ಧಾರವಾಡ : ಕೇಂದ್ರ ಸರಕಾರದ ಆತ್ಮ ನಿರ್ಭರ್ ಭಾರತ ಯೋಜನೆಯಡಿ ರಾಷ್ಟ್ರೀಯ ಆಹಾರ ಭದ್ರತಾ ಹಾಗೂ ರಾಜ್ಯದ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿ ಪಡೆಯದೇ ಇರುವ ವಲಸೆ ಕಾರ್ಮಿಕ ಫಲಾನುಭವಿಗಳಿಗೆ ಮೇ, ಜೂನ್ ತಿಂಗಳಿಗೆ ಪ್ರತಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿ ಹಾಗೂ ಕಡಲೆ ಕಾಳನ್ನು ಉಚಿತವಾಗಿ ಕೊಡಲಾಗುವುದು ಎಂದು ಜಿಲ್ಲಾಧಿಕಾರ ದೀಪಾ ಎಂ. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ವಲಸಿಗ ಕಾರ್ಮಿಕ ಫಲಾನುಭವಿಗಳು ಹಾಗೂ ಪಡಿತರ ಚೀಟಿ ಹೊಂದದೇ ಇರುವ ಫಲಾನುಭವಿಗಳಿಗೆ ಮೇ ತಿಂಗಳಲ್ಲಿ5 ಕೆಜಿ ಅಕ್ಕಿಯನ್ನು ಮೇ 26 ರಿಂದ 31 ರವರೆಗೆ ನೀಡಲಾಗುವುದು. ಜೂನ್ ತಿಂಗಳಲ್ಲಿ10ರ ವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರಕಾರದ ಹಂಚಿಕೆ ಮಾಡುವ ಕಡಲೆಕಾಳನ್ನು ಪಡೆಯಬಹುದು. ಮೇ ತಿಂಗಳಲ್ಲಿಆಹಾರಧಾನ್ಯವನ್ನು ಪಡೆಯದ ಫಲಾನುಭವಿಗಳು ಜೂನ್ ತಿಂಗಳಲ್ಲಿಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕೇಂದ್ರ ಸರಕಾರದ ಹಂಚಿಕೆಯಂತೆ 2 ಕೆಜಿ ಕಡಲೆಕಾಳನ್ನು ಪಡೆಯಬಹುದಾಗಿದೆ.
ಈ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿತಮ್ಮ ಆಧಾರ್ ಸಂಖ್ಯೆ ನೀಡಿ ತಂತ್ರಾಂಶದಲ್ಲಿಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲವೆಂದು ಖಚಿತಗೊಂಡ ನಂತರವಷ್ಟೇ ಪ್ರತಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯವರಿಗೆ ಆಧಾರ್ ಓಟಿಪಿ ಅಥವಾ ಜೀವಮಾಪಕ ದೃಢೀಕರಣವನ್ನು ನೀಡಿ ಪಡಿತರ ಪಡೆಯಬಹುದಾಗಿದೆ. ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡದ ಜೊತೆಗೆ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಎಂ. ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ವಲಸಿಗ ಕಾರ್ಮಿಕ ಫಲಾನುಭವಿಗಳು ಹಾಗೂ ಪಡಿತರ ಚೀಟಿ ಹೊಂದದೇ ಇರುವ ಫಲಾನುಭವಿಗಳಿಗೆ ಮೇ ತಿಂಗಳಲ್ಲಿ5 ಕೆಜಿ ಅಕ್ಕಿಯನ್ನು ಮೇ 26 ರಿಂದ 31 ರವರೆಗೆ ನೀಡಲಾಗುವುದು. ಜೂನ್ ತಿಂಗಳಲ್ಲಿ10ರ ವರೆಗೆ 5 ಕೆಜಿ ಅಕ್ಕಿ ಹಾಗೂ ಕೇಂದ್ರ ಸರಕಾರದ ಹಂಚಿಕೆ ಮಾಡುವ ಕಡಲೆಕಾಳನ್ನು ಪಡೆಯಬಹುದು. ಮೇ ತಿಂಗಳಲ್ಲಿಆಹಾರಧಾನ್ಯವನ್ನು ಪಡೆಯದ ಫಲಾನುಭವಿಗಳು ಜೂನ್ ತಿಂಗಳಲ್ಲಿಒಟ್ಟಿಗೆ 10 ಕೆಜಿ ಅಕ್ಕಿ ಮತ್ತು ಕೇಂದ್ರ ಸರಕಾರದ ಹಂಚಿಕೆಯಂತೆ 2 ಕೆಜಿ ಕಡಲೆಕಾಳನ್ನು ಪಡೆಯಬಹುದಾಗಿದೆ.
ಈ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿಗಳು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿತಮ್ಮ ಆಧಾರ್ ಸಂಖ್ಯೆ ನೀಡಿ ತಂತ್ರಾಂಶದಲ್ಲಿಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲವೆಂದು ಖಚಿತಗೊಂಡ ನಂತರವಷ್ಟೇ ಪ್ರತಿ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯವರಿಗೆ ಆಧಾರ್ ಓಟಿಪಿ ಅಥವಾ ಜೀವಮಾಪಕ ದೃಢೀಕರಣವನ್ನು ನೀಡಿ ಪಡಿತರ ಪಡೆಯಬಹುದಾಗಿದೆ. ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿವಿಪತ್ತು ನಿರ್ವಹಣಾ ಕಾಯ್ದೆಯಡಿ ದಂಡದ ಜೊತೆಗೆ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಎಂ. ಪ್ರಕಟಣೆಯಲ್ಲಿತಿಳಿಸಿದ್ದಾರೆ.