ಆ್ಯಪ್ನಗರ

ಬದಾಮಿ ಮಹಿಳೆ ಡಿಸ್‌ಚಾಜ್‌ರ್‍

ಹುಬ್ಬಳ್ಳಿ: ಬಾದಾಮಿ ತಾಲೂಕಿನ ಢಾಣಕ ಶಿರೂರಿನ ಮಹಿಳೆ ಕೊರೊನಾ ವೈರಸ್‌ ಸೋಂಕಿನಿಂದ ಸಂಪೂರ್ಣ ಗುಣಮುಖವಾಗಿದ್ದು, ಶನಿವಾರ ಕಿಮ್ಸ…ನಿಂದ ಬಿಡುಗಡೆಯಾಗಿದ್ದಾರೆ. ಡಿಸಿ ದೀಪಾ ಚೋಳನ್‌ ಕಿಮ್ಸ್‌ಗೆ ಆಗಮಿಸಿ ಮಹಿಳೆಯನ್ನು ಬೀಳ್ಕೊಟ್ಟಿದ್ದಾರೆ.

Vijaya Karnataka 25 May 2020, 4:54 pm
ಹುಬ್ಬಳ್ಳಿ: ಬಾದಾಮಿ ತಾಲೂಕಿನ ಢಾಣಕ ಶಿರೂರಿನ ಮಹಿಳೆ ಕೊರೊನಾ ವೈರಸ್‌ ಸೋಂಕಿನಿಂದ ಸಂಪೂರ್ಣ ಗುಣಮುಖವಾಗಿದ್ದು, ಶನಿವಾರ ಕಿಮ್ಸ…ನಿಂದ ಬಿಡುಗಡೆಯಾಗಿದ್ದಾರೆ. ಡಿಸಿ ದೀಪಾ ಚೋಳನ್‌ ಕಿಮ್ಸ್‌ಗೆ ಆಗಮಿಸಿ ಮಹಿಳೆಯನ್ನು ಬೀಳ್ಕೊಟ್ಟಿದ್ದಾರೆ.
Vijaya Karnataka Web discharger of an badami woman
ಬದಾಮಿ ಮಹಿಳೆ ಡಿಸ್‌ಚಾಜ್‌ರ್‍


ತೀವ್ರ ಉಸಿರಾಟ ತೊಂದರೆ ಹಾಗೂ ಇತರೆ ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಯು ಐದು ತಿಂಗಳ ಗರ್ಭಿಣಿಯಾಗಿದ್ದರು. ತಪಾಸಣೆಗೆ ಬಂದ ವೇಳೆ ಗಂಟಲು ದ್ರವ ಪರೀಕ್ಷಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ನೀರು, ಆಹಾರ ಸೇವನೆಗೆ ತೊಂದರೆಯಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಗೆ ಕಿಮ್ಸ್‌ ವೈದ್ಯರು, ದಾದಿಯರು ತುಂಬ ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದರು. ಗರ್ಭ ಧರಿಸಿದ್ದರಿಂದ ಸೋಂಕಿನಿಂದ ಮುಕ್ತವಾಗುವುದು ಕಷ್ಟ ಎಂದು ಅರಿತ ವೈದ್ಯರು, ಮಾತ್ರೆ ನೀಡಿ ಮಗುವನ್ನು ತೆಗೆಯಲಾಗಿತ್ತು. ನಂತರ ಕ್ರಮೇಣ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆ ಗುಣಮಖಗೊಂಡು ಆಸ್ಪತ್ರೆಯಿಂದ ಶನಿವಾರ ಬಿಡುಗಡೆಗೊಂಡರು.

20 ದಿನಗಳ ಅವಧಿಯಲ್ಲಿತಮಗೆ ಚಿಕಿತ್ಸೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಿದ ಕಿಮ್ಸ… ತಂಡಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದರು.

ಜಿ.ಪಂ. ಸಿಇಓ ಡಾ.ಬಿ.ಸಿ. ಸತೀಶ, ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾಣಿ, ಅಧೀಕ್ಷಕ ಅರುಣಕುಮಾರ, ಡಾ.ಈಶ್ವರ ಹಸಬಿ, ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಈ ವೇಳೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ