ಆ್ಯಪ್ನಗರ

ಮಾತಾಡಲಿಲ್ಲ, ನೋಡಿಯೂ ನೋಡದಂತಿದ್ದರು..!

ಕುಂದಗೋಳ ಉಪಚುನಾವಣೆ ಉಸ್ತುವಾರಿ ಸಂಬಂಧ ಪರಸ್ಪರ ಕಿತ್ತಾಡಿಕೊಂಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮತ್ತು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಸಂಶಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವೇದಿಕೆ ಹಂಚಿಕೊಂಡರು. ಆದರೆ, ಕೊನೆಯವರೆಗೂ ಪರಸ್ಪರ ಮಾತನಾಡಲಿಲ್ಲ.

Vijaya Karnataka 4 May 2019, 5:00 am
ಕುಂದಗೋಳ ಉಪಚುನಾವಣೆ ಉಸ್ತುವಾರಿ ಸಂಬಂಧ ಪರಸ್ಪರ ಕಿತ್ತಾಡಿಕೊಂಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಮತ್ತು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರು ಸಂಶಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ವೇದಿಕೆ ಹಂಚಿಕೊಂಡರು. ಆದರೆ, ಕೊನೆಯವರೆಗೂ ಪರಸ್ಪರ ಮಾತನಾಡಲಿಲ್ಲ.
Vijaya Karnataka Web did not talk look and see
ಮಾತಾಡಲಿಲ್ಲ, ನೋಡಿಯೂ ನೋಡದಂತಿದ್ದರು..!


ಮೊದಲಿಗೆ ಸತೀಶ ಜಾರಕಿಹೊಳಿ ಸಮಾವೇಶಕ್ಕೆ ಆಗಮಿಸಿ ವೇದಿಕೆ ಏರಿದರು. ಸ್ವಲ್ಪ ಹೊತ್ತಿನ ಬಳಿಕ ಡಿ.ಕೆ.ಶಿವಕುಮಾರ್‌ಆಗಮಿಸಿದರು. ಆದರೆ ಇಬ್ಬರು ಪರಸ್ಪರ ಮಾತನಾಡಲಿಲ್ಲ. ಕೈ ಕೂಡ ಕುಲುಕಲಿಲ್ಲ. ಜಾರಕಿಹೊಳಿ ಕುಳಿತ ಐದು ಕುರ್ಚಿ ಬಿಟ್ಟು ಡಿಕೆಶಿ ಆಸೀನರಾದರು. ಆದರೆ ಉದ್ಘಾಟನೆ ವೇಳೆ ಮಾತ್ರ ಇಬ್ಬರು ಅಕ್ಕಪಕ್ಕವೇ ನಿಲ್ಲುವಂತಹ ಪರಿಸ್ಥಿತಿ ಎದುರಾದರೂ ಮಾತಾಡಲಿಲ್ಲ. ಈ ಎಲ್ಲ ಘಟನೆಗಳಿಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ ಸಾಕ್ಷಿಯಾದರು

ಉತ್ತರ ಕರ್ನಾಟಕದ ಕ್ಷೇತ್ರಗಳ ಚುನಾವಣೆ ಉಸ್ತುವಾರಿಯನ್ನು ಡಿ.ಕೆ. ಶಿವಕುಮಾರ್‌ಗೆ ವಹಿಸಿದ್ದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಸತೀಶ ಜಾರಕಿಹೊಳಿ, ಈ ಭಾಗದ ಕಾಂಗ್ರೆಸ್‌ ಮುಖಂಡರಿಗೆ ಚುನಾವಣೆ ಎದುರಿಸುವ ತಾಕತ್ತಿಲ್ಲವೇ ಎಂಬ ಧಾಟಿಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ದೂರ ಉಳಿದ ಬೆಂತೂರ

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿದು ನಾಮಪತ್ರ ಹಿಂದೆ ಪಡೆದಿರುವ ಶಿವಾನಂದ ಬೆಂತೂರು ಸಮಾವೇಶಕ್ಕೆ ಗೈರಾಗಿದ್ದರು. ಉಳಿದ ಆರು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಪ್ರಚಾರಕ್ಕೆ ಚಾಲನೆ ನೀಡುವ ಸಮಾವೇಶಕ್ಕೆ ಗೈರು ಉಳಿದರು.

ಕಣ್ಣೀರಿಟ್ಟ ಕುಸುಮಾ

ಕೆಪಿಸಿಸಿ ಅಧ್ಯಕ್ಷೆ ಪುಷ್ಪಾ ಅಮರನಾಥ ಮಾತಾಡುವಾಗ ಸಿ.ಎಸ್‌ ಶಿವಳ್ಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡರು. ತಮ್ಮ ಜೀವಿತಾವಧಿಯ ಕೊನೆಯ ದಿನ ಬಡ ಮಹಿಳೆಗೆ ತಾಳಿ ಖರೀದಿಸಲು 30 ಸಾವಿರ ರೂ. ಕೊಟ್ಟಿದ್ದರು. ಈ ರೀತಿ ಪ್ರತಿವರ್ಷ ನೂರಾರು ಮಹಿಳೆಯರ ಮದುವೆಗೆ ನೆರವು ನೀಡುತ್ತಿದ್ದರು ಎಂದು ಪುಷ್ಪಾ ಹೇಳುತ್ತಿದ್ದಂತೆ ಕುಸುಮಾವತಿ ಅವರಿಗೆ ಪತಿಯ ನೆನಪಾಗಿ ಕಣ್ಣೀರಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ