ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಧರ್ಮಸಂಸ್ಕಾರ ಮತ್ತು ಜನಜಾಗೃತಿ ಧರ್ಮ ಸಮಾರಂಭ

ಹುಬ್ಬಳ್ಳಿ : ಮನುಷ್ಯನಲ್ಲಿ ಎರಡು ಗುಣಗಳಿವೆ. ಸಂಸ್ಕಾರದಿಂದ ಸದ್ಗುಣಗಳು ಬೆಳೆಯುತ್ತವೆ. ಸಂಸ್ಕಾರವಿಲ್ಲದಿದ್ದರೆ ದುರ್ಗುಣಗಳು ಬೆಳೆಯುತ್ತವೆ. ಸಂಸ್ಕಾರದಿಂದ ಜೀವನ ಸದೃಢಗೊಳ್ಳಲು ಸಾಧ್ಯವಾಗುತ್ತದೆ. ಸುಖ ಶಾಂತಿದಾಯಕ ಬದುಕಿಗೆ ಸಂಸ್ಕಾರದ ಅವಶ್ಯಕತೆ ಬಹಳಷ್ಟಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Vijaya Karnataka 10 May 2019, 5:00 am
ಹುಬ್ಬಳ್ಳಿ : ಮನುಷ್ಯನಲ್ಲಿ ಎರಡು ಗುಣಗಳಿವೆ. ಸಂಸ್ಕಾರದಿಂದ ಸದ್ಗುಣಗಳು ಬೆಳೆಯುತ್ತವೆ. ಸಂಸ್ಕಾರವಿಲ್ಲದಿದ್ದರೆ ದುರ್ಗುಣಗಳು ಬೆಳೆಯುತ್ತವೆ. ಸಂಸ್ಕಾರದಿಂದ ಜೀವನ ಸದೃಢಗೊಳ್ಳಲು ಸಾಧ್ಯವಾಗುತ್ತದೆ. ಸುಖ ಶಾಂತಿದಾಯಕ ಬದುಕಿಗೆ ಸಂಸ್ಕಾರದ ಅವಶ್ಯಕತೆ ಬಹಳಷ್ಟಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
Vijaya Karnataka Web dharmasthala and janajagrithi dharma ceremony in hubli
ಹುಬ್ಬಳ್ಳಿಯಲ್ಲಿ ಧರ್ಮಸಂಸ್ಕಾರ ಮತ್ತು ಜನಜಾಗೃತಿ ಧರ್ಮ ಸಮಾರಂಭ


ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಜರುಗಿದ ಧರ್ಮಸಂಸ್ಕಾರ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಂಸ್ಕಾರದ ಕೊರತೆಯಿಂದ ಮನುಷ್ಯ ಜೀವನ ಅಧಃಪತನದತ್ತ ಹೊರಟಿದೆ. ಮಾನಸಿಕ ಸ್ಥಿರತೆ ಸಮಾಧಾನ ಕಳೆದುಕೊಳ್ಳುವಂತಾಗಿದೆ. ಎಲ್ಲ ಧರ್ಮಗಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಪಡೆದುಕೊಳ್ಳಬೇಕೆಂದು ಹೇಳುತ್ತವೆ. ವೀರಶೈವ ಧರ್ಮದಲ್ಲಿ ಜೀವಾತ್ಮ ಪರಮಾತ್ಮನಾಗಲು ಶಿವದೀಕ್ಷಾ ಅಯ್ಯಾಚಾರ ಪಡೆದುಕೊಂಡು ಬಾಳಬೇಕೆಂದು ನಿರೂಪಿಸುತ್ತದೆ. ಮಲತ್ರಯಗಳನ್ನು ನಾಶ ಮಾಡಿ ಶಿವಜ್ಞಾನವನ್ನು ಉಂಟು ಮಾಡುವುದೇ ಶಿವದೀಕ್ಷೆ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಅತ್ಯುನ್ನತವಾದ ಧರ್ಮ ಸಿದ್ಧಾಂತ ಬೋಧಿಸಿ ಉದ್ಧರಿಸಿದ್ದಾರೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದೆಂದು ಸಾರಿದ್ದಾರೆ. ಕಾಯಕ ಮತ್ತು ದಾಸೋಹದ ಮೂಲಕ ಜೀವನದಲ್ಲಿ ಶ್ರೇಯಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ಆರ್‌.ಎಂ.ಹಿರೇಮಠ ಅವರ ಮೊಮ್ಮಗ ಕುಮಾರ ಯಶ್‌ ಹಿರೇಮಠ ಜೊತೆಗೆ 63 ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ತಮಗೆ ಸಂತಸ ತಂದಿದೆ ಎಂದರು.

ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಸೂಡಿ ಜುಕ್ತಿಹಿರೇಮಠದ ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ವಟುಗಳಿಗೆ ಸಂಸ್ಕಾರ ನೀಡಿ ಮಂತ್ರ ಬೋಧಿಸಿ ಶುಭ ಹಾರೈಸಿದರು. ನ್ಯಾಯವಾದಿ ಜಿ.ಆರ್‌.ಅಂದಾನಿಮಠ ಮತ್ತು ಡಾ. ಎಸ್‌.ಎಸ್‌.ಹಿರೇಮಠ ಸಮಾರಂಭವನ್ನು ಉದ್ಘಾಟಿಸಿದರು. ಸುಳ್ಳ, ಸೂಡಿ, ಕಲಘಟಗಿ, ಬ್ಯಾಹಟ್ಟಿ ಮತ್ತು ಸಂಗೊಳ್ಳಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಎನ್‌.ಬಿ.ಹಿರೇಮಠ, ಅಜ್ಜಯ್ಯ ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ವಿಶ್ವನಾಥ ಹಿರೇಗೌಡ್ರ, ಇಂಧುಮತಿ ಮಾನ್ವಿ ಮೊದಲಾದವರು ಉಪಸ್ಥಿತರಿದ್ದರು. ಆರ್‌.ಎಂ.ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಜಗದ್ಗುರು ರೇಣುಕಾಚಾ¿åರ್‍ ಗುರುಕುಲ ಸಾಧಕರಿಂದ ವೇದಘೋಷ, ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಸದಸ್ಯೆಯರಿಂದ ಪ್ರಾರ್ಥನೆ ಜರುಗಿತು. ಜಿ.ವಿ.ಹಿರೇಮಠ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ