ಆ್ಯಪ್ನಗರ

ಧಾರವಾಡ ಜಿಲ್ಲೆ ಇನ್ನಷ್ಟು ದಿನ ಕೊರೊನಾ ಹಾಟ್‌ಸ್ಪಾಟ್‌ ಪಟ್ಟಿಯಲ್ಲಿ

ಏ.29ರೊಳಗೆ ಯಾವುದೇ ಪಾಸಿಟಿವ್‌ ಪ್ರಕರಣ ದಾಖಲಾಗದಿದ್ದರೆ ಹಾಟ್‌ಸ್ಪಾಟ್‌ ಪಟ್ಟಿಯಿಂದ ಗ್ರೀನ್‌ ಝೋನ್‌ ಬರಬಹುದು ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.

Vijaya Karnataka Web 24 Apr 2020, 3:32 pm
ಹುಬ್ಬಳ್ಳಿ: ಲಾಕ್‌ಡೌನ್‌ ಎರಡನೇ ಹಂತದ ವೇಳೆ ಜಿಲ್ಲೆಯನ್ನು ಹಾಟ್‌ಸ್ಪಾಟ್‌ ಪಟ್ಟಿಯಲ್ಲಿಸೇರ್ಪಡೆ ಮಾಡಿದ ನಂತರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ. ಏ.29ರೊಳಗೆ ಯಾವುದೇ ಪಾಸಿಟಿವ್‌ ಪ್ರಕರಣ ದಾಖಲಾಗದಿದ್ದರೆ ಹಾಟ್‌ಸ್ಪಾಟ್‌ ಪಟ್ಟಿಯಿಂದ ಗ್ರೀನ್‌ ಝೋನ್‌ ಬರಬಹುದು ಎಂಬ ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.
Vijaya Karnataka Web ಕೊರೊನಾ
ಕೊರೊನಾ


ಏ.14ರಿಂದ ಏ.23 ರೊಳಗೆ ಮತ್ತೆ ಮೂರು ಪಾಸಿಟಿವ್‌ ಕೇಸ್‌ ಪತ್ತೆಯಾಗಿವೆ. ಇದರಿಂದ ಹಾಟ್‌ಸ್ಪಾಟ್‌ ಹಣೆಪಟ್ಟಿ ಇನ್ನಷ್ಟು ದಿನ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ರಾಜ್ಯ ಸರಕಾರ ಈಗಾಗಲೇ ಪಾಸಿಟಿವ್‌ ಪ್ರಕರಣ ಇಲ್ಲದೇ ಗ್ರೀನ್‌ ಝೋನ್‌ನಲ್ಲಿ ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಗೊಳಿಸಿದೆ. ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ ನಮ್ಮ ಜಿಲ್ಲೆಗೂ ಲಾಕ್‌ಡೌನ್‌ ಸಡಿಲುಗೊಳಿಸಲು ಅವಕಾಶವಿತ್ತು. ಆದರೆ, ವಾರದಲ್ಲಿ ಒಂದು, ಎರಡು ಪ್ರಕರಣಗಳು ಹೊಸದಾಗಿ ಕಂಡು ಬರುತ್ತಿರುವುದರಿಂದ ನಮ್ಮ ಜಿಲ್ಲೆಯ ಜನರಿಗೆ ಇನ್ನಷ್ಟು ದಿನ ಗಗನ ಕುಸುಮವಾಗಲಿದೆ.

ಕುಟುಂಬ ತಂದ ತಲ್ಲಣ

ಮುಲ್ಲಾಓಣಿಯ ಪಾದರಕ್ಷೆ ವ್ಯಾಪಾರಿ ಕುಟುಂಬವೇ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರಲ್ಲಿ ತಲ್ಲಣ ಮೂಡುವಂತೆ ಮಾಡಿದೆ. ಇಲ್ಲಿವರೆಗೆ ಪತ್ತೆಯಾದ 9 ಪಾಸಿಟಿವ್‌ ಪ್ರಕರಣಗಳಲ್ಲಿ ಧಾರವಾಡ ಯಲ್ಲಾಪುರ ಓಣಿಯ ಒಂದು ಪ್ರಕರಣ ಹೊರತುಪಡಿಸಿದರೆ, ಉಳಿದ 8 ಪಾಸಿಟಿವ್‌ ಪ್ರಕರಣಗಳು ಮುಲ್ಲಾಓಣಿ ಕುಟುಂಬಕ್ಕೆ ಸೇರಿವೆ.

ಗುರುವಾರ ಪತ್ತೆಯಾದ ಎರಡು ಹೊಸ ಪ್ರಕರಣಗಳು ಸಹ ಮುಲ್ಲಾ ಓಣಿ ಕುಟುಂಬದ ಸಂಬಂಧಿಗಳೇ ಆಗಿದ್ದಾರೆ. ಒಂದು ಕುಟುಂಬದ ಸದಸ್ಯರ ಬಿಟ್ಟು ಹೊಸ ಜನರಿಗೆ ಬಂದಿಲ್ಲಎನ್ನುವ ಸಮಾಧಾನ ಒಂದೆಡೆಯಾದರೆ, ಅದೊಂದೇ ಕುಟುಂಬದಿಂದ ದ್ವಿತೀಯ ಸಂಪರ್ಕದ ವ್ಯಕ್ತಿಗೂ ಪಾಸಿಟಿವ್‌ ಬಂದಿರುವುದು ಆತಂಕಕ್ಕೂ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ