ಆ್ಯಪ್ನಗರ

ಟೋಲ್‌ ಕಾಮಗಾರಿ ಆರಂಭ ಬೇಡ

ಕುಂದಗೋಳ: ಮಳೆಯಿಂದ ಸಂತ್ರಸ್ತರಾದವರಿಗೆ ಪರಿಹಾರ, ನರೇಗಾ ಯೋಜನೆಯಡಿ ರೈತರಿಗೆ ಕೆಲಸ ನೀಡಬೇಕು ಮತ್ತು ಈಗಾಗಲೇ ನಿರ್ಧರಿತ ಹುಬ್ಬಳ್ಳಿ-ಲಕ್ಷೆತ್ರ್ಮೕಶ್ವರ ರಸ್ತೆಗೆ ಶರೇವಾಡ ಹತ್ತಿರ ನಿರ್ಮಿಸಲು ಉದ್ದೇಶಿಸಲಾಗಿರುವ ಟೋಲ್‌ ಕಾಮಗಾರಿ ಆರಂಭಿಸಕೂಡದು ಎಂದು ಆಗ್ರಹಿಸಿ ತಾಲೂಕು ಕರವೇ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ ಕಚೇರಿ ಅವರಣದಲ್ಲಿಸೋಮವಾರ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.

Vijaya Karnataka 26 Nov 2019, 5:00 am
ಕುಂದಗೋಳ: ಮಳೆಯಿಂದ ಸಂತ್ರಸ್ತರಾದವರಿಗೆ ಪರಿಹಾರ, ನರೇಗಾ ಯೋಜನೆಯಡಿ ರೈತರಿಗೆ ಕೆಲಸ ನೀಡಬೇಕು ಮತ್ತು ಈಗಾಗಲೇ ನಿರ್ಧರಿತ ಹುಬ್ಬಳ್ಳಿ-ಲಕ್ಷೆತ್ರ್ಮೕಶ್ವರ ರಸ್ತೆಗೆ ಶರೇವಾಡ ಹತ್ತಿರ ನಿರ್ಮಿಸಲು ಉದ್ದೇಶಿಸಲಾಗಿರುವ ಟೋಲ್‌ ಕಾಮಗಾರಿ ಆರಂಭಿಸಕೂಡದು ಎಂದು ಆಗ್ರಹಿಸಿ ತಾಲೂಕು ಕರವೇ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ ಕಚೇರಿ ಅವರಣದಲ್ಲಿಸೋಮವಾರ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.
Vijaya Karnataka Web dont start a toll
ಟೋಲ್‌ ಕಾಮಗಾರಿ ಆರಂಭ ಬೇಡ


ಬೆಳೆ ಸಾಕಷ್ಟು ನಾಶವಾಗಿದ್ದು ಅದಕ್ಕೆ ತಕ್ಕ ಪರಿಹಾರ ಇನ್ನೂ ಬಿಡುಗಡೆಯಾಗದೆ ರೈತರನ್ನು ಸತಾಯಿಸಲಾಗುತ್ತಿದ್ದು, ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕು. ತಾಲೂಕಿನಲ್ಲಿ5 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿದ್ದು, 5 ಸಾವಿರ ಮನೆಕುಟುಂಬಗಳಲ್ಲಿ ಕೇವಲ 3 ಸಾವಿರ ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಬೇಕು. ಹುಬ್ಬಳ್ಳಿ-ಲಕ್ಷೆತ್ರ್ಮೕಶ್ವರ ರಸ್ತೆಗೆ ಶರೇವಾಡ ಹತ್ತಿರ ನಿರ್ಮಿಸಲ್ಪಡಬೇಕೆನ್ನುತ್ತಿರುವ ಟೋಲ್‌ ಕಾಮಗಾರಿ ಆರಂಭಿಸಕೂಡದು ಎಂದು ಮನವಿಯಲ್ಲಿತಿಳಿಸಲಾಗಿದೆ. ಈ ಎಲ್ಲಮನವಿಗಳಿಗೆ ಕೂಡಲೇ ಸ್ಪಂದಿಸದಿದ್ದರೆ ತಾಲೂಕಿನಲ್ಲಿಉಗ್ರಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಕಲ್ಲಪ್ಪ ಹರಕುಣಿ, ಅಡಿವೆಪ್ಪ ಹೆಬಸೂರ, ರವಿ ಶಿರಸಂಗಿ, ಶಂಕರಗೌಡ ದೊಡ್ಡಮನಿ, ಮಂಜುನಾಥ ಹಾದಿಮನಿ, ಮುರುಗೇಶ ಸರಾವರಿ, ಅಡಿವೆಪ್ಪ ತಳವಾರ ನೂರಸಾಬ ನದಾಫ, ಅಬ್ದುಲ್‌ ಗಣಿ, ನಾರಾಯಣ ಅಂಗಡಿ, ಪ್ರದೀಪ ಡೊಳ್ಳಿನ, ಮುತ್ತು ಗರಡ್ಡಿ, ಲಿಂಗರಾಜ ಕೂಬಿಹಾಳ, ಹನಮಂತಪ್ಪ ಬಾರಕೇರ, ಮಂಜು ಶಿಶುನಾಳ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ