ಆ್ಯಪ್ನಗರ

ಸಹಕಾರಿ ಸಂಘಗಳಿಂದ ಅಭಿವೃದ್ಧಿ ಸಾಧ್ಯ

ಕಲಘಟಗಿ: ಸಹಕಾರಿ ಸಂಘಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅರ್ಥ ವ್ಯವಸ್ಥೆ ಬದಲಿಸಲು ಸಾಧ್ಯ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು. ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ, ಧಾರವಾಡ ಜಿಲ್ಲಾಸಹಕಾರ ಯೂನಿಯನ್‌, ಧಾರವಾಡ ಕೆಸಿಸಿ ಬ್ಯಾಂಕ್‌ ಹಾಗೂ ಕಲಘಟಗಿ ತಾಲೂಕಿನ ಎಲ್ಲಸಹಕಾರ

Vijaya Karnataka 19 Nov 2019, 5:00 am
ಕಲಘಟಗಿ: ಸಹಕಾರಿ ಸಂಘಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅರ್ಥ ವ್ಯವಸ್ಥೆ ಬದಲಿಸಲು ಸಾಧ್ಯ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
Vijaya Karnataka Web development is possible through cooperatives
ಸಹಕಾರಿ ಸಂಘಗಳಿಂದ ಅಭಿವೃದ್ಧಿ ಸಾಧ್ಯ

ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ, ಧಾರವಾಡ ಜಿಲ್ಲಾಸಹಕಾರ ಯೂನಿಯನ್‌, ಧಾರವಾಡ ಕೆಸಿಸಿ ಬ್ಯಾಂಕ್‌ ಹಾಗೂ ಕಲಘಟಗಿ ತಾಲೂಕಿನ ಎಲ್ಲಸಹಕಾರ ಸಂಘಗಳ ಆಶ್ರಯದಲ್ಲಿಸಹಕಾರ ಸಂಘಗಳ ಮೂಲಕ ಸರಕಾರದ ಹೊಸ ಯೋಜನೆಗಳು ದಿನಾಚರಣೆ ಹಾಗೂ ಕೆಸಿಸಿ ಬ್ಯಾಂಕ್‌ ಶಾಖೆಯ ಗ್ರಾಹಕರ ಸಭೆಯಲ್ಲಿಮಾತನಾಡಿದರು.

ಸಹಕಾರಿ ಸಂಘಗಳು ಕೆಲವು ಅಭಿವೃದ್ಧಿ ಹೊಂದಿವೆ. ಇನ್ನೂ ಕೆಲವು ಅಭಿವೃದ್ಧಿ ಹೊಂದಬೇಕಿದೆ. ವಿಶೇಷ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಮತ್ತು ಅವರ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮೂಲ ಉದ್ದೇಶ ಎಂದರು.

ಕೆಸಿಸಿ ಬ್ಯಾಂಕ ಜಿಲ್ಲಾಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮುನಿಯಪ್ಪ ಮಾತನಾಡಿ, ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಲದಲ್ಲಿಮರುಪಾವತಿ ಮಾಡಿದಲ್ಲಿಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಅಧ್ಯಕ್ಷ ವಹಿಸಿ ಮಾತನಾಡಿದ ಕೆಸಿಸಿ ಬ್ಯಾಂಕ ನಿರ್ದೇಶಕರಾದ ಮಂಜುನಾಥಗೌಡ ಮುರಳ್ಳಿ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕೆಸಿಸಿ ಬ್ಯಾಂಕ್‌ಗೆ 2 ಕೋಟಿ ಸಾಲವನ್ನು ನೀಡಿದ್ದು ಹಾಗೂ 13 ಕೋಟಿ ಠೇವಣಿ ಕೂಡ ಹೊಂದಿದೆ ಎಂದರು.

ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೆಎಂಎಫ್‌ ನಿರ್ದೇಶಕಿ ಗೀತಾ ಮರಲಿಂಗನ್ನವರ, ಎಸ್‌.ಹಂಚಿನಾಳ, ಶಿವಣ್ಣ ಅದರಗುಂಚಿ, ಮಲ್ಲಯ್ಯಸ್ವಾಮಿ ತೋಟಗಂಟಿ, ಸವಿತಾ ಹಿರೇಮಠ, ಎಸ್‌.ಎನ್‌.ರಾಯನಾಳ, ಲಿಂಗರಡ್ಡಿ ನಡುವಿನಮನಿ, ಬಸವರಾಜ ಕಡ್ಲೆನವರ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ