ಆ್ಯಪ್ನಗರ

ಸಮಾನತೆಯಿಂದ ದೇಶದ ಅಭಿವೃದ್ಧಿ: ಎ.ಎ.ಖಾಜಿ

ಧಾರವಾಡ : ಹೆಣ್ಣು-ಗಂಡೆಂಬ ಲಿಂಗಭೇದ ಮಾಡದೇ ಸಮಾಜದಲ್ಲಿ ಇಬ್ಬರನ್ನೂ ಸಮಾನರನ್ನಾಗಿ ಕಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಗರ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಹೇಳಿದರು.

Vijaya Karnataka 29 May 2019, 5:00 am
ಧಾರವಾಡ : ಹೆಣ್ಣು-ಗಂಡೆಂಬ ಲಿಂಗಭೇದ ಮಾಡದೇ ಸಮಾಜದಲ್ಲಿ ಇಬ್ಬರನ್ನೂ ಸಮಾನರನ್ನಾಗಿ ಕಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ನಗರ ಕ್ಷೇತ್ರ ಶಿಕ್ಷ ಣಾಧಿಕಾರಿ ಎ.ಎ.ಖಾಜಿ ಹೇಳಿದರು.
Vijaya Karnataka Web DRW-27RANGA15
ಧಾರವಾಡ ಕ್ಲಾಸಿಕ್‌ಇಂಟರನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ನಡೆದ 'ಹೆಣ್ಣು ಶಿಶು ರಕ್ಷಿಸಿ' ಕಾರ್ಯಕ್ರಮವನ್ನು ಬಿಇಓ ಎ.ಎ. ಖಾಜಿ ಉದ್ಘಾಟಿಸಿದರು.


ಇಲ್ಲಿನ ತಪೋವನದಲ್ಲಿರುವ ಕ್ಲಾಸಿಕ್‌ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಶಾಲೆಯ 2019-20ನೇ ಸಾಲಿನ ಶೈಕ್ಷ ಣಿಕ ವರ್ಷದ ಶಾಲಾ ಪುನಾರಂಭಗೊಂಡ ಅಂಗವಾಗಿ ಸೋಮವಾರ 'ಹೆಣ್ಣು ಶಿಶು ರಕ್ಷಿಸಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆಣ್ಣುಭ್ರೂಣ ಹತ್ಯೆಯಂತಹ ಪಾಪ ಕೃತ್ಯಕ್ಕೆ ಪಾಲಕರು ಕೈಹಾಕದೇ ಹೆಣ್ಣನ್ನು ಉಳಿಸಿ, ಬೆಳೆಸಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಕ್ಲಾಸಿಕ್‌ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ ್ಮಣ ಉಪ್ಪಾರ ಮಾತನಾಡಿ, ಇಂದು ಸ್ತ್ರೀ ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು, ಸ್ತ್ರೀ ಹಾಗೂ ಪುರುಷರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಇದಿಮ್ಮನವರ, ಮುಖ್ಯಾಧ್ಯಾಪಕಿ ಶರ್ವಾಣಿ, ಶಿಕ್ಷ ಕರಾದ ಪುಷ್ಪಾ, ಸಂಗೀತಾ, ಶ್ರೀದೇವಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ