ಆ್ಯಪ್ನಗರ

ಮಹಾ ಮಾನತಾವಾದಿ ಡಾ.ಅಂಬೇಡ್ಕರ್‌

ಅಣ್ಣಿಗೇರಿ : ಸಮಾಜ ಸುಧಾರಣೆಯಲ್ಲಿ ಮಹತ್ವ ಸ್ಥಾನವನ್ನು ವಹಿಸಿದ್ದ ಬುದ್ಧ, ಬಸವರ ಸಾಲಿನಲ್ಲಿ ಮಹಾ ಮಾನತಾವಾದಿಯಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಹೊರಹೊಮ್ಮಿದ್ದಾರೆ. ಸಾಧಕರೆಲ್ಲ ಮನುಕುಲದ ಉದ್ಧಾರಕ್ಕಾಗಿಯೇ ಬದುಕಿ ಬಾಳಿದವರು ಎಂದು ಗದುಗಿನ ಪ್ರೊ.ಶಿವಾನಂದ ಗೋಗೇರಿ ಹೇಳಿದರು.

Vijaya Karnataka 6 Aug 2019, 5:00 am
ಅಣ್ಣಿಗೇರಿ : ಸಮಾಜ ಸುಧಾರಣೆಯಲ್ಲಿ ಮಹತ್ವ ಸ್ಥಾನವನ್ನು ವಹಿಸಿದ್ದ ಬುದ್ಧ, ಬಸವರ ಸಾಲಿನಲ್ಲಿ ಮಹಾ ಮಾನತಾವಾದಿಯಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ಹೊರಹೊಮ್ಮಿದ್ದಾರೆ. ಸಾಧಕರೆಲ್ಲ ಮನುಕುಲದ ಉದ್ಧಾರಕ್ಕಾಗಿಯೇ ಬದುಕಿ ಬಾಳಿದವರು ಎಂದು ಗದುಗಿನ ಪ್ರೊ.ಶಿವಾನಂದ ಗೋಗೇರಿ ಹೇಳಿದರು.
Vijaya Karnataka Web dr ambedkar is a great humanist
ಮಹಾ ಮಾನತಾವಾದಿ ಡಾ.ಅಂಬೇಡ್ಕರ್‌


ಸ್ಥಳೀಯ ಬಸವ ಕೇಂದ್ರ ವತಿಯಿಂದ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ನಿಮಿತ್ತವಾಗಿ ಆ.13ರ ವರೆಗೆ ನಡೆಯುವ ಡಾ.ಅಂಬೇಡ್ಕರ್‌ ಪುರಾಣ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.

ಪುಣ್ಯಪುರಷರ ಜೀವನ ಚರಿತ್ರೆಯನ್ನು ಇಂತಹ ಪುರಾಣಗಳ ಮೂಲಕ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ದೇಶಕ್ಕಾಗಿ ಸಮಾಜಕ್ಕಾಗಿ ನೀಡಿರುವ ಕೊಡುಗೆ ಕುರಿತು ತಿಳಿಸಿದಾಗ ನಾವು ಅವರಂತೆ ಪ್ರಯತ್ನ ಶೀಲರಾಗೋಣ ಎಂಬ ಭಾವನೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಚಿಗುರೊಡೆಯಲಿ ಎನ್ನುವ ಉದ್ದೇಶವಾಗಿದೆ ಎಂದು ತಿಳಿಸಿದರು.

ಭಾರತರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟ, ಸಮಾಜದಲ್ಲಿನ ಅಸಮಾನತೆ ಮತ್ತು ತಾರತಮ್ಯವನ್ನು ತಡೆಗಟ್ಟುವುದಕ್ಕಾಗಿ ಶಿಕ್ಷ ಣ ಎಲ್ಲರಿಗೂ ದೊರೆಕಿಸಿಕೊಡಲು ಶ್ರಮಿಸಿದ್ದಾರೆ. ಇಂದೂ ಎಲ್ಲರಿಗೂ ಸಮಾನತೆಯನ್ನು ಒದಗಿಸಿಕೊಟ್ಟ ಮಹಾ ಮಾನತಾವಾದಿಯಾಗಿದ್ದಾರೆ. ಅಂತಹವರ ಪುರಾಣವನ್ನು ಬರೆಸಿದ ಗದುಗಿನ ತೋಂಟದಾರ್ಯ ಜಗದ್ದುರು ಲಿಂ.ಸಿದ್ದಲಿಂಗಸ್ವಾಮಿಯವರಿಗೆ ನಾವೇಲ್ಲರೂ ಕೃತಜ್ಞತೆಯನ್ನು ಸಲ್ಲಿಸಬೇಕೆಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿಯ ಪ್ರಹ್ಲಾದ ಬೆಳಗಲಿ ಪುರಾಣಕ್ಕೆ ಚಾಲನೆ ನೀಡಿದರು. ಬಸವಕೇಂದ್ರದ ಎಸ್‌.ಎಸ್‌.ಹರ್ಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಾ ಲಕ್ಷ್ಮೇಶ್ವರ ಹಾಡಿದರು. ನಿಂಗಮ್ಮ ಹೂಗಾರ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಡಾ.ಅಂಬೇಡ್ಕರ್‌ ಜೀವನ ಚರಿತ್ರೆಯ ಪುಸ್ತಕಗಳನ್ನು ನೀಡಲಾಯಿತು. ಶಿಕ್ಷ ಕಿ ವೇದವತಿ ಕಟ್ಟಿ ನಿರೂಪಿಸಿದರು. ಅನ್ವರ ಹುಬ್ಬಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ