ಆ್ಯಪ್ನಗರ

ಶಿಥಿಲಗೊಂಡ ಕೊಠಡಿ ಪರಿಶೀಲನೆ

ಕುಂದಗೋಳ : ಕಳೆದ ವರ್ಷ ಆರಂಭವಾದ ತಾಲೂಕಿನ ಗುಡಗೇರಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ಮೂಲ ಸೌಲಭ್ಯಕ್ಕಾಗಿ 1 ಕೋಟಿ 52 ಲಕ್ಷ ರೂ. ಹಣ ಮಂಜೂರಾಗಿದ್ದು, ಇದರಲ್ಲಿ ಒಟ್ಟು 9 ಕೊಠಡಿ ನಿರ್ಮಿಸಲು ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

Vijaya Karnataka 17 Jul 2019, 5:00 am
ಕುಂದಗೋಳ : ಕಳೆದ ವರ್ಷ ಆರಂಭವಾದ ತಾಲೂಕಿನ ಗುಡಗೇರಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ಮೂಲ ಸೌಲಭ್ಯಕ್ಕಾಗಿ 1 ಕೋಟಿ 52 ಲಕ್ಷ ರೂ. ಹಣ ಮಂಜೂರಾಗಿದ್ದು, ಇದರಲ್ಲಿ ಒಟ್ಟು 9 ಕೊಠಡಿ ನಿರ್ಮಿಸಲು ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
Vijaya Karnataka Web DRW-15KND3
ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲಾ ಶಿಥಿಲಗೊಂಡ ಕೊಠಡಿಗಳನ್ನು ಅಧಿಕಾರಿಗಳು ಪರಿಶೀಲಿಸಿದರು.


ಶಾಲಾ ಆವರಣದಲ್ಲಿನ 7 ಕೊಠಡಿಗಳು ದುರಸ್ತಿ ಹಂತ ತಲುಪಿದ್ದು, ಇದರಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಗುತ್ತಿಲ್ಲ. ಕಾರಣ ಇದನ್ನು ಕೋಡಲೇ ತೆರವುಗೊಳಿಸಿ ಇಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಲು ಶಾಲಾ ಸಮಿತಿಯು ಆಗಮಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖಾಧಿಕಾರಿ ಕೆ.ಮಾಂತೇಶ, ಸಹಾಯಕ ಅಧಿಕಾರಿ ಎಂ.ಎಸ್‌.ಅಕ್ಕೂರ, ಬಿಇಓ ಜಿ.ಎನ್‌.ಮಠಪತಿ ಕೊಠಡಿಗಳನ್ನು ವೀಕ್ಷಿಸಿ ನೆಲಸಮಗೊಳಿಸಲು ಚರ್ಚಿಸುವದಾಗಿ ಹೇಳಿದರು. ಸಮಿತಿಯ ವಿ.ಡಿ.ಹಿರೇಗೌಡ್ರ, ದಯಾನಂದ ಕುಂದೂರ, ವಿಜಯಕುಮಾರ ಹಾಲಿ, ಪೂರ್ವಾಚಾರಿ ಸುತಾರ, ರಾಜು ಪಾಟೀಲ, ಬಾಬು ಹಾಜೇಸಾಬನವರ, ಸುವರ್ಣಮ್ಮ ನಿಂಗೊಡ್ತಿ, ಪ್ರಾಚಾರ್ಯ ಪಿ.ಕೆ.ಕಮ್ಮಾರ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ