ಆ್ಯಪ್ನಗರ

ಪಾಲಿಕೆಯ ಮೂವರು ಅಧಿಕಾರಿಗಳ ಬಂಧನ

ಧಾರವಾಡ : ಇಲ್ಲಿನ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂವರು ಅಧಿಕಾರಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 23 May 2019, 5:00 am
ಧಾರವಾಡ : ಇಲ್ಲಿನ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೂವರು ಅಧಿಕಾರಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web detention of three officers of the corporation
ಪಾಲಿಕೆಯ ಮೂವರು ಅಧಿಕಾರಿಗಳ ಬಂಧನ


ಪಾಲಿಕೆಯ ಉಪನಿರ್ದೇಶಕ ಅಶೋಕ ಗದಗ, ನಗರ ಯೋಜಕ ಮುಕಂದ ಜೋಶಿ, ಪಾಲಿಕೆಯ ಡಿಡಿಟಿಸಿ ಬಸವರಾಜ ಹಿರೇಮಠ ಎಂಬುವರೇ ಬಂಧಿತ ಅಧಿಕಾರಿಗಳು. ಇದರಿಂದ ಕಟ್ಟಡ ದುರಂತಕ್ಕೆ ಸಂಬಂಧಿಸಿದ ತನಿಖೆ ಚುರುಕುಗೊಂಡಂತಾಗಿದೆ.

ದುರಂತಕ್ಕೀಡಾದ ಕಟ್ಟಡಕ್ಕೆ ಸಿಸಿ ನೀಡುವಲ್ಲಿ ಲೋಪ ಎಸಗಿದ್ದಲ್ಲದೇ ಇತ್ತೀಚೆಗೆ ನಡೆದ ಜಿಲ್ಲಾ ದಂಡಾಧಿಕಾರಿಗಳ ಮ್ಯಾಜಿಸ್ಟ್ರಿಟಿಯಲ್‌ವಿಚಾರಣೆಯಲ್ಲಿ ಕೂಡಾ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಮಧ್ಯಾಹ್ನ ಡಿಸಿಪಿ ಡಿ.ಎಲ್‌.ನಾಗೇಶ ನೇತೃತ್ವದ ತಂಡ ಈ ಅಧಿಕಾರಿಗಳನ್ನು ಬಂಧಿಸಿದೆ. ಮಾರ್ಚ್‌ 19, 2019ರಂದು ಸಂಭವಿಸಿದ ಈ ದುರಂತದಲ್ಲಿ 19 ಅಮಾಯಕರು ಜೀವ ಕಳೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ