ಆ್ಯಪ್ನಗರ

ಶಿವಯೋಗದಿಂದ ರೋಗ ದೂರ

ಹುಬ್ಬಳ್ಳಿ : ಲಿಂಗಾಯತರು ಇಷ್ಟಲಿಂಗ ಆಯತ, ಸ್ವಾಯತ ಮಾಡಿಕೊಂಡು ಶಿವಯೋಗ ಸಾಧನೆ ಮಾಡಿದರೆ ನಿಜವಾಗಿ ಲಿಂಗ ಸುಖಿಗಳಾಗಿ ಜೀವನ ಪಾವನವಾಗುತ್ತದೆ ಎಂದು ಶಿರೂರ ಮಹಾಂತ ತೀರ್ಥ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.

Vijaya Karnataka 24 Aug 2019, 5:00 am
ಹುಬ್ಬಳ್ಳಿ : ಲಿಂಗಾಯತರು ಇಷ್ಟಲಿಂಗ ಆಯತ, ಸ್ವಾಯತ ಮಾಡಿಕೊಂಡು ಶಿವಯೋಗ ಸಾಧನೆ ಮಾಡಿದರೆ ನಿಜವಾಗಿ ಲಿಂಗ ಸುಖಿಗಳಾಗಿ ಜೀವನ ಪಾವನವಾಗುತ್ತದೆ ಎಂದು ಶಿರೂರ ಮಹಾಂತ ತೀರ್ಥ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.
Vijaya Karnataka Web disease distance from siva yoga
ಶಿವಯೋಗದಿಂದ ರೋಗ ದೂರ


ಬಸವ ಕೇಂದ್ರದ ಡಾ. ಮಹೇಶ ಡಿ. ಹೊರಕೇರಿ ನಿವಾಸದಲ್ಲಿ ಏರ್ಪಡಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದೊಡೆ ಎಂಬ ವಚನ ಕುರಿತು ಅನುಭಾವ ನೀಡಿದರು.

ಲಿಂಗಾಯತರು ಲಿಂಗಾಯತ ಧರ್ಮದ ನಿಜ ಆಚರಣೆ ಆಚರಿಸುವುದನ್ನು ರೂಢಿಸಿಕೊಳ್ಳಬೇಕು.ಎದೆಯ ಮೇಲೆ ಲಿಂಗ, ರುದ್ರಾಕ್ಷಿ, ಹಣೆಯ ಮೇಲೆ ವಿಭೂತಿ ಧರಿಸಬೇಕು. ದಿನಾಲೂ ಲಿಂಗ ಪೂಜೆ, ಇಷ್ಟಲಿಂಗದ ನೀರಿಕ್ಷೆಯಲ್ಲಿ ಶಿವಯೋಗ ಮಾಡಬೇಕು. ಶಿವಯೋಗ ಸಾಧನೆ ಮಾಡುವುದರಿಂದ ಯಾವ ರೋಗಗಳು ನಿಮ್ಮ ಸಮೀಪ ಸುಳಿವುದಿಲ್ಲ. ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ. ಲಿಂಗ ಪೂಜೆ ಮಾಡಿದರೆ ನಿಮಗೆ ಯಾವ ವಿಘ್ನಗಳು ಬರುವುದಿಲ್ಲ. ಮಕ್ಕಳಿಗೆ ಲಿಂಗ ದೀಕ್ಷೆ ಕೊಡಿಸಿ ಶಿವಯೋಗ ಸಾಧನೆಗೆ ಅವಕಾಶ ಕಲ್ಪಿಸಿಕೊಡಬೇಕು. ಲಿಂಗಾಯತ ಧರ್ಮದ ನಿಜ ಆಚರಣೆಗಳಿಂದ ಧರ್ಮ ಉಳಿಯಲು ಬೆಳೆಯಲು ಸಾಧ್ಯ. ಬಸವಾದಿ ಶರಣರ ವಚನ ಓದಬೇಕು ಎಂದರು.

ನಿವೃತ್ತ ಶಿಕ್ಷಕ ಧರ್ಮಪ್ಪ ಹೊರಕೇರಿ ಅಧ್ಯಕ್ಷ ತೆ ವಹಿಸಿದ್ದರು. ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ.ಶಿರೂರ, ಉಪಾಧ್ಯಕ್ಷ ಪ್ರೊ. ಜಿ.ಬಿ.ಹಳ್ಯಾಳ ಮಾತನಾಡಿದರು. ಡಾ.ಲಿಂಗರಾಜ ಡಿ. ಹೊರಕೇರಿ, ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ, ನಿವೃತ ಡಿಡಿಪಿಐ ಆರ್‌.ಸಿ.ಹಲಗತ್ತಿ, ರವೀಂದ್ರ ಬಳಿಗಾರ, ಶಾಂತಪ್ಪ ಹೂಗಾರ, ಪ್ರೊ.ಬಸವರಾಜ ಕೇಂಧೂಳಿ, ಕೆ.ಎಸ್‌.ಇನಾಮತಿ, ಎಂ.ಬಿ.ಕಟ್ಟಿ, ಪ್ರೊ.ಎಸ್‌.ಸಿ. ಇಂಡಿ, ಪ್ರೊ. ಕೆ.ಎಸ್‌. ಕೌಜಲಗಿ, ಬಿ.ಎಲ್‌. ಲಿಂಗಶೆಟ್ಟರ, ಡಾ. ಎಚ್‌.ವಿ.ಬೆಳಗಲಿ, ಬಸವರಾಜ ಕಮಡೊಳ್ಳಿ, ಎಸ್‌.ಕೆ. ಮಾಲಿಪಾಟೀಲ, ಎಸ್‌.ಎಸ್‌.ಸುರಗೊಂಡ, ಮಮತಾ ಹೊರಕೇರಿ, ನೀಲಗಂಗಾ ಹಳ್ಳಾಳ ಇದ್ದರು. ಡಾ.ಮಹೇಶ ಹೊರಕೇರಿ ಸ್ವಾಗತಿಸಿದರು. ಸಾಹಿತಿ ಪ್ರೊ.ಎಸ್‌.ವಿ.ಪಟ್ಟಣಶೆಟ್ಟಿ ವಂದಿಸಿದರು. ಗ್ರಂಥಪಾಲಕ ಸುರೇಶ ಹೊರಕೇರಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ