ಆ್ಯಪ್ನಗರ

ಚಲಿಸುವ ಧಾರವಾಡ ಸೈಕಲ್‌ ಯಾತ್ರೆ ನಾಳೆ

ಧಾರವಾಡ: ಕೋವಿಡ್‌ ಹಾಗೂ ಅತಿವೃಷ್ಟಿ ಸಂಕಷ್ಟದಲ್ಲಿನಡೆದ ಭ್ರಷ್ಟಾಚಾರ, ಹದಗೆಟ್ಟ ಆರೋಗ್ಯ- ಆಡಳಿತ ವ್ಯವಸ್ಥೆ ಬಗ್ಗೆ ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮತಿ ವತಿಯಿಂದ ಅ.2ರಂದು ಬೆಳಗ್ಗೆ 9ಕ್ಕೆ 'ಚಲಿಸುವ ಧಾರವಾಡ ಸೈಕಲ್‌ ಯಾತ್ರೆ' ಹಮ್ಮಿಕೊಂಡಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ

Vijaya Karnataka 1 Oct 2020, 5:00 am
ಧಾರವಾಡ: ಕೋವಿಡ್‌ ಹಾಗೂ ಅತಿವೃಷ್ಟಿ ಸಂಕಷ್ಟದಲ್ಲಿನಡೆದ ಭ್ರಷ್ಟಾಚಾರ, ಹದಗೆಟ್ಟ ಆರೋಗ್ಯ- ಆಡಳಿತ ವ್ಯವಸ್ಥೆ ಬಗ್ಗೆ ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮತಿ ವತಿಯಿಂದ ಅ.2ರಂದು ಬೆಳಗ್ಗೆ 9ಕ್ಕೆ 'ಚಲಿಸುವ ಧಾರವಾಡ ಸೈಕಲ್‌ ಯಾತ್ರೆ' ಹಮ್ಮಿಕೊಂಡಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಜಕ್ಕಣ್ಣವರ ತಿಳಿಸಿದರು.
Vijaya Karnataka Web dharwad cycle ride tomorrow
ಚಲಿಸುವ ಧಾರವಾಡ ಸೈಕಲ್‌ ಯಾತ್ರೆ ನಾಳೆ


ನಗರದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಹಲವು ದಶಕಗಳಿಂದ ರಾಜ್ಯದ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಆಡಳಿತ ವ್ಯವಸ್ಥೆಯಿಂದ ಕೊರೊನಾ ಹೆಸರಿನಲ್ಲಿಜನರ ಸಂಪತ್ತು ಲೂಟಿ ನಡೆದಿದೆ. ಆಡಳಿತದ ಅಕ್ರಮ ಬಯಲಿಗೆ ಎಳೆಯುವ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಯಾತ್ರೆ ಹಮ್ಮಿಕೊಂಡಿದೆ. ಅ.2ರಂದು ಬೆಳಗ್ಗೆ 9ಕ್ಕೆ ನಗರದ ಮುರುಘಾಮಠದಿಂದ ಯಾತ್ರೆ ಆರಂಭಗೊಂಡು, ವಿವೇಕಾನಂದ ವೃತ್ತ, ಜ್ಯುಬ್ಲಿವೃತ್ತ, ಟೋಲ್‌ ನಾಕಾ, ನವನಗರ, ವಿದ್ಯಾನಗರ, ಚನ್ನಮ್ಮ ವೃತ್ತ, ರೈಲ್ವೆ ಸ್ಟೇಶನ್‌, ಹಳೆ ಹುಬ್ಬಳ್ಳಿ ಸರ್ಕಲ್‌ ಮಾರ್ಗವಾಗಿ ಸಂಜೆ 6ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿಸಮಾಪ್ತಿಗೊಳ್ಳಲಿದೆ ಎಂದರು.

ಯಾತ್ರೆಯಲ್ಲಿಸುಮಾರು 100ಕ್ಕೂ ಅಧಿಕ ಜನ ಭಾಗವಹಿಸಲಿದ್ದು, 40 ಜನ ಮಾತ್ರ ಸೈಕಲ್‌ ತುಳಿಯಲಿದ್ದಾರೆ. ಮಧ್ಯಾಹ್ನ ಮಾರ್ಗಮಧ್ಯದಲ್ಲಿಊಟದ ವ್ಯವಸ್ಥೆ ಮಾಡಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡು ಸೈಕಲ್‌ ಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಕೆ.ಆರ್‌.ಎಸ್‌.ನ ಜಿಲ್ಲಾಉಪಾಧ್ಯಕ್ಷ ಸಂತೋಷ ಹಂಪಣ್ಣವರ, ಅಲ್ಲಾಭಕ್ಷ ನದಾಫ್‌, ಶೋಭಾ ಪವಾರ, ಪಾರ್ವತಿ ಲಾಳಸಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ