ರೈಲ್ವೆ ಜಾಲ ಖಾಸಗಿಯವರಿಗೆ ನೀಡಬೇಡಿ
ಧಾರವಾಡ: ಭಾರತೀಯ ರೈಲ್ವೆಯ ಜಾಲ ಬಳಸಿಕೊಂಡು ಖಾಸಗಿ ಹೂಡಿಕೆದಾರರು ಪ್ರಯಾಣಿಕ ರೈಲುಗಳನ್ನು ಓಡಿಸಲು ಕೇಂದ್ರ ಸರಕಾರ ಅವಕಾಶ ನೀಡುವ ನಿರ್ಧಾರವನ್ನು ರಾಷ್ಟ್ರೀಯ ಅಪರಾಧ, ಭ್ರಷ್ಟಾಚಾರ ನಿಯಂತ್ರಣ ಮತ್ತು ಮಾನವ ಹಕ್ಕುಗಳ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ರವಿ ಹಂದಿಗೋಳ ಖಂಡಿಸಿದ್ದಾರೆ.
Vijaya Karnataka 11 Jul 2020, 5:00 am
ಧಾರವಾಡ: ಭಾರತೀಯ ರೈಲ್ವೆಯ ಜಾಲ ಬಳಸಿಕೊಂಡು ಖಾಸಗಿ ಹೂಡಿಕೆದಾರರು ಪ್ರಯಾಣಿಕ ರೈಲುಗಳನ್ನು ಓಡಿಸಲು ಕೇಂದ್ರ ಸರಕಾರ ಅವಕಾಶ ನೀಡುವ ನಿರ್ಧಾರವನ್ನು ರಾಷ್ಟ್ರೀಯ ಅಪರಾಧ, ಭ್ರಷ್ಟಾಚಾರ ನಿಯಂತ್ರಣ ಮತ್ತು ಮಾನವ ಹಕ್ಕುಗಳ ರಕ್ಷಣಾ ದಳದ ರಾಷ್ಟ್ರೀಯ ಅಧ್ಯಕ್ಷ ರವಿ ಹಂದಿಗೋಳ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತೀಯ ರೈಲ್ವೆ ದೇಶವನ್ನು ಒಂದುಗೂಡಿಸುವ ಮತ್ತು ಕೋಟ್ಯಂತರ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಅತ್ಯಂತ ಮಹತ್ವದ ಜಾಲವಾಗಿದೆ. ಕೋಟ್ಯಂತರ ಜನರ ಜೀವನೋಪಾಯದ ಮೂಲವಾಗಿದೆ. ಇದರ ಖಾಸಗೀಕರಣ ಭಾರತದ ಸ್ವಾವಲಂಬನೆಯ ಆಧಾರವನ್ನೇ ಶಿಥಿಲಗೊಳಿಸಲಿದೆ. ಭಾರತೀಯ ರೈಲ್ವೆಯ ಖಾಸಗೀಕರಣದಿಂದ ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತಿವೆ ಎಂಬ ಸರಕಾರದ ತರ್ಕ ಸುಳ್ಳಿನಿಂದ ಕೂಡಿದೆ. ಬದಲಾಗಿ ಇಂತಹ ಖಾಸಗೀಕರಣ ಅನುಭವಗಳು ತದ್ವಿರುದ್ಧವಾಗಿವೆ. ವಾಸ್ತವವಾಗಿ ಖಾಸಗೀಕರಣ ದೊಡ್ಡ ಪ್ರಮಾಣದಲ್ಲಿಉದ್ಯೋಗ ನಷ್ಟಗಳನ್ನು ಉಂಟು ಮಾಡುತ್ತದೆ. ಕೋಟ್ಯಂತರ ನೌಕರರಲ್ಲಿಅಭದ್ರತೆ ಉಂಟು ಮಾಡುತ್ತದೆ. ಹೀಗಾಗಿ ಸರಕಾರ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಹಂದಿಗೋಳ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತೀಯ ರೈಲ್ವೆ ದೇಶವನ್ನು ಒಂದುಗೂಡಿಸುವ ಮತ್ತು ಕೋಟ್ಯಂತರ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಅತ್ಯಂತ ಮಹತ್ವದ ಜಾಲವಾಗಿದೆ. ಕೋಟ್ಯಂತರ ಜನರ ಜೀವನೋಪಾಯದ ಮೂಲವಾಗಿದೆ. ಇದರ ಖಾಸಗೀಕರಣ ಭಾರತದ ಸ್ವಾವಲಂಬನೆಯ ಆಧಾರವನ್ನೇ ಶಿಥಿಲಗೊಳಿಸಲಿದೆ. ಭಾರತೀಯ ರೈಲ್ವೆಯ ಖಾಸಗೀಕರಣದಿಂದ ಉದ್ಯೋಗಾವಕಾಶಗಳು ನಿರ್ಮಾಣವಾಗುತ್ತಿವೆ ಎಂಬ ಸರಕಾರದ ತರ್ಕ ಸುಳ್ಳಿನಿಂದ ಕೂಡಿದೆ. ಬದಲಾಗಿ ಇಂತಹ ಖಾಸಗೀಕರಣ ಅನುಭವಗಳು ತದ್ವಿರುದ್ಧವಾಗಿವೆ. ವಾಸ್ತವವಾಗಿ ಖಾಸಗೀಕರಣ ದೊಡ್ಡ ಪ್ರಮಾಣದಲ್ಲಿಉದ್ಯೋಗ ನಷ್ಟಗಳನ್ನು ಉಂಟು ಮಾಡುತ್ತದೆ. ಕೋಟ್ಯಂತರ ನೌಕರರಲ್ಲಿಅಭದ್ರತೆ ಉಂಟು ಮಾಡುತ್ತದೆ. ಹೀಗಾಗಿ ಸರಕಾರ ತನ್ನ ನಿರ್ಧಾರವನ್ನು ಬದಲಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಹಂದಿಗೋಳ ಅವರು ಆಗ್ರಹಿಸಿದ್ದಾರೆ.