ಆ್ಯಪ್ನಗರ

ಶೀಘ್ರವೇ ಜಿಲ್ಲೆ ಹೊಗೆ ಮುಕ್ತ

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.98ರಷ್ಟು ಕುಟುಂಬಗಳು ಗ್ಯಾಸ ಸೌಲಭ್ಯ ಪಡೆದುಕೊಂಡಿವೆ. ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಿ ಶೇ.100ರಷ್ಟ ಸೌಲಭ್ಯ ಒದಗಿಸಿದರೆ, ಧಾರವಾಡ ಹೊಗೆ ಮುಕ್ತ ಮಾಡಬಹುದಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

Vijaya Karnataka 27 Feb 2019, 5:00 am
ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.98ರಷ್ಟು ಕುಟುಂಬಗಳು ಗ್ಯಾಸ ಸೌಲಭ್ಯ ಪಡೆದುಕೊಂಡಿವೆ. ಅಧಿಕಾರಿಗಳು ಇನ್ನಷ್ಟು ಶ್ರಮವಹಿಸಿ ಶೇ.100ರಷ್ಟ ಸೌಲಭ್ಯ ಒದಗಿಸಿದರೆ, ಧಾರವಾಡ ಹೊಗೆ ಮುಕ್ತ ಮಾಡಬಹುದಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
Vijaya Karnataka Web DRW-26MANJU4D
ಹುಬ್ಬಳ್ಳಿಯಲ್ಲಿ ನಡೆದ ಕೇಂದ್ರ ಸರಕಾರದ ವಿವಿಧ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಸಂಸದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಉಜ್ವಲ್‌ ಯೋಜನೆ ಫಲಾನುಭವಿಗಳಿಗೆ ಎಲ್‌ಪಿಜಿ ಗ್ಯಾಸ್‌ ವಿತರಿಸಿದರು.


ಇಲ್ಲಿಯ ಕುಸುಗಲ್‌ ರಸ್ತೆಯ ಆಕ್ಸಫರ್ಡ ಕಾಲೇಜ್‌ ಬಳಿಯ ಮೈದಾನದಲ್ಲಿ ಮಂಗಳವಾರ ನಡೆದ ಕೇಂದ್ರ ಸರಕಾರದ ವಿವಿಧ ಯೋಜನೆಯ ಫಲಾನುಭವಿಗಳ ಸಮಾವೇಶ ಹಾಗೂ ಉಜ್ವಲ್‌ ಯೋಜನೆಯ ಫಲಾನುಭವಿಗಳಿಗೆ ಎಲ್‌ಪಿಜಿ ಗ್ಯಾಸ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಸರಕಾರದ ಅಧಿಕಾರವಧಿಯಲ್ಲಿ ಸಾಮಾನ್ಯರು ಸಿಲಿಂಡರ್‌ ಬಳಸುವುದು ಅಸಾಧ್ಯದ ಮಾತಾಗಿತ್ತು. ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ನಿಯಮವನ್ನು ಸರಳೀಕರಣಗೊಳಿಸಿ ಹಣ ನೀಡಿದವರಿಗೆ ಅಡುಗೆ ಅನಿಲ ದೊರೆಯುವಂತೆ ಮಾಡಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಬಡವರ ಮನೆಗೆ ಅಡುಗೆ ಅನಿಲ ತಲುಪುವಂತೆ ಮಾಡಿದ್ದಾರೆ ಎಂದರು.

ಸಂಪರ್ಕ ಕ್ರಾಂತಿ

ಅವಳಿ ನಗರದಲ್ಲಿ ಅನೇಕ ಕಾಮಗಾರಿ ಚಾಲನೆಯಲ್ಲಿವೆ. ಕೇಂದ್ರ ಸರಕಾರದಿಂದ ಜಿಲ್ಲೆಯಲ್ಲಿ ಒಟ್ಟು 1258 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. 130 ಕೋಟಿ ರೂ. ವೆಚ್ಚದಲ್ಲಿ ಕಿಮ್ಸ್‌ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಆಸ್ಪತ್ರೆ ಶಿಘ್ರವೇ ಉದ್ಘಾಟನೆಗೊಳ್ಳಲಿದೆ. 140 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ್ದರಿಂದ ಸಂಪರ್ಕ ಕ್ರಾಂತಿ ಉಂಟಾಗಿದೆ. ಇದಕ್ಕೆ ಪೂರಕವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೇ ಇಂಡಿಗೋ ಎರಡು ವಿಮಾನಗಳನ್ನು ಪಾರ್ಕಿಂಗ್‌ ಮಾಡಲು ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆ ಬಂದಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಿಂದಲೇ ದೇಶದ ಇತರೆ ನಗರಗಳಿಗೆ ವಿಮಾನಯಾನ ಕಲ್ಪಿಸಲು ಕ್ರಮ ಕೈಗೊಳ್ಳಲಿದೆ ಎಂದರು.

ಕಷ್ಟ ಅರ್ಥೈಸಿಕೊಂಡರು

ಮಾಜಿ ಸಿಎಂ ಜಗದೀಶ ಶೆಟ್ಟರ ಮಾತನಾಡಿ, ಮಹಿಳೆಯರ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಉಜ್ವಲ್‌ ಯೋಜನೆ ಜಾರಿಗೆ ತಂದಿದ್ದಾರೆ. ಬಡವರ ಕಷ್ಟಗಳನ್ನು ಅರಿತ ಮತ್ತು ದೇಶದ ಒಬ್ಬ ಸಾಮಾನ್ಯ ಮನುಷ್ಯ ಪ್ರಧಾನಿಯಾಗಿದ್ದರಿಂದ ಮಹಿಳೆಯರ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ. ಮೋದಿ ಬಿಟ್ಟು ಬೇರೆ ಯಾರಿಗೂ ಈ ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಮೋದಿ ಅವರು ಜನಸಾಮಾನ್ಯರ ಜೀವನ ಬದಲಿಸಿದ್ದಾರೆ. ಆಯುಷ್ಮಾನ ಭಾರತ ಯೋಜನೆ 5 ಲಕ್ಷ ಆರೋಗ್ಯ ವಿಮೆ ನೀಡಲಾಗಿದೆ. ರಾಜ್ಯ ಯೋಜನೆಗೆ ಹಿಂದೆಟು ಹಾಕಿತ್ತು ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ್‌ ಮುನೇನಕೊಪ್ಪ, ಉಪಮೇಯರ್‌ ಮೇನಕಾ ಹುರಳಿ, ಬಿಪಿಸಿಎಲ್‌ ಕರ್ನಾಟಕ ಗ್ಯಾಸ್‌ ಹೆಡ್‌ ಪ್ರದೀಪ ನಾಯರ್‌, ಐಓಸಿಎಲ್‌ನ ಗಣೇಶನ್‌, ಎಚ್‌ಪಿಸಿಎಲ್‌ನ ಬಿಪಲ್ಯಾಬ್‌ ಮಂಡಲ, ಬಿಪಿಸಿಎಲ್‌ ಸಹಾ, ಐಒಸಿಎಲ್‌ ಆನಂದ ಮೂರ್ತಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ