ಆ್ಯಪ್ನಗರ

ನಾಟಕ ವಾಚನ ಸಪ್ತಾಹ, ಸಂವಾದ

ಧಾರವಾಡ : ನಗರದ ಜಿ. ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಅಭಿನಯ ಭಾರತಿ ಮತ್ತು ಸ್ನೇಹ ಸಿಂಚನ ಸಂಘಟನೆಗಳ ಆಶ್ರಯದಲ್ಲಿ ಡಾ.ವಾಮನ ಬೇಂದ್ರೆ, ಜಿ.ಬಿ.ಜೋಶಿ ಅವರ ಜನ್ಮದಿನಾಚರಣೆ ಹಾಗೂ ಕೀರ್ತನಾಥ ಕುರ್ತಕೋಟಿಯವರ ಪುಣ್ಯಸ್ಮರಣೆ ನಿಮಿತ್ತ 'ಕೇಳು ನಾಟಕಪ್ರಿಯ' ನಾಟಕ ವಾಚನ ಸಪ್ತಾಹ ಮತ್ತು ಸಂವಾದ ಕಾರ್ಯಕ್ರಮಕ್ಕೆ ಭಾನುವಾರ ಮನೋಹರ ಗ್ರಂಥ ಮಾಲೆ ಅಟ್ಟದಲ್ಲಿ ಚಾಲನೆ ನೀಡಲಾಯಿತು.

Vijaya Karnataka 30 Jul 2019, 5:00 am
ಧಾರವಾಡ : ನಗರದ ಜಿ. ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಅಭಿನಯ ಭಾರತಿ ಮತ್ತು ಸ್ನೇಹ ಸಿಂಚನ ಸಂಘಟನೆಗಳ ಆಶ್ರಯದಲ್ಲಿ ಡಾ.ವಾಮನ ಬೇಂದ್ರೆ, ಜಿ.ಬಿ.ಜೋಶಿ ಅವರ ಜನ್ಮದಿನಾಚರಣೆ ಹಾಗೂ ಕೀರ್ತನಾಥ ಕುರ್ತಕೋಟಿಯವರ ಪುಣ್ಯಸ್ಮರಣೆ ನಿಮಿತ್ತ 'ಕೇಳು ನಾಟಕಪ್ರಿಯ' ನಾಟಕ ವಾಚನ ಸಪ್ತಾಹ ಮತ್ತು ಸಂವಾದ ಕಾರ್ಯಕ್ರಮಕ್ಕೆ ಭಾನುವಾರ ಮನೋಹರ ಗ್ರಂಥ ಮಾಲೆ ಅಟ್ಟದಲ್ಲಿ ಚಾಲನೆ ನೀಡಲಾಯಿತು.
Vijaya Karnataka Web DRW-28RANGA05
ಧಾರವಾಡ ಮನೋಹರ ಗ್ರಂಥ ಮಾಲೆ ಅಟ್ಟದಲ್ಲಿ ನಡೆದ 'ಕೇಳು ನಾಟಕಪ್ರಿಯ ಕಾರ್ಯಕ್ರಮ'ದಲ್ಲಿ ಕಲಾವಿದ ಬಸವರಾಜ ಮಲ್ಲಿಗವಾಡ ಡಾ. ವಾಮನ ಬೇಂದ್ರೆ ಅವರ ವಿ.ವಿ.ಶಿರವಾಡಕರ ಅನುವಾದಿತ ನಟ ಸಾಮ್ರಾಟ ನಾಟಕವನ್ನು ವಾಚಿಸಿದರು.


ಈ ವೇಳೆ ಡಾ. ವಾಮನ ಬೇಂದ್ರೆಯವರ 86ನೆಯ ಜನ್ಮದಿನದ ಅಂಗವಾಗಿ ಡಾ.ಶಶಿಧರ ನರೇಂದ್ರ ಅವರು ವಾಮನ ಬೇಂದ್ರೆಯವರ ಸಾಧನೆ ಮತ್ತು ಸಾಹಿತ್ಯ ಕೃಷಿ ಕುರಿತು ತಿಳಿಸಿದರು. ಇದೇ ವೇಳೆ ಕಲಾವಿದ ಬಸವರಾಜ ಮಲ್ಲಿಗವಾಡ ಡಾ. ವಾಮನ ಬೇಂದ್ರೆ ಅವರ ವಿ.ವಿ.ಶಿರವಾಡಕರ ಅನುವಾದಿತ ನಟ ಸಾಮ್ರಾಟ ನಾಟಕ ವಾಚಿಸಿದರು.

ನಂತರ ನಡೆದ ಸಂವಾದದಲ್ಲಿ ಡಾ.ರಮಾಕಾಂತ ಜೋಶಿ, ಇಂದುಹಾಸ ಜೇವೂರ, ವಿಠ್ಠಲ ಕೊಪ್ಪದ, ಜ್ಯೋತಿ ದೀಕ್ಷಿತ, ಲಕ್ಷ್ಮೀಕಾಂತ ಇಟ್ನಾಳ, ಸನ್ಮತಿ ಅಂಗಡಿ, ವಿಷಯಾ ಜೇವೂರ, ಜಯತೀರ್ಥ ಜಹಗೀರದಾರ, ಹ.ವೆಂ.ಕಾಖಂಡಕಿ, ಮಹಾಂತೇಶ ಹವಳಣ್ಣವರ, ಉಮೇಶ ನಾಯಕ, ಆಶಾ ಸೈಯ್ಯದ, ಎಸ್‌.ಕೆ. ಪುರೋಹಿತ, ಆರತಿ ದೇವಶಿಖಾಮಣಿ, ಸುನಿತಾ ಸೇರಿದಂದೆ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ