ಆ್ಯಪ್ನಗರ

ಸಿಬ್ಬಂದಿಗೆ ಹೇಳಿದರೂ ಮಾಡಲಿಲ್ಲ..!

​ಹುಬ್ಬಳ್ಳಿ : 'ಮೊದಲು ನೀವು ಮಾಡಿ, ಆಮೇಲೆ ಜನರಿಗೆ ತಿಳಿವಳಿಕೆ ಕೊಡಿ' ಹೀಗೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (ನ್ಯಾಷನಲ್‌ ಗ್ರೀನ್‌ ಟ್ರಿಬುನಲ್‌(ಎನ್‌ಜಿಟಿ)ಹಸಿ ತ್ಯಾಜ್ಯ ವಿಂಗಡಿಸಿ ಅದನ್ನು ಗೊಬ್ಬರವಾಗಿ ತಯಾರಿಸುವ (ಹೋಂ

Vijaya Karnataka 31 Jul 2019, 5:00 am
ಕಾಶಪ್ಪ ಕರದಿನ
Vijaya Karnataka Web did not tell the staff
ಸಿಬ್ಬಂದಿಗೆ ಹೇಳಿದರೂ ಮಾಡಲಿಲ್ಲ..!

ಹುಬ್ಬಳ್ಳಿ : 'ಮೊದಲು ನೀವು ಮಾಡಿ, ಆಮೇಲೆ ಜನರಿಗೆ ತಿಳಿವಳಿಕೆ ಕೊಡಿ' ಹೀಗೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (ನ್ಯಾಷನಲ್‌ ಗ್ರೀನ್‌ ಟ್ರಿಬುನಲ್‌(ಎನ್‌ಜಿಟಿ)ಹಸಿ ತ್ಯಾಜ್ಯ ವಿಂಗಡಿಸಿ ಅದನ್ನು ಗೊಬ್ಬರವಾಗಿ ತಯಾರಿಸುವ (ಹೋಂ ಕಾಂಪೊಸ್ಟಿಂಗ್‌)ಕುರಿತು ಹು-ಧಾ ಮಹಾನಗರ ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಷ್ಟೇ ಅಲ್ಲದೇ, ನೀವು ಮಾಡಿದ್ದರ ಬಗ್ಗೆ ವರದಿ ಕೂಡ ಕೊಡಿ ಎಂದು ನಿರ್ದೇಶನ ನೀಡಿದೆ.

ಆದರೆ, ಪಾಲಿಕೆ ಸಿಬ್ಬಂದಿ ಏನೂ ಮಾಡಲಿಲ್ಲ.(ಮಾಡಿದ್ದರೂ ಬೆರಳಣಿಕೆಯಷ್ಟು ಮಾತ್ರ). ವರದಿ ಕೂಡ ಸಲ್ಲಿಸಲಿಲ್ಲ. ಆ ಮೂಲಕ ಮಹಾನಗರ ಪಾಲಿಕೆಯು ನ್ಯಾಯಾಧೀಕರಣದ ಸೂಚನೆಗೆ ಕವಡೆಯಷ್ಟು ಕಿಮ್ಮತ್ತು ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ .

ಕಳೆದ ಮೇ 1ರಂದು ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷರು, ಹಸಿ ತ್ಯಾಜ್ಯವನ್ನು ವಿಂಗಡಿಸಿ ಮತ್ತು ಅದರ ಸದ್ಬಳಕೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಮುನ್ನ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಮನೆಯಲ್ಲಿ ಹೋಂ ಕಾಂಪೊಸ್ಟಿಂಗ್‌ (ಹಸಿ ತ್ಯಾಜ್ಯದಿಂದ ಮನೆಯಲ್ಲಿಯೇ ಗೊಬ್ಬರ ತಯಾರಿಕೆ) ಕಡ್ಡಾಯವಾಗಿ ಮಾಡುವಂತೆ ಸ್ಪಷ್ಟವಾಗಿ ಸೂಚಿಸಿದ್ದರು.

ಹಸಿ ಕಸ ವಿಂಗಡಣೆಯನ್ನು ನೀವೇ(ಪಾಲಿಕೆ ಸಿಬ್ಬಂದಿ) ಕಾರ್ಯರೂಪಕ್ಕೆ ತರದಿದ್ದರೆ ಇನ್ನು ಸಾಮಾನ್ಯರು ಹೇಗೆ ಅನುಸರಿಸಲಿದ್ದಾರೆ ..? ಎನ್ನುವಂತೆ ಹಸಿರು ನ್ಯಾಯಾಧೀಕರಣ ಅಧ್ಯಕ್ಷರು, ಸೂಚ್ಯವಾಗಿ ಹೇಳಿರುವಂತಿದೆ. ಹಾಗೇ ಪಾಲಿಕೆಯ ಸಿಬ್ಬಂದಿಯೇ ಆದೇಶವನ್ನು ಅನುಸರಿಸದಿದ್ದಲ್ಲಿ, ಒಣ ಮತ್ತು ಹಸಿ ತ್ಯಾಜ್ಯ ವಿಂಗಡಿಸುವಂತೆ ನಾಗರಿಕರಿಗಾದರೂ ಹೇಗೆ ತಿಳಿಸಿ ಹೇಳುತ್ತಿರಿ ಎಂಬ ನೈತಿಕ ಪ್ರಶ್ನೆ ಯನ್ನು ಪಾಲಿಕೆ ಅಧಿಕಾರಿಗಳು ಎದುರಿಸುವಂತಾಗಿದೆ .

ಈ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ಪ್ರಶಾಂತ ಮಿಶ್ರಾ,'' ನಾನೇ ಮನೆಯಲ್ಲಿ ಹೋಂ ಕಾಂಪೊಸ್ಟಿಂಗ್‌ ಮಾಡಿಲ್ಲ, ಇನ್ನು ಸಿಬ್ಬಂದಿಗೆ ಹೇಗೆ ಕೇಳಲಿ'' ಎಂದು ಅನೌಪಚಾರಿಕವಾಗಿ ಮಾತನಾಡುತ್ತ ಹೇಳಿದ್ದು ಇಲ್ಲಿ ಉಲ್ಲೇಖಾರ್ಹ.

ಶೇ. 10 ಮಾತ್ರ..?
ಪಾಲಿಕೆಯಲ್ಲಿ 'ಎ' ಗ್ರೇಡ್‌ನಿಂದ ಡಿ ಗ್ರೇಡ್‌ವರೆಗೆ ಸರಿಸುಮಾರು 2500 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಶೇ.10 ರಷ್ಟು ಮಾತ್ರ ಸಿಬ್ಬಂದಿ ಹೋಮ್‌ ಕಾಂಪೊಸ್ಟಿಂಗ್‌ ಮಾಡಿದ್ದಾರೆ ಎಂದು ಪಾಲಿಕೆಯ ಅಧಿಕಾರಿಗಳೇ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಅಷ್ಟೂ ಜನ ಸಿಬ್ಬಂದಿ(ಶೇ 10)ಕೂಡ ಕಾಂಪೊಸ್ಟಿಂಗ್‌ ಮಾಡಿಲ್ಲ ಎಂದು ಅದೇ ಪಾಲಿಕೆಯ ಕೆಲವರು ಹೇಳುತ್ತಾರೆ.

ದೇಶದಲ್ಲೆಡೆ ತ್ಯಾಜ್ಯದಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು, ಪÜ್ರತಿನಿತ್ಯ ಪ್ರತಿ ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಮತ್ತು ಒಣ ತಾಜ್ಯ ವಿಂಗಡಿಸಿ ಅದನ್ನು ನಿರ್ವಹಿಸುವ ಬಗೆಯನ್ನು ಗಂಭೀರವಾಗಿ ಪರಿಗಣಿಸಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವು ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪಾಲಿಕೆ ಸಿಬ್ಬಂದಿ ಕಾರ್ಯರೂಪಕ್ಕೆ ತಂದಿರುವ ಬಗ್ಗೆ ಜೂನ್‌ 15ರೊಳಗಾಗಿ ವರದಿ ನೀಡುವಂತೆ ನಿರ್ದೇಶನ ನೀಡಿತ್ತು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪಾಲಿಕೆಯ ಘನತ್ಯಾಜ್ಯ , ವಸ್ತು ನಿರ್ವಹಣೆ ವಿಭಾಗದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌. ವಿಜಯಕುಮಾರ್‌, ಪಾಲಿಕೆಯ ಆರೋಗ್ಯ ನಿರೀಕ್ಷಕರು ಸೇರಿದಂತೆ ಹಲವು ಸಿಬ್ಬಂದಿ ಹಸಿ ಕಸದಿಂದ ಹೋಂ ಕಾಂಪೊಸ್ಟಿಂಗ್‌ ವಿಧಾನ ಅನುಸರಿಸಿದ್ದಾರೆ. ಆರೋಗ್ಯ ನಿರೀಕ್ಷಕರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೂ ತಿಳಿವಳಿಕೆ ನೀಡುತ್ತಿದ್ದಾರೆ. ಹೋಂ ಕಾಂಪೊಸ್ಟಿಂಗ್‌ ಕಾರ್ಯರೂಪಕ್ಕೆ ತಂದಿರುವ ಬಗ್ಗೆ ನ್ಯಾಯಾಧೀಕರಣಕ್ಕೆ ವರದಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ