ಆ್ಯಪ್ನಗರ

ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ: ದಿವ್ಯಾನ್ಸು ವರ್ಮಾ

ಹುಬ್ಬಳ್ಳಿ : ವಿದ್ಯಾರ್ಥಿಗಳು ಸ್ವಯಂ ನಿರ್ಧಾರ ತಗೆದುಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬೆಂಗಳೂರಿನ ಇಂಟೆಲ್‌ ಕಾಪೊರ್‍ರೇಶನ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ವಿಭಾಗದ ಹಿರಿಯ ವ್ಯವಸ್ಥಾಪಕ ದಿವ್ಯಾನ್ಸು ವರ್ಮಾ ಹೇಳಿದರು.

Vijaya Karnataka 4 Feb 2019, 5:00 am
ಹುಬ್ಬಳ್ಳಿ : ವಿದ್ಯಾರ್ಥಿಗಳು ಸ್ವಯಂ ನಿರ್ಧಾರ ತಗೆದುಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬೆಂಗಳೂರಿನ ಇಂಟೆಲ್‌ ಕಾಪೊರ್‍ರೇಶನ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ವಿಭಾಗದ ಹಿರಿಯ ವ್ಯವಸ್ಥಾಪಕ ದಿವ್ಯಾನ್ಸು ವರ್ಮಾ ಹೇಳಿದರು.
Vijaya Karnataka Web HBL-0202-2-3-2 KALMESH 5
ಹುಬ್ಬಳ್ಳಿಯಲ್ಲಿ ನಡೆದ ಅಕ್ಯುಮನ್‌-2019 ರಾಷ್ಟ್ರ ಮಟ್ಟದ ಮಾಹಿತಿ ತಂತ್ರಜ್ಞಾನ ಹಬ್ಬದಲ್ಲಿ ಜನರಲ್‌ ಚಾಂಪಿಯನ್‌ ಪಡೆದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಯಿತು.


ಇಲ್ಲಿಯ ಕೆಎಲ್‌ಇ ಸಂಸ್ಥೆಯ ಬಿಸಿಎ ಮಹಾವಿದ್ಯಾಲಯದ ಬಿವಿಬಿ ಆವರಣದಲ್ಲಿ ಎರಡು ದಿನಗಳ ಕಾಲ ಅಕ್ಯುಮನ್‌-2019 ರಾಷ್ಟ್ರ ಮಟ್ಟದ ಮಾಹಿತಿ ತಂತ್ರಜ್ಞಾನ ಹಬ್ಬದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜವಾಬ್ದಾರಿಗಳನ್ನು ತಗೆದು ಕೊಳ್ಳುವುದರ ಮೂಲಕ ಡಿಜಿಟಲ್‌ ತಂತ್ರಜ್ಞಾನದ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ರೆಡ್‌ ಎಫ್‌.ಎಂ. 93.5 ಮುಖ್ಯಸ್ಥ ರವಿ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ತಂತ್ರಜ್ಞಾನದಲ್ಲಿ ಉದ್ಯೋಗಗಳು ಹೆಚ್ಚುತ್ತಿದ್ದು, ಆವುಗಳಿಗೆ ಸನ್ನದ್ಧರಾಗಬೇಕು. ಸದಾ ಕಲೆಕೆಯೊಂದಿಗೆ ವಿನಯಶೀಲತೆ ರೂಢಿಸಿಕೊಂಡು ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ದತ್ತಾ ಫೌಂಡೇಶನದ ಪ್ರಕಾಶ ಜೋಶಿ ಮಾತನಾಡಿದರು. ಪ್ರಾಚಾರ್ಯ ಜ್ಯೋತಿ ಮಾನೇದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅರ್ಪೂವಾ ನರೇಗಲ್‌, ಪ್ರೊ. ಶ್ರೀದೇವಿ ಕುರಿ, ನಿಖಿತಾ ಮಿಸ್ಕಿನ, ಪ್ರೋ. ಎಸ್‌.ಸಿ. ಕಡಕೋಳ, ನರಸಿಂಹ ಪಂಡಿತ, ಐರೆನ್‌ ಟಿ ಸೇರಿದಂತೆ ಇತರರು ಇದ್ದರು.

ಅಕ್ಯುಮನ್‌-2019ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಬೆಳಗಾವಿ ಕೆಎಲ್‌ಇ ಆರ್‌ಎಲ್‌ಎಸ್‌ ಕಾಲೇಜು ಜನರಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇನ್ನು ಐಸ್‌ ಬ್ರೇಕರ್‌ ರೋಡ್‌ ಮ್ಯಾಪ್‌: ಗೋಕಾಕನ ಕೆಎಲ್‌ಇ ಕಾಲೇಜ್‌ ಆಫ್‌ ಬಿಸಿಎ, ಬಿಸನೆಸ್‌ ಅನಾಲಿಸ್ಟ್‌: ಬೆಳಗಾವಿ ಆರ್‌ಎಲ್‌ಎಸ್‌ ಕಾಲೇಜು, ಡವಲೆಪರ್ಸ್‌ : ನೀಡಸೋಸಿ ಎಸ್‌ಜೆಪಿಎನ್‌ ಬಿಸಿಎ ಕಾಲೇಜ, ಸಲುಸೆನ್ಸ್‌ ಆರ್ಕಿಟೆಕ್ಟ್: ಬೆಳಗಾವಿ ಕೆಎಲ್‌ಇ ಗೊಕಟೆ ಕಾಲೇಜ, ಟೆಸ್ಟ್‌ ಎಂಜಿನೀಯರ್‌: ಕೆಎಲ್‌ಇ ಗೊಕಟೆ ಕಾಲೇಜ ಬೆಳಗಾವಿ, ಬೆಂಗಳೂರು ನಿಜಲಿಂಗಪ್ಪ ಕಾಲೇಜ, ಗೀಕ ಸ್ಕ್ವೌಡ್‌ (ಕ್ವೀಜ್‌): ಬೆಳಗಾವಿ ಆರ್‌ಎಲ್‌ಎಸ್‌ ಕಾಲೇಜು, ಬೆಳಗಾವಿ, ಹುಬ್ಬಳ್ಳಿ ಐಬಿಎಂಆರ್‌ ಕಾಲೇಜು ಬಹುಮಾನ ಪಡೆದುಕೊಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ