ಆ್ಯಪ್ನಗರ

100 ದಿನಸಿ ವಸ್ತುಗಳ ಕಿಟ್‌ ವಿತರಣೆ

ಧಾರವಾಡ: ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌, ಧಾರವಾಡದ ಟಾಟಾ ಮೋಟಾರ್ಸ್ ಅವರ ಆರ್ಥಿಕ ಸಹಕಾರದಿಂದ ಲಾಕ್‌ಡೌನ್‌ ಸಂದರ್ಭದಲ್ಲಿಸಂಕಷ್ಟದಲ್ಲಿರುವ ಸಮುದಾಯದ ಜನರಿಗೆ 100 ಕಿರಾಣಿ ವಸ್ತುಗಳ ಕಿಟ್‌ಗಳನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿರುವ ಕೇಂದ್ರಕ್ಕೆ ಶನಿವಾರ ಸಲ್ಲಿಸಲಾಯಿತು.

Vijaya Karnataka 12 Apr 2020, 5:00 am
ಧಾರವಾಡ: ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌, ಧಾರವಾಡದ ಟಾಟಾ ಮೋಟಾರ್ಸ್ ಅವರ ಆರ್ಥಿಕ ಸಹಕಾರದಿಂದ ಲಾಕ್‌ಡೌನ್‌ ಸಂದರ್ಭದಲ್ಲಿಸಂಕಷ್ಟದಲ್ಲಿರುವ ಸಮುದಾಯದ ಜನರಿಗೆ 100 ಕಿರಾಣಿ ವಸ್ತುಗಳ ಕಿಟ್‌ಗಳನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿರುವ ಕೇಂದ್ರಕ್ಕೆ ಶನಿವಾರ ಸಲ್ಲಿಸಲಾಯಿತು.
Vijaya Karnataka Web 11MALLU1_21
ಧಾರವಾಡ ಡಾ. ಅಂಬೇಡ್ಕರ್‌ ಭವನದಲ್ಲಿಸ್ಥಾಪಿಸಲಾದ ಸಾಮಗ್ರಿಗಳ ಸ್ವೀಕೃತಿ ಕೇಂದ್ರಕ್ಕೆ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ಕಿರಾಣಿ ವಸ್ತುಗಳ ಕಿಟ್‌ಗಳನ್ನು ನೀಡಲಾಯಿತು.


ನಗರದ ಸನ್ಮತಿ ಮಾರ್ಗದಲ್ಲಿನ ಅಂಬೇಡ್ಕರ್‌ ಭವನದಲ್ಲಿನಿರ್ಮಿಸಲಾದ ಪರಿಹಾರ ಸಾಮಗ್ರಿಗಳ ಸ್ವೀಕೃತಿ ಕೇಂದ್ರದಲ್ಲಿಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್‌ ಹಂಚಾಟೆ ಅವರು ಕಿರಾಣಿ ಕಿಟ್‌ಗಳನ್ನು ಸ್ವೀಕರಿಸಿ, ಅಗತ್ಯವಿರುವ ಸಮುದಾಯಕ್ಕೆ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು. ಇಂತಹ ಸಂಕಷ್ಟ ಕಾಲದಲ್ಲಿಸರಕಾರದ ಜತೆಗೆ ಸಾಮಾಜಿಕ ಸಂಘ ಸಂಸ್ಥೆಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದರು. ಕಿಟ್‌ನಲ್ಲಿ5 ಕೆಜಿ ಅಕ್ಕಿ, 2 ಕೆಜಿ ಗೋಧಿ ಹಿಟ್ಟು, 1 ಕೆಜಿ ಎಣ್ಣೆ, 1ಕೆಜಿ ಬೇಳೆ, 2 ಕೆಜಿ ಈರುಳ್ಳಿ, 2 ಕೆಜಿ ಆಲೂಗಡ್ಡೆ, 1ಕೆಜಿ ಉಪ್ಪು ಇಡಲಾಗಿದೆ.

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ನಿರ್ವಹಣಾ ಸಮಿತಿ ಸದಸ್ಯರಾದ ಡಾ. ಗೋಪಾಲಕೃಷ್ಣ ಜೋಶಿ, ಪ್ರೊ. ಗೋಪಾಲ ಕಮಲಾಪೂರ, ಕಾರ್ಯಕ್ರಮ ಸಂಯೋಜಕ ಜಯಂತ ಕೆ.ಎಸ್‌, ರವಿ ಯಲಿಗಾರ, ಚಿದಂಬರ ಶಾಸ್ತ್ರಿ, ಅನಿಲ ಮಳಗಿ ಟಾಟಾ ಮೋಟಾರ್ಸ್ನ ಸುನೀಲ ರೋಡ್ರೀಗಸ್‌, ರಮೇಶ ಕೆ., ಡಾ. ಮಹಮದ್‌ ಷರೀಫ್‌, ರಾಜಶೇಖರ ಬೆಲ್ಲದ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ