ಆ್ಯಪ್ನಗರ

ಹಿರಿಯರ ಉಪದೇಶ ಅಲ್ಲಗಳೆಯದಿರಿ

ಜಗತ್ತಿನಲ್ಲಿನಾವೆಲ್ಲಾಬಾಳೋದು ಅದ. ಬಾಳಬೇಕಾದ ಜಗತ್ತನ್ನು ತಿಳಿದುಕೊಂಡಿರಬೇಕು. ಅಂದರೆ ನಾವು ಹೇಗೆ ಬದುಕಬೇಕು, ಸುಖದ ಕ್ಷಣಗಳನ್ನು ಹೇಗೆ ಹೆಚ್ಚು ಮಾಡಿಕೊಳ್ಳಬೇಕು ಎಂಬುದು ಗೊತ್ತಾಗತದ. ಅದಕ್ಕಾಗಿ ಜಗತ್ತಿನ ಸರಿಯಾದ ಜ್ಞಾನ ನಮಗಿರಬೇಕು. ಇಂಥ ಜಗತ್ತಿನಲ್ಲಿನಾವೆಲ್ಲಾಬಾಳಬೇಕು. ಇದೊಂದು ಅವಕಾಶ. ಜಗತ್ತಿನಲ್ಲಿಬಂದೇವಿ ಅಂದ ಬಳಿಕ

Vijaya Karnataka 17 Mar 2020, 5:00 am
ಗತ್ತಿನಲ್ಲಿನಾವೆಲ್ಲಾಬಾಳೋದು ಅದ. ಬಾಳಬೇಕಾದ ಜಗತ್ತನ್ನು ತಿಳಿದುಕೊಂಡಿರಬೇಕು. ಅಂದರೆ ನಾವು ಹೇಗೆ ಬದುಕಬೇಕು, ಸುಖದ ಕ್ಷಣಗಳನ್ನು ಹೇಗೆ ಹೆಚ್ಚು ಮಾಡಿಕೊಳ್ಳಬೇಕು ಎಂಬುದು ಗೊತ್ತಾಗತದ. ಅದಕ್ಕಾಗಿ ಜಗತ್ತಿನ ಸರಿಯಾದ ಜ್ಞಾನ ನಮಗಿರಬೇಕು. ಇಂಥ ಜಗತ್ತಿನಲ್ಲಿನಾವೆಲ್ಲಾಬಾಳಬೇಕು. ಇದೊಂದು ಅವಕಾಶ. ಜಗತ್ತಿನಲ್ಲಿಬಂದೇವಿ ಅಂದ ಬಳಿಕ ಬಡವರಾಗಿ, ಧೀನರಾಗಿ, ಕಷ್ಟಕ್ಕೆ ಒಳಗಾಗಿ ಬದುಕಲು ಯಾರರ ಇಚ್ಛೆ ಪಡತಾರೇನು? ಒಂದು ಸಣ್ಣ ಪ್ರಾಣಿನೂ ಸುಖವಾಗಿ ಇರಲು ಬಯಸುತ್ತೆ. ಹಾಗೆ ನಾವೂ ಸಹ ಸಣ್ಣವರೇ ಇರಲಿ, ದೊಡ್ಡವರೇ ಇರಲಿ ಆನಂದವಾಗಿರಬೇಕು. ಮನಸ್ಸು ನಲಿತಿರಬೇಕು. ಬರೀ ಹೊಡೆದಾಡಿ, ಬಡಿದಾಡೋದು ಜೀವನ ಏನು? ಜೀವನ ಹಾಗಿತ್ತು ಅಂದರೆ ಅದಕ್ಕೆ ಬದುಕು ಅಂತಾರೇನು?
Vijaya Karnataka Web siddeshwar shri-new1


ಈ ಜಗತ್ತಿನಲ್ಲಿದೇವರು ಸೂರ್ಯನೆಂಬ ದೀಪ ಹಚ್ಚಿಟ್ಟ. ಚಂದ್ರನನ್ನು ಹಾಗೇ ತೇಲಿಬಿಟ್ಟ. ಸಮುದ್ರಗಳನ್ನು ತುಂಬಿದ. ಬೆಟ್ಟಗಳನ್ನು ಎತ್ತರಿಸಿದ. ಧಾರಾಕಾರ ಮಳೆ ಬರುವಂತೆ ಮಾಡಿದ. ಸುತ್ತಮುತ್ತ ಇರುವ ಭೂಮಿಯೊಳಗೆಲ್ಲಹಸಿರು ಹಸಿರು ಬೆಳೆಸಿದ. ಇಂಥಾ ಸುಂದರ ಜಗತ್ತನ್ನು ರಚನೆ ಮಾಡಿದ್ದು ನಮಗಿರುವ ಒಂದಿಷ್ಟು ಅವಕಾಶ. ನಾವು ಇಲ್ಲಿಏನು ಮಾಡೋದು ಅದ ಅಂದರೆ ಆನಂದವಾಗಿ ಬದುಕೋದು.

ಒಂದು ಅರಣ್ಯ ಇತ್ತು. ಅರಣ್ಯದ ಆರಂಭದ ಭಾಗದಲ್ಲಿಒಂದು ಗುಡಿಸಲಲ್ಲಿಒಬ್ಬ ಸಂತ ಇದ್ದ. ಅರಣ್ಯದ ಒಂದು ಕಡೆ ಊರು ಮತ್ತು ಇನ್ನೊಂದು ಕಡೆಗೆ ಒಂದು ಊರು ಇತ್ತು. ಎರಡೂ ಊರಿಗೆ ಅರಣ್ಯದಲ್ಲಿಒಂದು ದಾರಿ ಇತ್ತು. ಸಂತ ಇದ್ದಲ್ಲಿಗೆ ಒಬ್ಬ ವ್ಯಕ್ತಿ ಬಂದ. ಸಂತರು ಆ ವ್ಯಕ್ತಿಗೆ ಅವಸರದಲ್ಲಿಹೊರಟಿದ್ದಿಯಲ್ಲಾಎಲ್ಲಿಗೆ ಎಂದು ಕೇಳಿದರು. ಆ ವ್ಯಕ್ತಿ ಆಚೆ ಊರಲ್ಲಿನ ಮಾವನ ಮನೆಗೆ ಅಳಿತನಕ್ಕೆ ಹೋಗುತ್ತಿದ್ದೇನೆ ಎಂದ. ಸಂತ ಹೇಳಿದ: ನಾಳೆ ಬೆಳಗ್ಗೆ ಹೋಗು. ಈಗ ರಾತ್ರಿ ಆಗುತ್ತದೆ. ಅರಣ್ಯದಲ್ಲಿಕಾಡುಪ್ರಾಣಿಗಳಿವೆ ಎಂದರು. ಆಗಲೂ ನಾನು ಹೋಗುವವನೇ ಎಂದ ವ್ಯಕ್ತಿ. ಆಗ ಸಂತರು ಗಡಿಗೆ ಎಣ್ಣೆ, ದಿವಿಟಿಗೆ ಕೊಟ್ಟರು. ದಿವಿಟಿಗೆ ಹಚ್ಚಿಕೊಂಡು ಹೋಗು. ಇದರಲ್ಲಿನ ಎಣ್ಣೆ ಅರಣ್ಯದ ಆಚೆ ದಡ ಮುಟ್ಟುವರಿಗೆ ಮಾತ್ರ ಉರಿಯುತ್ತದೆ ಅಂತ ಉಪದೇಶಿಸಿ ಕಳಿಸಿದರು.

ಯುವಕ ಕಾಡಿನಲ್ಲಿಹೊರಟ. ಯುವಕನಿಗೆ ದಾರಿ ಒಂದು ಬದಿ ಒಂದು ಹಂಡೆ ಇತ್ತು. ಅದರಲ್ಲಿಬಂಗಾರದ ನಾಣ್ಯಗಳಿದ್ದವು. ಸಂತೋಷಿತನಾದ. ಸಂತರು ಹೇಳಿದ ಉಪದೇಶ ಮರೆತ. ಎಣ್ಣೆ ಗಡಗಿಯಲ್ಲಿಎಣ್ಣೆ ಕಡಿಮೆಯಾಗಿತ್ತು. ದೀಪದ ನಾಣ್ಯಗಳನ್ನು ಎಣಿಸಲು ಕುಳಿತ. ಎಣಿಸಿದ. ನಾಳೆ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿ ಮತ್ತೆ ಪ್ರಯಾಣ ಪ್ರಾರಂಬಿಸಿದ. ದೀಪಕ್ಕೆ ಎಣ್ಣೆ ಖಾಲಿಯಾಗಿತ್ತು. ಅರಣ್ಯದ ಆಚೆ ಇನ್ನೂ ಸಾಗಿರಲಿಲ್ಲ. ದೀಪ ಆರಿತು. ಕಾಡುಪ್ರಾಣಿಗಳಿಗೆ ಆಹಾರ ಆದ. ಇದರರ್ಥ ಹಿರಿಯರು, ಸಂತರ ಉಪದೇಶ ಮರೆಯಬಾರದು. ಉಪದೇಶ ಮರೆತು ಆಕರ್ಷಣೆಗೆ ಒಳಗಾಗಿ ಜೀವನ ಕಳೆದುಕೂಂಡ. ಮನುಷ್ಯನೇ, ಆಕರ್ಷಣೆಗೆ ಒಳಗಾಗದೆ ನಿನ್ನಷ್ಟಕ್ಕೆ ನೀನು ಇರು. ಒಳ್ಳೆಯದನ್ನು ಕೇಳು. ಒಳ್ಳೆಯದನ್ನು ನುಡಿ. ಜೀವನ ಸುಂದರ ಆಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ