ಧಾರವಾಡ : ನಗರದ ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರಮಟ್ಟದ ಬ್ಯಾಪ್ಟೈಸರ್ ನಾಟಕೋತ್ಸವ-2019ರ ಸ್ಪರ್ಧೆಯಲ್ಲಿ ಜಿ.ಪಿ.ರಾಜರತ್ನಂ ರಚಿಸಿರುವ ನಾಟಕ ಗಂಡುಗೊಡಲಿ ಹಾಗೂ ಗುಲಾಬಿ ಗ್ಯಾಂಗ್ ಬೀದಿ ನಾಟಕ ಪ್ರದರ್ಶಿಸಿ ಅತ್ಯುತ್ತಮ ತಂಡ ಎಂಬ ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ.ವಜ್ರಕುಮಾರ, ವಿತ್ತಾಧಿಕಾರಿ ಡಾ. ಅಜಿತಪ್ರಸಾದ, ಪ್ರೊ. ಸೂರಜ್ ಜೈನ, ಡಾ. ಜಿ.ಕೃಷ್ಣಮೂರ್ತಿ, ಲಲಿತಕಲಾ ಸಂಘದ ಕಾರ್ಯಾಧ್ಯಕ್ಷ ಪ್ರೊ. ಟಿ.ಎಂ. ಶ್ರೀಧರ, ಸಂಯೋಜಕ ಪ್ರೊ. ಮಂಜುನಾಥ ಚವಡಣ್ಣವರ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರಮಟ್ಟದ ಬ್ಯಾಪ್ಟೈಸರ್ ನಾಟಕೋತ್ಸವ-2019ರ ಸ್ಪರ್ಧೆಯಲ್ಲಿ ಜಿ.ಪಿ.ರಾಜರತ್ನಂ ರಚಿಸಿರುವ ನಾಟಕ ಗಂಡುಗೊಡಲಿ ಹಾಗೂ ಗುಲಾಬಿ ಗ್ಯಾಂಗ್ ಬೀದಿ ನಾಟಕ ಪ್ರದರ್ಶಿಸಿ ಅತ್ಯುತ್ತಮ ತಂಡ ಎಂಬ ಪ್ರಶಸ್ತಿ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಜನತಾ ಶಿಕ್ಷ ಣ ಸಮಿತಿಯ ಕಾರ್ಯದರ್ಶಿ ಡಾ. ನ.ವಜ್ರಕುಮಾರ, ವಿತ್ತಾಧಿಕಾರಿ ಡಾ. ಅಜಿತಪ್ರಸಾದ, ಪ್ರೊ. ಸೂರಜ್ ಜೈನ, ಡಾ. ಜಿ.ಕೃಷ್ಣಮೂರ್ತಿ, ಲಲಿತಕಲಾ ಸಂಘದ ಕಾರ್ಯಾಧ್ಯಕ್ಷ ಪ್ರೊ. ಟಿ.ಎಂ. ಶ್ರೀಧರ, ಸಂಯೋಜಕ ಪ್ರೊ. ಮಂಜುನಾಥ ಚವಡಣ್ಣವರ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.