ಆ್ಯಪ್ನಗರ

ಧಾರವಾಡ ಭೀಕರ ಅಪಘಾತ: ನೂರಾರು ಜನರ ಪ್ರಾಣ ತೆಗೆದ ಕಿಲ್ಲರ್‌ ಬೈಪಾಸ್‌ ಬಗ್ಗೆ ಜಾಲತಾಣದಲ್ಲಿ ಆಕ್ರೋಶ

ಬೈಪಾಸ್‌ ರಸ್ತೆಯನ್ನು 1200 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ ಡಿಪಿಆರ್‌ ಸಿದ್ಧಗೊಂಡಿದೆ. ಜ.27ರಂದು ನ್ಯಾಷನಲ್‌ ಹೈವೇ ಚೇರ್ಮನ್‌ ಹಾಗೂ ಡೈರೆಕ್ಟರ್‌ ಜನರಲ್‌ ಸಭೆ ಮಾಡಲಾಗುತ್ತದೆ. ​​ರಾಜ್ಯ ಸರಕಾರ ರಸ್ತೆ ಹಾಗೂ ಭೂಮಿ ಹಸ್ತಾಂತರ ಮಾಡಿದರೆ ಕೆಲಸ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

Vijaya Karnataka Web 16 Jan 2021, 2:57 pm
ಧಾರವಾಡ: ಹುಬ್ಬಳ್ಳಿ- ಧಾರವಾಡ ಮಧ್ಯದ ಕಿಲ್ಲರ್‌ ಬೈಪಾಸ್‌ ಇದೀಗ ಮತ್ತೆ 11 ಜನರನ್ನು ಬಲಿ ಪಡೆದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿ ಸತತ ಅಪಘಾತಗಳು ನಡೆಯುತ್ತಿದ್ದರೂ ಆಡಳಿತ ಏಕೆ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲಎಂಬ ಪ್ರಶ್ನೆಯೊಂದಿಗೆ ತುರ್ತಾಗಿ ಬೈಪಾಸ್‌ ಮೇಲ್ದರ್ಜೆಗೆ ಏರಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿವೆ.
Vijaya Karnataka Web Dharwad accident


ಹುಬ್ಬಳ್ಳಿಯ ಬಿಡ್ನಾಳ ವೃತ್ತದಿಂದ ನರೇಂದ್ರ ಕ್ರಾಸ್‌ವರೆಗೂ ಇರುವ ಈ ಬೈಪಾಸ್‌ ನೂರಾರು ಜನರನ್ನು ಬಲಿ ಪಡೆದಿದೆ. ಪುಣೆ- ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಬೈಪಾಸ್‌ ವಿಸ್ತರಣೆ ಆಗಿಲ್ಲ. 8 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್‌ನಲ್ಲಿಯೂ ಅದೇ ವೇಗದಲ್ಲಿ ಇರುವುದರಿಂದ ಇಂತಹ ಅಪಘಾತಗಳು ನಡೆಯುತ್ತಿವೆ ಎಂಬುದು ತಜ್ಞರ ಅಭಿಪ್ರಾಯ. ಬೈಪಾಸ್‌ ಕೂಡ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕು ಎಂಬುದು ಆಗ್ರಹ.

ಹುಬ್ಬಳ್ಳಿ-ಧಾರವಾಡ ಮಧ್ಯೆ ಬೈಪಾಸ್‌ಗೆ ಅಷ್ಟಪಥ ರಸ್ತೆ ಅವಶ್ಯಕತೆಯಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ -48ಕ್ಕೆ ಜೋಡಿಸಬೇಕು ಎಂದು ಕಾಂಗ್ರೆಸ್‌ ಪಕ್ಷದ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಆಗ್ರಹಿಸಿದ್ದು, ಈ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

ಧಾರವಾಡ: ಗೋವಾಕ್ಕೆ ಹೊರಟವರು ಮಸಣಕ್ಕೆ, ಟೆಂಪೋ ಹತ್ತಿದ ನತದೃಷ್ಟ ಮಹಿಳೆಯರ ನಗುವಿನ ಕೊನೆಯ ಸೆಲ್ಫಿ

ಷಟ್ಪಥಕ್ಕೆ ಡಿಪಿಆರ್‌ ಸಿದ್ಧ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬೈಪಾಸ್‌ ರಸ್ತೆಯನ್ನು 1200 ಕೋಟಿ ರೂ. ವೆಚ್ಚದಲ್ಲಿ 6 ಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ ಡಿಪಿಆರ್‌ ಸಿದ್ಧಗೊಂಡಿದೆ. ಜ.27ರಂದು ನ್ಯಾಷನಲ್‌ ಹೈವೇ ಚೇರ್ಮನ್‌ ಹಾಗೂ ಡೈರೆಕ್ಟರ್‌ ಜನರಲ್‌ ಸಭೆ ಮಾಡಲಾಗುತ್ತದೆ.

ರಾಜ್ಯ ಸರಕಾರ ರಸ್ತೆ ಹಾಗೂ ಭೂಮಿ ಹಸ್ತಾಂತರ ಮಾಡಿದರೆ ಕೆಲಸ ಆರಂಭಿಸಲಾಗುವುದು ಎಂದಿದ್ದಾರೆ. 60 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಶೋಕ ಖೇಣಿ ಅವರು ಬೈಪಾಸ್‌ ಅಭಿವೃದ್ಧಿಗೆ ತಂಟೆ ಮಾಡ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಈಗ ಮೃತಪಟ್ಟವರ ಮನೆಗೆ ಸ್ವತಃ ನಾನೇ ಭೇಟಿ ನೀಡುವೆ ಎಂದು ಜೋಶಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ