ಆ್ಯಪ್ನಗರ

ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ

ಧಾರವಾಡ: ನವಲಗುಂದ ತಾಲೂಕಿನ ಮೊರಬ, ಶಿರಕೋಳ ಗ್ರಾಮ ಪಂಚಾಯಿತ ವ್ಯಾಪ್ತಿಯ ಎಲ್ಲಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Vijaya Karnataka 21 May 2020, 5:00 am
ಧಾರವಾಡ: ನವಲಗುಂದ ತಾಲೂಕಿನ ಮೊರಬ, ಶಿರಕೋಳ ಗ್ರಾಮ ಪಂಚಾಯಿತ ವ್ಯಾಪ್ತಿಯ ಎಲ್ಲಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Vijaya Karnataka Web demand for clean drinking water supply
ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ


ನಗರದ ಡಿಸಿ ಕಚೇರಿಗೆ ಬುಧವಾರ ಗ್ರಾಮಸ್ಥರೊಂದಿಗೆ ಆಗಮಿಸಿದ ಕೋನರಡ್ಡಿ, ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಪ್ರತಿ ವರ್ಷ ಬೇಸಿಗೆಯಲ್ಲಿಈ ಗ್ರಾಮಗಳಲ್ಲಿಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತಿದೆ ಎಂದು ಮನವಿಯಲ್ಲಿತಿಳಿಸಿದ್ದಾರೆ.

ಇಲ್ಲಿನ ಕೆರೆಗಳಲ್ಲಿನೀರಿನ ಸಂಗ್ರಹವು ಅಲ್ಪಮಟ್ಟಕ್ಕೆ ಕುಸಿದಿದೆ. ಶಿರಕೋಳದಲ್ಲಿಕೇವಲ 8 ರಿಂದ 10 ದಿನಗಳಿಗೆ ಆಗುವಷ್ಟು ಮಾತ್ರ ನೀರು ಸಂಗ್ರಹ ಇದ್ದು, ಅಲ್ಲಿನ ನೀರು ಕುಡಿದರೆ ಹೊಟ್ಟೆನೋವು ಹಾಗೂ ಇತರೆ ಕಾಯಿಲೆಗಳು ಹರಡುತ್ತಿವೆ. ಮೊರಬ ಗ್ರಾಮದವರು ಶುದ್ಧ ಕುಡಿಯುವ ನೀರನ್ನು ಗುಮ್ಮಗೋಳ ಗ್ರಾಮದಿಂದ ತಂದು ಕುಡಿಯುತ್ತಿದ್ದಾರೆ.

ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ಕೊರೋನಾ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸಿದ ಕಾರಣ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲಎಂದು ಸಬೂಬು ಹೇಳುತ್ತಿದ್ದಾರೆ. ಶೀಘ್ರವಾಗಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೊರಬ ಗ್ರಾಪಂ ಅಧ್ಯಕ್ಷ ಕಗದಾಳ, ಶಿರಕೋಳ ಗ್ರಾಪಂ ಅಧ್ಯಕ್ಷ ಪರಪ್ಪ ಗಾಣಿಗೇರ, ಎಂ.ಎಸ್‌.ರೋಣದ, ಅಡಿವೆಪ್ಪ ಗಾಣಿಗೇರ, ಸಂಗನಗೌಡ ಹಣಸಿ, ಚಂದ್ರು ಗಾಣಿಗೇರ, ಕುಮಾರ ಮಂಕಣಿ, ಗಿರೀಶ ಮಾಸ್ತಿ, ಕಲ್ಲಪ್ಪ ಬಸಿಡೋಣಿ ಮತ್ತಿತರರು ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ