ಧಾರವಾಡ: ಕಟ್ಟಡ ಕುಸಿತದಲ್ಲಿ ಶನಿವಾರ ತಡ ರಾತ್ರಿ ಒಂದು ಮೃತದೇಹ ಪತ್ತೆಯಾಗಿದೆ. ಸದ್ಯ ಮೃತರ ಸಂಖ್ಯೆ 16ಕ್ಕೆ ಏರಿಕೆ ಆಗಿದ್ದು 54 ಜನರನ್ನು ರಕ್ಷಣೆ ಮಾಡಲಾಗಿದೆ.
ಬೈಲಹೊಂಗಲ ತಾಲೂಕಿನ ಈರಪ್ಪಾ ಹಡಪದ ಅವರ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದವರೆದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
7 ಜನ ಅಧಿಕಾರಿಗಳ ಅಮಾನತು:
ಕಟ್ಟಡ ಕುಸಿತ ಪ್ರಕರಣ ಗಂಭೀರಗೊಂಡಿದ್ದು, ಈಗಾಗಲೇ ನಾಲ್ವರು ಕಟ್ಟಡ ಮಾಲೀಕರು ಹಾಗೂ ಆರ್ಕಿಟೆಕ್ಟ್, ಸೂಪರವೈಜಿಂಗ್ ಎಂಜಿನಿಯರ್ ವಿರುದ್ಧ ಮಹಾನಗರ ಪಾಲಿಕೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಆದರೆ, ಇಲ್ಲಿ ದೂರು ನೀಡಿದ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಸೇರಿದಂತೆ ಏಳು ಜನ ಅಧಿಕಾರಿಗಳನ್ನು ಈ ಘಟನೆಗೆ ಹೊಣೆ ಮಾಡಿರುವ ಸರಕಾರ ಅವರನ್ನು ಅಮಾನತುಗೊಳಿಸಿದೆ.
ಈಗಾಗಲೇ ಪೊಲೀಸರ ವಶದಲ್ಲಿದ್ದ ಕಟ್ಟಡದ ಇಬ್ಬರು ಮಾಲೀಕರು ಶನಿವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಮೂವರನ್ನು ನ್ಯಾಯಾಲಯ ಮಾರ್ಚ್ 25ರ ವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಅದೇ ರೀತಿ ನಾಲ್ಕು ದಿನ ಪೊಲೀಸ್ ವಶದಲ್ಲಿರುವ ಎಂಜಿನಿಯರ್ ವಿವೇಕ ಪವಾರ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಶನಿವಾರ ಸಂಜೆ ಅವರನ್ನು ಕಟ್ಟಡದ ಸ್ಥಳಕ್ಕೆ ಕರೆತಂದು ಹಲವು ಮಾಹಿತಿಗಳನ್ನು ಕಲೆಹಾಕಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ರಾಜಕಾರಣಿಗಳ ದಂಡು:
ದುರಂತ ಸ್ಥಳಕ್ಕೆ ಶನಿವಾರ ರಾಜಕಾರಣಿಗಳ ದಂಡೇ ಬಂದು ಹೋಯಿತು. ಡಿಸಿಎಂ ಜಿ. ಪರಮೇಶ್ವರ, ಸಚಿವರಾದ ಯು.ಟಿ.ಖಾದರ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ ಕುಲಕರ್ಣಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವರು ನಮ್ಮ ಸಂಬಂಧಿಗಳು ಕಟ್ಟಡದಡಿ ಇದ್ದಾರೆ ಅವರನ್ನು ರಕ್ಷಿಸಿಕೊಡಿ ಎಂದು ಫೋಟೊ ಹಿಡಿದು ಸಚಿವರಲ್ಲಿ ವಿನಂತಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸರಕಾರದ ಪ್ರತಿನಿಧಿಗಳು, ಕಟ್ಟಡ ನಿರ್ಮಾಣಕ್ಕೆ ಕೆಲ ಕಠಿಣ ನಿಯಮಗಳ ಪಾಲನೆ ಕಡ್ಡಾಯಗೊಳಿಸಿ ಹೊಸ ಕಾನೂನು ರೂಪಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಧಾರವಾಡದಲ್ಲಿ ನಡೆದ ಈ ದುರ್ಘಟನೆ ಹೊಸ ಕಾನೂನು ರೂಪಿಸಲು ಕಾರಣವಾಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ಬೈಲಹೊಂಗಲ ತಾಲೂಕಿನ ಈರಪ್ಪಾ ಹಡಪದ ಅವರ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಕಾರ್ಯಾಚರಣೆ ಮುಂದವರೆದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವವಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
7 ಜನ ಅಧಿಕಾರಿಗಳ ಅಮಾನತು:
ಕಟ್ಟಡ ಕುಸಿತ ಪ್ರಕರಣ ಗಂಭೀರಗೊಂಡಿದ್ದು, ಈಗಾಗಲೇ ನಾಲ್ವರು ಕಟ್ಟಡ ಮಾಲೀಕರು ಹಾಗೂ ಆರ್ಕಿಟೆಕ್ಟ್, ಸೂಪರವೈಜಿಂಗ್ ಎಂಜಿನಿಯರ್ ವಿರುದ್ಧ ಮಹಾನಗರ ಪಾಲಿಕೆ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಆದರೆ, ಇಲ್ಲಿ ದೂರು ನೀಡಿದ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಸೇರಿದಂತೆ ಏಳು ಜನ ಅಧಿಕಾರಿಗಳನ್ನು ಈ ಘಟನೆಗೆ ಹೊಣೆ ಮಾಡಿರುವ ಸರಕಾರ ಅವರನ್ನು ಅಮಾನತುಗೊಳಿಸಿದೆ.
ಈಗಾಗಲೇ ಪೊಲೀಸರ ವಶದಲ್ಲಿದ್ದ ಕಟ್ಟಡದ ಇಬ್ಬರು ಮಾಲೀಕರು ಶನಿವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ಮೂವರನ್ನು ನ್ಯಾಯಾಲಯ ಮಾರ್ಚ್ 25ರ ವರೆಗೆ ಪೊಲೀಸ್ ವಶಕ್ಕೆ ನೀಡಿದೆ. ಅದೇ ರೀತಿ ನಾಲ್ಕು ದಿನ ಪೊಲೀಸ್ ವಶದಲ್ಲಿರುವ ಎಂಜಿನಿಯರ್ ವಿವೇಕ ಪವಾರ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಶನಿವಾರ ಸಂಜೆ ಅವರನ್ನು ಕಟ್ಟಡದ ಸ್ಥಳಕ್ಕೆ ಕರೆತಂದು ಹಲವು ಮಾಹಿತಿಗಳನ್ನು ಕಲೆಹಾಕಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ರಾಜಕಾರಣಿಗಳ ದಂಡು:
ದುರಂತ ಸ್ಥಳಕ್ಕೆ ಶನಿವಾರ ರಾಜಕಾರಣಿಗಳ ದಂಡೇ ಬಂದು ಹೋಯಿತು. ಡಿಸಿಎಂ ಜಿ. ಪರಮೇಶ್ವರ, ಸಚಿವರಾದ ಯು.ಟಿ.ಖಾದರ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ, ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ ಕುಲಕರ್ಣಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಶೇಖರಪ್ಪ ಸೇರಿದಂತೆ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲವರು ನಮ್ಮ ಸಂಬಂಧಿಗಳು ಕಟ್ಟಡದಡಿ ಇದ್ದಾರೆ ಅವರನ್ನು ರಕ್ಷಿಸಿಕೊಡಿ ಎಂದು ಫೋಟೊ ಹಿಡಿದು ಸಚಿವರಲ್ಲಿ ವಿನಂತಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸರಕಾರದ ಪ್ರತಿನಿಧಿಗಳು, ಕಟ್ಟಡ ನಿರ್ಮಾಣಕ್ಕೆ ಕೆಲ ಕಠಿಣ ನಿಯಮಗಳ ಪಾಲನೆ ಕಡ್ಡಾಯಗೊಳಿಸಿ ಹೊಸ ಕಾನೂನು ರೂಪಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಧಾರವಾಡದಲ್ಲಿ ನಡೆದ ಈ ದುರ್ಘಟನೆ ಹೊಸ ಕಾನೂನು ರೂಪಿಸಲು ಕಾರಣವಾಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.