ಆ್ಯಪ್ನಗರ

ಬಿಜೆಪಿಗೆ ಎಸ್.ಎಂ. ಕೃಷ್ಣ ಸೇರ್ಪಡೆ ಬೇಡ

ಹುಬ್ಬಳ್ಳಿ:ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಳಿಯನ ಬೆನ್ನೆಲುಬಾಗಿ ನಿಂತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರನ್ನು ಬಿಜೆಪಿಗೆ

ವಿಕ ಸುದ್ದಿಲೋಕ 20 Mar 2017, 5:00 am
ಹುಬ್ಬಳ್ಳಿ:ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಳಿಯನ ಬೆನ್ನೆಲುಬಾಗಿ ನಿಂತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳದಂತೆ ಪ್ರಧಾನಿ ಮೋದಿ ಅವರಿಗೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.
Vijaya Karnataka Web do not inclusion sm krishna bjp
ಬಿಜೆಪಿಗೆ ಎಸ್.ಎಂ. ಕೃಷ್ಣ ಸೇರ್ಪಡೆ ಬೇಡ

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘‘ವಿ.ಜಿ.ಸಿದ್ಧಾರ್ಥ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 180ಕ್ಕೂ ಅಧಿಕ ಅರಣ್ಯ ಭೂಮಿ ಕಬಳಿಸಿದ್ದು, ಅಳಿಯ ಸಿದ್ಧಾರ್ಥ ರಕ್ಷಣೆಗೆ ಎಸ್.ಎಂ. ಕೃಷ್ಣ ಮುಂದಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ ಅವರು ಕೃಷ್ಣ ಸೇರ್ಪಡೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು’’ ಎಂದು ಒತ್ತಾಯಿಸಿದರು.
‘‘50 ಸಾವಿರ ಕೋಟಿ ರೂ.ಗೂ ಅಧಿಕ ನಕಲಿ ಛಾಪಾ ಕಾಗದ ಹಗರಣದ ಆರೋಪಿ ತೆಲಗಿ ಜತೆ ಸಿದ್ದಾರ್ಥ್ ಭಾಗಿಯಾಗಿರುವ ಆರೋಪವಿದೆ. ನಟ ದಿ. ಡಾ.ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದಾಗ ಹಣ ಸಂದಾಯ ವಿಚಾರದಲ್ಲೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಕೃಷ್ಣ ಅವರ ಕೃಪಾಕಟಾಕ್ಷದಿಂದ ಅಕ್ರಮ ಸಂಪಾದನೆ ಮಾಡಿಕೊಂಡಿದ್ದಾರೆ’’ ಎಂದು ಆರೋಪಿಸಿದರು.
ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ:
‘‘ಸಿದ್ಧಾರ್ಥ ಅವರ ಕಾನೂನುಬಾಹಿರ ಹಾಗೂ ಅಕ್ರಮ ವ್ಯವಹಾರಗಳ ತನಿಖೆಗೆ ಆಗ್ರಹಿಸಿ ಸಪಸದಿಂದ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ’’ ಎಂದು ಎಸ್.ಆರ್. ಹಿರೇಮಠ ತಿಳಿಸಿದರು.
‘‘ಕೃಷ್ಣ ಮತ್ತು ಸಿದ್ಧಾರ್ಥ ಸೇರಿ ಹಲವು ಕಾನೂನುಬಾಹಿರ ಕೆಲಸ ಮಾಡಿದ್ದಾರೆ. ಇದೀಗ ಕೃಷ್ಣ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಉಪ ರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಆ ಮೂಲಕ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರನ್ನು ಅಕ್ರಮ ಹಣ ಸಂಪಾದನೆ ಆರೋಪದಲ್ಲಿ ಜೈಲಿಗೆ ಹಾಕಿದಂತೆ ಕೃಷ್ಣ ಅವರನ್ನೂ ಬಂಧಿಸಬೇಕು’’ ಎಂದು ಒತ್ತಾಯಿಸಿದರು.
‘‘ರಾಮಚಂದ್ರ ಕೊತ್ವಾಲ್ ಬ್ಲೂ ಕಾಲರ್ ಕ್ರಿಮಿನಲ್ ಆಗಿದ್ದರೆ, ಎಸ್.ಎಂ.ಕೃಷ್ಣಘಿ, ಸಿದ್ಧಾರ್ಥ್ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರು ವೈಟ್ ಕಾಲರ್ ಕ್ರಿಮಿನಲ್‌ಗಳಿದ್ದಂತೆ. ಭ್ರಷ್ಟಾಚಾರ ಕೂಪದಲ್ಲಿರುವ ಕೃಷ್ಣರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಕುಖ್ಯಾತಿಗೆ ಒಳಗಾಗಬಾರದು. ಆ ನಿಟ್ಟಿನಲ್ಲಿ ಕಾಳಧನಿಕರಿಗೆ ಸಿಂಹಸ್ವಪ್ನವಾಗಿರುವ ಮೋದಿ ಪಕ್ಷಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಿದೆ’’ ಎಂದರು.
‘‘ಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಹಾಗೂ ಸಂವಿಧಾನಾತ್ಮಕ ಉನ್ನತ ಹುದ್ದೆಗಳನ್ನು ಕೊಡಬಾರದು. ಈ ಸಂಬಂಧ ಈಗಾಗಲೇ ೆ.2ರಂದು ಕೇಂದ್ರ ಸರಕಾರದ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಜತೆಗೆ ಪ್ರಧಾನಿಗೂ ಮನವಿ ಸಲ್ಲಿಸಲಾಗುವುದು’’ ಎಂದು ಹಿರೇಮಠ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ