ಆ್ಯಪ್ನಗರ

ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘ: ಎಂ.ಬಿ.ನಾತು ಪುನರಾಯ್ಕೆ

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಂ.ಬಿ. ನಾತು ಅವರನ್ನು ಅಧ್ಯಕ್ಷರನ್ನಾಗಿ ಸೋಮವಾರ ಪುನರಾಯ್ಕೆ ಮಾಡಲಾಯಿತು.

Vijaya Karnataka 12 Mar 2019, 5:00 am
ಹುಬ್ಬಳ್ಳಿ : ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿದ್ದ ಎಂ.ಬಿ. ನಾತು ಅವರನ್ನು ಅಧ್ಯಕ್ಷರನ್ನಾಗಿ ಸೋಮವಾರ ಪುನರಾಯ್ಕೆ ಮಾಡಲಾಯಿತು.
Vijaya Karnataka Web HBL-1103-2-3-11 KALMESH 9
ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ವತಿಯಿಂದ ಡಾ. ವಿ.ಜಿ. ನಾಡಗೌಡ, ಬಾಬಾಸಾಹೇಬ ನಾಡಿಗೇರ ಅವರನ್ನು ಸನ್ಮಾನಿಸಲಾಯಿತು.


ಉದ್ಯಮಿ ಸತೀಶ ಡಬೀರ ಅವರ ಅಧ್ಯಕ್ಷೆಯಲ್ಲಿ ಈ ಚುನಾವಣೆ ಪ್ರಕ್ರಿಯೆ ನಡೆಯಿತು. ಇದೇ ಸಂದರ್ಭದಲ್ಲಿ ಎ.ಸಿ. ಗೋಪಾಲ, ಕೇಶವ ಬಾನದಟ್ಟಿ, ಸುಭಾಷ ಕುಲಕರ್ಣಿ, ನವಲಗುಂದ ಕೃಷ್ಣರಾಜ ಕೆಮ್ತಾರ, ಜಿ.ಆರ್‌.ಭಟ್‌ ಅವರನ್ನು ನೂತನ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಯಿತು. ಮಹಿಳಾ ಪ್ರತಿನಿಧಿಗಳಾಗಿ ಸಂಧ್ಯಾ ದಿಕ್ಷಿತ್‌, ವೀಣಾ ಹೆಗಡೆ ಆಯ್ಕೆಗೊಂಡರು.

ಇದಕ್ಕೂ ಪೂರ್ವದಲ್ಲಿ ಪಧಾನ ಕಾರ್ಯದರ್ಶಿಗಳಾದ ಮುರಳಿ ಕರ್ಜಗಿ ವಾರ್ಷಿಕ ವರದಿ ಓದಿದರು. ಖಜಾಂಚಿ ಗುರುಪ್ರಕಾಶ ಕುಲಕರ್ಣಿ ಲೆಕ್ಕ ತಪಾಸಣಾ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಅಲ್ಲದೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ವಿ.ಜಿ. ನಾಡಗೌಡ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಭಾಜನರಾದ ಬಾಬಾಸಾಹೇಬ ನಾಡಿಗೇರ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಶಂಕರ ಪಾಟೀಲ, ಎನ್‌.ಎಚ್‌. ಕುಲಕರ್ಣಿ, ಅಶೋಕ ಪಾಳಂದೆ, ಶ್ರೀಧರ ಪಾಟೀಲಕುಲಕರ್ಣಿ, ಲಕ್ಷ್ಮಣರಾವ್‌ ಓಕ, ಸಂಜೀವ ಜೋಶಿ, ಡಾ. ಬಿ.ಬಿ. ಪಾಟೀಲ, ಅಮೃತ ಗೋಡಸೆ, ಸುನೀಲ ಗುಮಾಸ್ತೆ, ಮನೋಹರ ಪರ್ವತಿ, ಮನೋಹರ ಕುಲಕರ್ಣಿ, ಆಶಾ ಪಾಟೀಲ, ಗೀತಾ ಕುಲಕರ್ಣಿ, ದಿನೇಶ ಶಣೈ, ಅನಂದ ಭಟ್‌ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ