ಆ್ಯಪ್ನಗರ

ಧಾರವಾಡ: ಮನೆಗೆ ನುಗ್ಗಿದ ಚರಂಡಿ ನೀರು

ಧಾರವಾಡ : ಇಲ್ಲಿನ ನೆಹರೂ ನಗರ, ಮಾಳಮಡ್ಡಿ, ಲಕ್ಷ್ಮಿಸಿಂಗನ್‌ ಕೇರಿ, ದಾನೇಶ್ವರ ನಗರದ ಮನೆಯೊಂದರಲ್ಲಿ ಚರಂಡಿ ನೀರು ಒಳನುಗ್ಗಿ ಹಾನಿ ಆಗಿದೆ. ಉಳಿದಂತೆ ತಗ್ಗು ಪ್ರದೇಶದ ಬಡವಾಣೆಗಳಲ್ಲಿ ನೀರು ತುಂಬಿದ ಪರಿಣಾಮ ಅಲ್ಲಿನ ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ.

Vijaya Karnataka 1 Jul 2019, 5:00 am
ಧಾರವಾಡ : ಇಲ್ಲಿನ ನೆಹರೂ ನಗರ, ಮಾಳಮಡ್ಡಿ, ಲಕ್ಷ್ಮಿಸಿಂಗನ್‌ ಕೇರಿ, ದಾನೇಶ್ವರ ನಗರದ ಮನೆಯೊಂದರಲ್ಲಿ ಚರಂಡಿ ನೀರು ಒಳನುಗ್ಗಿ ಹಾನಿ ಆಗಿದೆ. ಉಳಿದಂತೆ ತಗ್ಗು ಪ್ರದೇಶದ ಬಡವಾಣೆಗಳಲ್ಲಿ ನೀರು ತುಂಬಿದ ಪರಿಣಾಮ ಅಲ್ಲಿನ ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ.
Vijaya Karnataka Web dharwad dumped sewage water
ಧಾರವಾಡ: ಮನೆಗೆ ನುಗ್ಗಿದ ಚರಂಡಿ ನೀರು


ಎಂದಿನಂತೆ ಟೋಲ್‌ ನಾಕಾ ಹಾಗೂ ಎನ್‌ಟಿಎಫ್‌ ಹತ್ತಿರದ ರಸ್ತೆಯಲ್ಲಿ ಮಳೆಯ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಾಹನಗಳಿಗೆ ದಾರಿ ಕಾಣದೆ ಸವಾರರು ಪರದಾಡಿದರು. ಕೆಲ ಹೊತ್ತು ಚಿಗರಿ ಬಸ್‌ ಸೇರಿದಂತೆ ಇನ್ನೂಳಿದ ವಾಹನ ಸವಾರರು ಪಾಲಿಕೆ ಅಧಿಕಾರಿಗಳು, ಬಿಆರ್‌ಟಿಎಸ್‌ ಅಧಿಕಾರಿಗಳು ಹಾಗೂ ಜನನಪ್ರತಿನಿಧಿಗಳ ಕಾರ್ಯವೈಖರಿಗೆ ಛಿಮಾರಿ ಹಾಕಿದರು.

ಅಲ್ಲದೇ ತಾಲೂಕಿನ ಯಾದವಾಡ ಉಪ್ಪಿನಬೆಟಗೇರಿ, ಕರಡಿಗುಡ್ಡ, ಅಮ್ಮಿನಬಾವಿ, ದೇವರ ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಗೆ ಈ ಮಳೆ ಪೂರಕ ಆಗಿದ್ದರೆ ಇನ್ನೂ ಬಿತ್ತನೆ ಮಾಡಲು ಅಣಿ ಆಗಿರುವ ರೈತರಿಗೆ ಈ ಮಳೆಯಿಂದ ಅನುಕೂಲ ಆಗಲಿದೆ.

ಉಳಿದಂತೆ ನಿರಂತರ ಸುರಿದ ಮಳೆಯಿಂದ ಜನ್ನತ ನಗರದಲ್ಲಿ ಹೆಸ್ಕಾಂ ಇಲಾಖೆ ವಿದ್ಯುತ್‌ ಕಂಬ ಧರೆಗೆ ಉರುಳಿದಿದೆ. ಕಂಬ ಧರೆಗೆ ಉರುಳಿದ ಪರಿಣಾಮ ಆ ಬಡಾವಣೆಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿ ಜನತೆ ಪರದಾಡಿದ ಪ್ರಸಂಗ ನಡೆಯಿತು. ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿರುವ ಬಗ್ಗೆ ವರದಿಯಾಗಿದೆ.

ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಳೆ ಧಾರವಾಡ ಮರುಕಳಿದಂತಾಗಿದೆ ಎಂದು ತಮ್ಮ ಫೇಸ್‌ ಬುಕ್‌, ವಾಟ್ಸ್‌ಆ್ಯಪ್‌ ಸ್ಟೇಟಸ್‌ಗಲ್ಲಿ ಮಳೆಯೊಂದಿಗೆ ಸೆಲ್ಫಿ ಕ್ಲಿಕ್‌ ಮಾಡಿಕೊಂಡು ಪೋಟೋಗಳನ್ನು ಅಪ್‌ಲೋಡ್‌ ಮಾಡಿ ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ