ಆ್ಯಪ್ನಗರ

ಯಡಿಯೂರಪ್ಪ ಮನಸ್ಸು ಕಲುಷಿತವಾಗಿದೆ, ಸೈನಿಕರು ಚೆಲ್ಲಿದ ರಕ್ತದ ಮೇಲೆ ರಾಜಕೀಯ ಮಾಡುತ್ತಾರೆ: ದಿನೇಶ್‌ ಗುಂಡೂರಾವ್‌

ಬಿಎಸ್ ವೈ ತಮ್ಮ ಹೇಳಿಕೆಯನ್ನ ವಾಪಸ್ ಪಡೆದು ಕ್ಷಮೆ ಕೇಳಬೇಕು. ದೇಶದ ಮೇಲೆ ಉಗ್ರರ ದಾಳಿಯಾಗಿದೆ. ಅದನ್ನ ನಾವು ಖಂಡಿಸುತ್ತೇವೆ, ಅಲ್ಲದೇ ನಾವು ಕೇಂದ್ರ ಸರಕಾರಕ್ಕೆ ನಾವು ಬೆಂಬಲ‌ ನೀಡಿದ್ದೇವೆ. ಯೋಧರಿಗೆ ಬೆನ್ನಲುಬಾಗಿ ನಾವೆಲ್ಲಾ ನಿಲ್ಲಬೇಕು.

Vijaya Karnataka Web 28 Feb 2019, 2:45 pm
ಹುಬ್ಬಳ್ಳಿ: ನಮ್ಮ ಇತಿಹಾಸದಲ್ಲೆ ಕೀಳುಮಟ್ಟದ ಮಾತುಗಳನ್ನ ಆಡಿಲ್ಲ. ದೇಶದ ಸೈನಿಕರ ಬಲಿದಾನವನ್ನ ಬಿಎಸ್‌ ಯಡಿಯೂರಪ್ಪ ರಾಜಕೀಯ ಲಾಭ ಆಗುತ್ತೆ ಅಂತಾರೇ. ಇಂಥವರಿಗೆ ಏನು ಹೇಳೋಣ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.
Vijaya Karnataka Web ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌


ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ದಿನೇಶ್‌ ಗುಂಡೂರಾವ್‌ ಮಾತನಾಡಿದರು.

ಸೈನಿಕರು ಚೆಲ್ಲಿರುವ ರಕ್ತದ ಮೇಲೆ ರಾಜಕೀಯ ವ್ಯಾಪರ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕು. ಅದು ಬಿಟ್ಟು ರಾಜಕೀಯವಾಗಿ ಬಳಸಿಕೊಳ್ಳಬಾರದು ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದರು.

ಬಿಎಸ್ ವೈ ತಮ್ಮ ಹೇಳಿಕೆಯನ್ನ ವಾಪಸ್ ಪಡೆದು ಕ್ಷಮೆ ಕೇಳಬೇಕು. ದೇಶದ ಮೇಲೆ ಉಗ್ರರ ದಾಳಿಯಾಗಿದೆ. ಅದನ್ನ ನಾವು ಖಂಡಿಸುತ್ತೇವೆ, ಅಲ್ಲದೇ ನಾವು ಕೇಂದ್ರ ಸರಕಾರಕ್ಕೆ ನಾವು ಬೆಂಬಲ‌ ನೀಡಿದ್ದೇವೆ. ಯೋಧರಿಗೆ ಬೆನ್ನಲುಬಾಗಿ ನಾವೆಲ್ಲಾ ನಿಲ್ಲಬೇಕು ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪ ಮನಸ್ಸು ಎಷ್ಟು ಕಲುಷಿತವಾಗಿದೆ. ಮೋದಿ, ರಾಹುಲ್, ಎಲ್ಲರೂ ದೇಶಭಕ್ತರೇ ಯಾರು ದೇಶದ್ರೋಹಿಗಳಲ್ಲ. ಅವರ ಚಿಂತನೆಗಳಷ್ಟೇ ಬೇರೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ