ಆ್ಯಪ್ನಗರ

ಮಾಧ್ಯಮಿಕ ಶಾಲೆ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಧಾರವಾಡ : ರಾಜ್ಯದ ಸರಕಾರಿ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆ ಹಾಗೂ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷ ಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಾಲಾಶಿಕ್ಷ ಕರ ಸಂಘ ಸೇರಿದಂತೆ ವಿವಿಧ ಸಂಘಗಳ ನೇತೃತ್ವದಲ್ಲಿ ಡಿ. 13ರಂದು ಸುವರ್ಣಸೌಧದಲ್ಲಿ ಪಾದಯಾತ್ರೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುದು ಎಂದು ಸಂಘದ ರಾಜ್ಯ ಸಂಚಾಲಕ ಜಿ.ಆರ್‌.ಭಟ್‌ ತಿಳಿಸಿದರು.

Vijaya Karnataka 11 Dec 2018, 5:00 am
ಧಾರವಾಡ : ರಾಜ್ಯದ ಸರಕಾರಿ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆ ಹಾಗೂ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷ ಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಮಾಧ್ಯಮಿಕ ಶಾಲಾಶಿಕ್ಷ ಕರ ಸಂಘ ಸೇರಿದಂತೆ ವಿವಿಧ ಸಂಘಗಳ ನೇತೃತ್ವದಲ್ಲಿ ಡಿ. 13ರಂದು ಸುವರ್ಣಸೌಧದಲ್ಲಿ ಪಾದಯಾತ್ರೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುದು ಎಂದು ಸಂಘದ ರಾಜ್ಯ ಸಂಚಾಲಕ ಜಿ.ಆರ್‌.ಭಟ್‌ ತಿಳಿಸಿದರು.
Vijaya Karnataka Web demand for secondary school teachers requirement
ಮಾಧ್ಯಮಿಕ ಶಾಲೆ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹ


ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ರಾಜ್ಯದ ಸರಕಾರಿ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷ ಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ ಹಲವಾರು ಸಮಸ್ಯೆ ಎದುರಿಸುತ್ತಿದ್ದರು ಸರಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಶಿಕ್ಷ ಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಹಲವಾರು ಬಾರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಿ ಸರಕಾರದ ಗಮನಸೆಳೆದರು ಸಮಸ್ಯೆಗಳು ಬರೀ ಸಮಸ್ಯೆಗಳಾಗಿ ಉಳಿದಿವೆ ಎಂದರು.

2017 ರಲ್ಲಿ 13 ವಿಧಾನಪರಿಷತ್‌ ಸದಸ್ಯರ ನೇತೃತ್ವದಲ್ಲಿ ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ನಡೆಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು ಬೇಡಿಕೆಗಳನ್ನು ಈಡೆರಿಸುವುದಾಗಿ ಭರವಸೆ ನೀಡಿದ್ದರು. ಈ ಪೈಕಿ ಕೆಲ ಬೇಡಿಕೆಗಳನ್ನು ಮಾತ್ರ ಈಡೇರಿಸಿದ್ದಾರೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಅಂದು ವಿವಿಧ ಸಂಘಟನೆಗಳ ಸಾವಿರಾರು ಶಿಕ್ಷ ಕರು ಪ್ರಮುಖ ಬೇಡಿಕೆಗಳಾದ ಕಾಲ್ಪನಿಕ ವೇತನ ನಿಗದಿಗಾಗಿ ವಿಪ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಸದನ ಸಮಿತಿ ನೀಡಿದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು, 1.4.2006ರ ನಂತರ ನೇಮಕವಾದ ಸರಕಾರಿ ಮತ್ತು ಖಾಸಗಿ ನೌಕರರಿಗೆ ನೀಡುವ ನೂತನ ಪಿಂಚಣಿ ಬದಲಿ ಹಳೇ ಪಿಂಚಣಿ ಜಾರಿಗೆ ತರಬೇಕು, ಅನುದಾನ ರಹಿತ ಶಿಕ್ಷ ಣ ಸಂಸ್ಥೆಗಳ ಶಿಕ್ಷ ಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು, ಅನುಧಾನಿತ ಪ್ರೌಢಶಾಲೆಗಳ ನೇಮಕಾತಿಗೆ ವಿಧಿಸಿರುವ ಜಿಲ್ಲಾ ಸರಾಸರಿ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುದು ಎಂದರು.

ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ಶ್ಯಾಮ ಮಲ್ಲನಗೌಡರ, ವಿ.ಎಸ್‌. ಹುದ್ದಾರ, ರಂಜನ್‌ ಆರ್‌, ವಿಲ್ಸನ್‌ ಮೈಲಿ, ಅಬ್ದುಲ್‌ ಮೆಣಸಗಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ