ಆ್ಯಪ್ನಗರ

ಡಯಾಬಿಟಿಸ್‌ ರಿವರ್ಸಲ್‌ ವರ್ಕಶಾಪ್‌

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿಮಾಧವಬಾಗ್‌ ಕ್ಲಿನಿಕ್‌ ಆಶ್ರಯದಲ್ಲಿವಿಶ್ವ ಮಧುಮೇಹ ದಿನಾಚರಣೆ ನಿಮಿತ್ತ ನ.16ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಡಯಾಬಿಟಿಸ್‌ ರಿವರ್ಸಲ್‌ ವರ್ಕಶಾಪ್‌ ಹಮ್ಮಿಕೊಳ್ಳಲಾಗಿದೆ ಎಂದು ಮಾಧವಭಾಗ ಸಂಸ್ಥೆ ಆರ್‌ಐಸಿ

Vijaya Karnataka 14 Nov 2019, 5:00 am
ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿಮಾಧವಬಾಗ್‌ ಕ್ಲಿನಿಕ್‌ ಆಶ್ರಯದಲ್ಲಿವಿಶ್ವ ಮಧುಮೇಹ ದಿನಾಚರಣೆ ನಿಮಿತ್ತ ನ.16ರಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಡಯಾಬಿಟಿಸ್‌ ರಿವರ್ಸಲ್‌ ವರ್ಕಶಾಪ್‌ ಹಮ್ಮಿಕೊಳ್ಳಲಾಗಿದೆ ಎಂದು ಮಾಧವಭಾಗ ಸಂಸ್ಥೆ ಆರ್‌ಐಸಿ ಮುಖ್ಯಸ್ಥ ಡಾ.ಪ್ರಸಾದ ದೇಶಪಾಂಡೆ ಹೇಳಿದರು.
Vijaya Karnataka Web diabetes reversal workshop
ಡಯಾಬಿಟಿಸ್‌ ರಿವರ್ಸಲ್‌ ವರ್ಕಶಾಪ್‌


ನಗರದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಂದಿನ ಕಾರ್ಯಕ್ರಮವನ್ನು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಉದ್ಘಾಟಿಸುವರು. ಕವಿವ ಸಂಘದ ಕೋಶಾಧ್ಯಕ್ಷ ಕೃಷ್ಣಾ ಜೋಶಿ, ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಸೇರಿದಂತೆ ಇತರ ಗಣ್ಯರು ಆಗಮಿಸುವರು ಎಂದರು.

ಈ ಮೊದಲು ಕರ್ನಾಟಕ ಆರೋಗ್ಯಕರ ರಾಜ್ಯವಾಗಿತ್ತು. ಅದಕ್ಕೆ ಕಾರಣ ಅಂದು ರಾಜ್ಯದಲ್ಲಿಹೊರಾಂಗಣ ಕ್ರೀಡೆಗಳ ಜತೆಗೆ ವ್ಯಾಯಾಮ, ಸರಿಯಾದ ಆಹಾರದ ಜೀವನಶೈಲಿಯನ್ನು ಜನರು ಅಳವಡಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಬದಲಾದ ಜೀವನಶೈಲಿಯಿಂದ ಜನರಿಗೆ ಕಾಯಿಲೆಗಳು ಬರುತ್ತಿವೆ. ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ ಹಾಗೂ ಬೊಜ್ಜಿನÜಂತಹ ರೋಗಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕಾಗಿ ಮಾಧವಭಾಗ ಸಂಸ್ಥೆ ಸಮಾಜದಲ್ಲಿಚಿಕಿತ್ಸೆ ಮತ್ತು ಜನಜಾಗೃತಿಯ ಕಾರ್ಯಕ್ರಮಗಳ ಹಾಕಿಕೊಳ್ಳುವ ಮೂಲಕ ರೋಗಗಳ ಕುರಿತು ಅರಿವು ಮೂಡಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿಮಾಧವಬಾಗ್‌ ಕಮ್ಯೂನಿಟಿ ಹೆಲ್ತ್‌ ಎಜ್ಯುಕೇಟರ್‌ ಪುಷ್ಪಾ ಕಳ್ಳಿಮಠ, ಮಾಧವಬಾಗ್‌ ಕ್ಲಿನಿಕ್‌ ಹೆಡ್‌ ಡಾ.ಅಕ್ಷತಾ ರಾಯ್ಕರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ