ಆ್ಯಪ್ನಗರ

ರಕ್ತದಾನ ಮಾಡಿ ಜೀವ ಉಳಿಸಿ

ಧಾರವಾಡ: ಇಲ್ಲಿನ ಮಾಳಾಪುರ ರಸ್ತೆಯ ಡಾ. ಎಸ್‌.ಆರ್‌. ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿಧಾರವಾಡ ರಕ್ತನಿಧಿ ಕೇಂದ್ರ, ಡಾ. ಎಸ್‌.ಆರ್‌.ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಜನಾಂದೋಲನ ಟ್ರಸ್ಟ್‌ ಆಶ್ರಯಲ್ಲಿಭಾನುವಾರ ಉಚಿತ ರಕ್ತದ ಗುಂಪಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.

Vijaya Karnataka 11 May 2020, 5:00 am
ಧಾರವಾಡ: ಇಲ್ಲಿನ ಮಾಳಾಪುರ ರಸ್ತೆಯ ಡಾ. ಎಸ್‌.ಆರ್‌. ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿಧಾರವಾಡ ರಕ್ತನಿಧಿ ಕೇಂದ್ರ, ಡಾ. ಎಸ್‌.ಆರ್‌.ರಾಮನಗೌಡರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಜನಾಂದೋಲನ ಟ್ರಸ್ಟ್‌ ಆಶ್ರಯಲ್ಲಿಭಾನುವಾರ ಉಚಿತ ರಕ್ತದ ಗುಂಪಿನ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
Vijaya Karnataka Web donate blood and save lives
ರಕ್ತದಾನ ಮಾಡಿ ಜೀವ ಉಳಿಸಿ


ಶಿಬಿರಕ್ಕೆ ಚಾಲನೆ ನೀಡಿದ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಂಠ ರಾಮನಗೌಡರ ಮಾತನಾಡಿ, ರಕ್ತದಾನ ಮಾಡಿ ಜೀವ ಉಳಿಸಿ ಹಾಗೂ ಮತ್ತೊಬ್ಬರಿಗೆ ರಕ್ತದಾನ ಮಾಡಲು ಪ್ರೇರೇಪಿಸಿ ಎಂದು ಹೇಳಿದರು. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿಜೀವರಕ್ಷಣೆಗಾಗಿ ತುರ್ತು ವೈದ್ಯಕೀಯ ಚಿಕಿತ್ಸಾ ಸೇವೆಗಳಿಗೆ ಹೆಚ್ಚೆಚ್ಚು ರಕ್ತದ ಅಗತ್ಯವಿರುವುದನ್ನು ಮನಗಂಡು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರಿಂದ ಯುವಕರು ಸ್ವಯಂ ಪ್ರೇರಣೆಯಿಂದ ಇಂತಹ ಶಿಬಿರಗಳಲ್ಲಿಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿಸುಮಾರು 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಡಾ.ಪ್ರಶಾಂತ ರಾಮನಗೌಡರ, ಡಾ.ಪ್ರಕಾಶ, ಡಾ. ಚಿದಾನಂದ, ಡಾ. ವಾಣಿ, ಡಾ. ಸ್ಮಿತಾ, ಡಾ. ಸುಷ್ಮಾ, ಡಾ. ದಾಕ್ಷಾಯಿಣಿ, ರೋಹಿತ ಚವ್ಹಾಣ, ಫಿರೋಜ್‌ ಗೋಲಗೇರಿ, ಎಂ. ಹರ್ಷಾ, ಜನಾಂದೋಲನ ಟ್ರಸ್ಟ್‌ ಖಜಾಂಚಿ ಪ್ರಸನ್ನಕುಮಾರ ಹಿರೇಮಠ ಮತ್ತು ಆಸ್ಪತ್ರೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ