ಧಾರವಾಡ: ಇಲ್ಲಿನ ಮಾಳಾಪುರ ರಸ್ತೆಯ ಡಾ. ಎಸ್.ಆರ್. ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿಧಾರವಾಡ ರಕ್ತನಿಧಿ ಕೇಂದ್ರ, ಡಾ. ಎಸ್.ಆರ್.ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಜನಾಂದೋಲನ ಟ್ರಸ್ಟ್ ಆಶ್ರಯಲ್ಲಿಭಾನುವಾರ ಉಚಿತ ರಕ್ತದ ಗುಂಪಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಂಠ ರಾಮನಗೌಡರ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸಿ ಹಾಗೂ ಮತ್ತೊಬ್ಬರಿಗೆ ರಕ್ತದಾನ ಮಾಡಲು ಪ್ರೇರೇಪಿಸಿ ಎಂದು ಹೇಳಿದರು. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿಜೀವರಕ್ಷಣೆಗಾಗಿ ತುರ್ತು ವೈದ್ಯಕೀಯ ಚಿಕಿತ್ಸಾ ಸೇವೆಗಳಿಗೆ ಹೆಚ್ಚೆಚ್ಚು ರಕ್ತದ ಅಗತ್ಯವಿರುವುದನ್ನು ಮನಗಂಡು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಿಂದ ಯುವಕರು ಸ್ವಯಂ ಪ್ರೇರಣೆಯಿಂದ ಇಂತಹ ಶಿಬಿರಗಳಲ್ಲಿಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿಸುಮಾರು 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಡಾ.ಪ್ರಶಾಂತ ರಾಮನಗೌಡರ, ಡಾ.ಪ್ರಕಾಶ, ಡಾ. ಚಿದಾನಂದ, ಡಾ. ವಾಣಿ, ಡಾ. ಸ್ಮಿತಾ, ಡಾ. ಸುಷ್ಮಾ, ಡಾ. ದಾಕ್ಷಾಯಿಣಿ, ರೋಹಿತ ಚವ್ಹಾಣ, ಫಿರೋಜ್ ಗೋಲಗೇರಿ, ಎಂ. ಹರ್ಷಾ, ಜನಾಂದೋಲನ ಟ್ರಸ್ಟ್ ಖಜಾಂಚಿ ಪ್ರಸನ್ನಕುಮಾರ ಹಿರೇಮಠ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.
ಶಿಬಿರಕ್ಕೆ ಚಾಲನೆ ನೀಡಿದ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಂಠ ರಾಮನಗೌಡರ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸಿ ಹಾಗೂ ಮತ್ತೊಬ್ಬರಿಗೆ ರಕ್ತದಾನ ಮಾಡಲು ಪ್ರೇರೇಪಿಸಿ ಎಂದು ಹೇಳಿದರು. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿಜೀವರಕ್ಷಣೆಗಾಗಿ ತುರ್ತು ವೈದ್ಯಕೀಯ ಚಿಕಿತ್ಸಾ ಸೇವೆಗಳಿಗೆ ಹೆಚ್ಚೆಚ್ಚು ರಕ್ತದ ಅಗತ್ಯವಿರುವುದನ್ನು ಮನಗಂಡು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಿಂದ ಯುವಕರು ಸ್ವಯಂ ಪ್ರೇರಣೆಯಿಂದ ಇಂತಹ ಶಿಬಿರಗಳಲ್ಲಿಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿಸುಮಾರು 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಡಾ.ಪ್ರಶಾಂತ ರಾಮನಗೌಡರ, ಡಾ.ಪ್ರಕಾಶ, ಡಾ. ಚಿದಾನಂದ, ಡಾ. ವಾಣಿ, ಡಾ. ಸ್ಮಿತಾ, ಡಾ. ಸುಷ್ಮಾ, ಡಾ. ದಾಕ್ಷಾಯಿಣಿ, ರೋಹಿತ ಚವ್ಹಾಣ, ಫಿರೋಜ್ ಗೋಲಗೇರಿ, ಎಂ. ಹರ್ಷಾ, ಜನಾಂದೋಲನ ಟ್ರಸ್ಟ್ ಖಜಾಂಚಿ ಪ್ರಸನ್ನಕುಮಾರ ಹಿರೇಮಠ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.