. ಬಸವರಾಜ ಅವರು ಹೇಳಿದರು.
Vijaya Karnataka Web delivering the eligibility facility properly
ಅರ್ಹರಿಗೆ ಸೌಲಭ್ಯ ಸರಿಯಾಗಿ ತಲುಪಿಸಿ


ನಗರದ ಕಿಮ್ಸ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ವೈದ್ಯಾಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಅಂಗವಿಕಲರಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ವೈದ್ಯಕೀಯ ಪ್ರಮಾಣ ಪತ್ರವಾಗಲಿ ಅಥವಾ ದೃಢೀಕರಣ ಮಾಡುವಲ್ಲಿ ವಿಳಂಬಿಸದೇ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯುವಲ್ಲಿ ಸಹಕರಿಸಬೇಕೆಂದರು.

ಆಸ್ಪತ್ರೆಗೆ ಬರುವ ವಿಶೇಷಚೇತನರಿಗೆ ಸರಿಯಾದ ಮಾಹಿತಿ ,ಚಿಕಿತ್ಸೆ, ಪಾಲಕ/ಪೋಷಕರಿಗೆ ಚಿಕಿತ್ಸೆಯ ವಿಧಾನವನ್ನು ತಿಳಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿ ಕೊಂಡೊಯ್ಯವಲ್ಲಿ ತಾವು ಸಹ ಸಹಕರಿಸಬೇಕು. ಚಿಕಿತ್ಸಾ ಸಮಯದಲ್ಲಿ ಆಸ್ಪತ್ರೆಯಲ್ಲಿ ಅವರಿಗೆ ನೀಡಬಹುದಾದ ಪರಿಕರಗಳನ್ನು ಮೂಲಭೂತವಾಗಿ ವಿತರಿಸಬೇಕು. ಚಿಕಿತ್ಸೆಯೊಂದಿಗೆ ಅನುಕಂಪವನ್ನು ತಾವು ಹೊಂದಿರಬೇಕು ಎಂದರು.

ಆಸ್ಪತ್ರೆಗೆ ಬರುವ ವಿಶೇಷಚೇತನರನ್ನು ಗುರುತಿಸಿ ಅಂಕಿ ಅಂಶವನ್ನು ಜಿಲ್ಲಾ ವಿಕಲಚೇತನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವಂತೆ ಸೂಚಿಸಿದರು. ಇದರಿಂದ ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡುವಲ್ಲಿ ಸಹಾಯವಾಗುತ್ತದೆ ಎಂದರು.

ಸಭೆಯಲ್ಲಿ ಕಿಮ್ಸ್‌ ಪ್ರಭಾರ ನಿರ್ದೇಶಕ ಕೆ.ಎಸ್‌. ಕಮ್ಮಾರ ,ಡಾ. ಸೂರ್ಯಕಾಂತ ,ಗುರುಶಾಂತಪ್ಪ ಯುರಗಟ್ಟಿ , ಈಶ್ವರ ಹೆಸಲಿ , ಮಾನಸಿಕ ವಿಭಾಗದ ಮುಖ್ಯಸ್ಥ ಮಹೇಶ ದೇಸಾಯಿ , ಚರ್ಮರೋಗ ಮುಖ್ಯಸ್ಥ ರವಿ ರಾಠೋಡ , ಇಎನ್‌ಟಿ ವಿಭಾಗದ ರವೀಂದ್ರ ಗದಗ , ಎಸ್‌ ಬಿ. ಕಟಗೋಳ , ಸರ್ಜರಿ ವಿಭಾಗದ ಈಶ್ವರ ಹೊಸಮನಿ , ರಾಜಶೇಖರ ದ್ಯಾಬೇರಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಅಮರನಾಥ , ವಾರ್ತಾ ಇಲಾಖೆಯ ಅಧೀಕ್ಷ ಕ ವಿನೋದಕುಮಾರ ಸಭೆಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ