ಆ್ಯಪ್ನಗರ

ಅತೃಪ್ತ ಶಾಸಕರ ನಡೆ ಸರಿಯಲ್ಲ: ಕೋನರಡ್ಡಿ

ಧಾರವಾಡ : ಅತೃಪ್ತ ಶಾಸಕರಿಗೆ ವಿಪ್‌ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದ್ದು, ಸುಪ್ರೀಂಕೋರ್ಟ್‌ನ ತೀರ್ಪು ನೋಡಿ ಮುಂದಿನ ನಡೆ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ ಹೇಳಿದರು.

Vijaya Karnataka 22 Jul 2019, 5:00 am
ಧಾರವಾಡ : ಅತೃಪ್ತ ಶಾಸಕರಿಗೆ ವಿಪ್‌ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿದ್ದು, ಸುಪ್ರೀಂಕೋರ್ಟ್‌ನ ತೀರ್ಪು ನೋಡಿ ಮುಂದಿನ ನಡೆ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ ಹೇಳಿದರು.
Vijaya Karnataka Web dissatisfied mlas move is not right konaradi
ಅತೃಪ್ತ ಶಾಸಕರ ನಡೆ ಸರಿಯಲ್ಲ: ಕೋನರಡ್ಡಿ


ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ''ವಿಧಾನಸಭೆ ಅಧಿವೇಶನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶಾಸಕರ ಚರ್ಚೆ ಬಾಕಿ ಇದೆ. ಎಲ್ಲ ಚರ್ಚೆ ಮುಗಿದ ಬಳಿಕ ಏನು ಮಾಡಬೇಕು ಎಂಬುದನ್ನು ನಿರ್ಣಯ ಮಾಡಲಾಗುತ್ತದೆ'' ಎಂದರು.

''ದೇವಸ್ಥಾನ ಎಂದು ಭಾವಿಸಿ ವಿಧಾನಸೌಧಕ್ಕೆ ಹೋದವರು ನಾವು. ಇಂದಿನ ಪರಿಸ್ಥಿತಿ ನೋಡಿ ಉತ್ತರಿಸೋದು ಕಷ್ಟಕರವಾಗುತ್ತಿದೆ. ಅತೃಪ್ತ ಶಾಸಕರು ನಮ್ಮ ರಾಜ್ಯದಲ್ಲಿಯೇ ಉಳಿದು ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ಮಾಡಬೇಕಿತ್ತು, ಬೇರೆ ರಾಜ್ಯಕ್ಕೆ ತೆರಳಿರುವುದು ಸರಿಯಾದ ಕ್ರಮವಲ್ಲ'' ಎಂದು ತಿಳಿಸಿದರು.

''ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದೆ. ಇದರಿಂದ ನಾವು ತಲೆ ತಗ್ಗಿಸುವಂತಾಗಿದೆ. ಈ ವ್ಯವಸ್ಥೆ ನೋಡಿದರೇ ರಾಜಕಾರಣ ಕಮರ್ಷಿಯಲ್‌ ಆಗುವ ಆತಂಕವಿದೆ. ಬಿಜೆಪಿ ಶಾಸಕರನ್ನು ಆಪರೇಷನ್‌ ಮಾಡುವುದು ಸಿಎಂ ಕುಮಾರಸ್ವಾಮಿ ಅವರಿಗೆ ದೊಡ್ಡ ವಿಚಾರವಲ್ಲ. ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ