ಆ್ಯಪ್ನಗರ

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

ಹುಬ್ಬಳ್ಳಿ : ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಯುವಜನರಲ್ಲಿ ಸ್ಪರ್ಧಾ ಮನೋಭಾವ ಕಡಿಮೆ ಇದೆ. ಆದ್ದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಇಲ್ಲಿಯ ಟ್ರೇನಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಎಜುಕೇಶನ್‌ (ಟೈಮ್‌) ನಿರ್ದೇಶಕ ಅಖಿಲ್‌ಕುಮಾರ್‌ ಹಲಗತ್ತಿ ಹೇಳಿದರು.

Vijaya Karnataka 31 Aug 2019, 5:00 am
ಹುಬ್ಬಳ್ಳಿ : ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಯುವಜನರಲ್ಲಿ ಸ್ಪರ್ಧಾ ಮನೋಭಾವ ಕಡಿಮೆ ಇದೆ. ಆದ್ದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಇಲ್ಲಿಯ ಟ್ರೇನಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಎಜುಕೇಶನ್‌ (ಟೈಮ್‌) ನಿರ್ದೇಶಕ ಅಖಿಲ್‌ಕುಮಾರ್‌ ಹಲಗತ್ತಿ ಹೇಳಿದರು.
Vijaya Karnataka Web develop a competitive mindset
ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ


ಕೆಎಲ್‌ಇ ಸಂಸ್ಥೆಯ ಸ್ಥಳೀಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಮತ್ತು ಸ್ಥಾನೀಕರಣ ಘಟಕದ ಆಶ್ರಯದಲ್ಲಿ ಉದ್ಯೋಗಾವಕಾಶಗಳ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಎಲ್‌ಐಸಿ, ರೈಲ್ವೆ ಬ್ಯಾಂಕು, ಕೆಪಿಎಸ್‌ಸಿ, ಯುಪಿಎಸ್‌ಸಿ ಮೂಲಕ ಲಕ್ಷಾಂತರ ಹುದ್ದೆಗಳಿಗೆ ಪ್ರಕಟಣೆ ನೀಡಲಾಗುತ್ತಿದೆ.ಆದರೆ, ಇವುಗಳಿಗೆ ಅರ್ಜಿ ಹಾಕುವವರ ಸಂಖ್ಯೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದರು.

ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಅಧ್ಯಕ್ಷ ತೆ ವಹಿಸಿದ್ದ ಡಾ.ಲಿಂಗರಾಜ ಡಿ. ಹೊರಕೇರಿ ಹೇಳಿದರು.

ಪ್ರೊ.ಶಕುಂತಲಾ ಎನ್‌. ಶೆರೇವಾಡ ಪಾಲ್ಗೊಂಡಿದ್ದರು.ಭಾಗ್ಯಶ್ರೀ ಹುರಕಡ್ಲಿ ಪ್ರಾರ್ಥಿಸಿದರು. ಸ್ನೇಹಾ ಸಪಾರೆ ಸ್ವಾಗತಿಸಿದರು. ಡಾ.ಚೈತ್ರಾ ನೆಗಳೂರ ಪರಿಚಯಿಸಿದರು. ರಕ್ಷಿತಾ ಮತ್ತು ರುಮಾನಾ ನಿರೂಪಿಸಿದರು. ಡಾ.ವೈ.ಎನ್‌. ನಾಗೇಶ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ