ಆ್ಯಪ್ನಗರ

ಇಂದಿನಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆ

ಹುಬ್ಬಳ್ಳಿ: ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಹುಬ್ಬಳ್ಳಿಯ ಶ್ರೀ ಗಿರೀಶ ಆಶ್ರಮದಿಂದ ಜ.8ರಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹೊರಡಲಿದೆ. ಬುಧವಾರ ಆರಂಭಗೊಳ್ಳುವ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಜ. 25ರಂದು ಇಂಚಗೇರಿ ಮಠಕ್ಕೆ ತಲುಪಲಿದೆ. ಮಾರ್ಗ ಮಧ್ಯದಲ್ಲಿವಿವಿಧ ಹಳ್ಳಿ ಮತ್ತು ಪಟ್ಟಣಗಳಲ್ಲಿದಿಂಡಿ ಪಾದಯಾತ್ರೆ ವಾಸ್ತವ್ಯ ಮಾಡಲಿದೆ.

Vijaya Karnataka 8 Jan 2020, 5:00 am
ಹುಬ್ಬಳ್ಳಿ: ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಹುಬ್ಬಳ್ಳಿಯ ಶ್ರೀ ಗಿರೀಶ ಆಶ್ರಮದಿಂದ ಜ.8ರಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹೊರಡಲಿದೆ. ಬುಧವಾರ ಆರಂಭಗೊಳ್ಳುವ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಜ. 25ರಂದು ಇಂಚಗೇರಿ ಮಠಕ್ಕೆ ತಲುಪಲಿದೆ. ಮಾರ್ಗ ಮಧ್ಯದಲ್ಲಿವಿವಿಧ ಹಳ್ಳಿ ಮತ್ತು ಪಟ್ಟಣಗಳಲ್ಲಿದಿಂಡಿ ಪಾದಯಾತ್ರೆ ವಾಸ್ತವ್ಯ ಮಾಡಲಿದೆ.
Vijaya Karnataka Web dindy pallakki padayatra from today
ಇಂದಿನಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆ


ಪಾದಯಾತ್ರೆಯಲ್ಲಿಇಂಚಗೇರಿ ಸಂಪ್ರದಾಯದ ಸದ್ಗುರುಗಳ ದಿವ್ಯ ಸಂದೇಶ ಅನುಸಾರ ಸರ್ವಧರ್ಮ ಸಮನ್ವಯ, ರಾಷ್ಟ್ರೀಯ ಭಾವೈಕ್ಯತೆ, ಸರ್ವೋದಯ, ವಿಶ್ವಶಾಂತಿ ಸೇರಿದಂತೆ ಮಹಾನ್‌ ವಿಚಾರಗಳನ್ನು ಪ್ರಚುರಪಡಿಸಲಾಗುತ್ತದೆ. ಅಲ್ಲದೆ, ಸಂಪ್ರದಾಯದ ನಿಯಮದಂತೆ ನಿತ್ಯನೇಮ, ಪುರಾಣ-ಭಜನೆ, ಅಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಜ.29 ರಂದು ದಿಂಡಿ ಪಾದಯಾತ್ರೆ ಮರಳಲಿದ್ದು, ಫೆಬ್ರುವರಿ 2ರಂದು ಹುಬ್ಬಳ್ಳಿ ಶ್ರೀ ಗಿರೀಶ ಆಶ್ರಮ ಬಂದು ತಲುಪಲಿದೆ ಎಂದು ಶ್ರೀ ಗಿರಿಮಲ್ಲೇಶ್ವರ ಆಶ್ರಮದ ಗೋಪಾಲ ಮುರಗೋಡ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ